Select Your Language

Notifications

webdunia
webdunia
webdunia
webdunia

ಸರಿಗಮಪ ಲಿಟಲ್ ಚಾಂಪ್ಸ್ 14 ರಲ್ಲಿ ರಾಜೇಶ್ ಕೃಷ್ಣನ್ ಸ್ಥಾನಕ್ಕೆ ಬರಲಿರುವ ತೀರ್ಪುಗಾರರು ಯಾರು ಗೊತ್ತಾ?

ಸರಿಗಮಪ ಲಿಟಲ್ ಚಾಂಪ್ಸ್ 14 ರಲ್ಲಿ ರಾಜೇಶ್ ಕೃಷ್ಣನ್ ಸ್ಥಾನಕ್ಕೆ ಬರಲಿರುವ ತೀರ್ಪುಗಾರರು ಯಾರು ಗೊತ್ತಾ?
ಬೆಂಗಳೂರು , ಶುಕ್ರವಾರ, 24 ನವೆಂಬರ್ 2017 (11:08 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ 13 ಕಂತು ಮುಗಿಸಿರುವ ಸರಿಗಮಪ ಲಿಟಲ್ ಚಾಂಪ್ಸ್ ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್ ತೀರ್ಪುಗಾರರಾಗಿದ್ದರು. ಆದರೆ 14 ನೇ ಕಂತಿಗೆ ಅವರು ತೀರ್ಪುಗಾರರಾಗಿರುವುದಿಲ್ಲ. ಅವರ ಬದಲಿಗೆ ಆ ಸ್ಥಾನಕ್ಕೆ ಬರುವವರು ಯಾರು ಗೊತ್ತಾ?
 

ಮೊದಲಿಗೆ ರಾಜೇಶ್ ಕೃಷ್ಣನ್ ಬದಲಿಗೆ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಬರುತ್ತಾರೆಂಬ ಸುದ್ದಿಗಳಿತ್ತು. ಆದರೆ ಅದೆಲ್ಲಾ ವದಂತಿಗಳಿಗೆ ತೆರೆ ಬಿದ್ದಿದ್ದು, ರಾಜೇಶ್ ಸ್ಥಾನಕ್ಕೆ ನಾದಬ್ರಹ್ಮ ಹಂಸಲೇಖಾ ತೀರ್ಪುಗಾರರಾಗುವುದು ಖಚಿತವಾಗಿದೆ.

ಹಂಸಲೇಖಾ ಇದಕ್ಕೂ ಮೊದಲೂ ಸರಿಗಮಪ ಕಾರ್ಯಕ್ರಮದ ತೀರ್ಪುಗಾರರಾಗಿ ಕೆಲಸ ಮಾಡಿದ್ದರು. ಅಷ್ಟೇ ಅಲ್ಲದೆ, ಪ್ರತೀ ಕಂತಿನ ಫೈನಲ್ ಎಪಿಸೋಡ್ ನಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಇನ್ನು ಮುಂದೆ ಪ್ರತೀ ಎಪಿಸೋಡ್ ನಲ್ಲೂ ಅವರೇ ಇರಲಿದ್ದಾರೆ.

ರಾಜೇಶ್ ಕೃಷ್ಣನ್ ಈ ಕಂತಿನಲ್ಲಿ ಹೊರಗುಳಿದಿರುವುದು ಅವರ ಅಭಿಮಾನಿಗಳಿಗೆ ತೀವ್ರ ಬೇಸರ ಉಂಟು ಮಾಡಿದೆ. ಇವರ ಹೊರತಾಗಿ ವಿಜಯ್ ಪ್ರಕಾಶ್ ಮತ್ತು ಅರ್ಜುನ್ ಜನ್ಯಾ ತೀರ್ಪುಗಾರರಾಗಿ ಮುಂದುವರಿಯಲಿದ್ದು, ಅನುಶ್ರೀ ನಿರೂಪಿಸಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರಮ್ಯಾಗೆ ಮದರ್ ಥೆರೇಸಾ ಅವಾರ್ಡ್