Publish Date: Tue, 16 Mar 2021 (09:43 IST)
Updated Date: Tue, 16 Mar 2021 (09:44 IST)
ಬೆಂಗಳೂರು: ಮೈಸೂರಿನಲ್ಲಿ ಮಾರ್ಚ್ 20 ರಂದು ನಡೆಯಬೇಕಿದ್ದ ಯುವರತ್ನ ಪ್ರಿ ರಿಲೀಸ್ ಈವೆಂಟ್ ನ್ನು ರದ್ದು ಮಾಡಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣದ ಮೂಲಕ ಪವರ್ ಸ್ಟಾರ್ ಅಪ್ಪು ಅಭಿಮಾನಿಗಳು ಹೊಂಬಾಳೆ ಫಿಲಂಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವರತ್ನವನ್ನು ಬೇರೆ ಲೆವೆಲ್ ನಲ್ಲಿಯೇ ಬಿಡುಗಡೆ ಮಾಡುತ್ತೇವೆ ಎಂದು ಹೇಳಿ ಈ ರೀತಿ ದಿಡೀರ್ ಆಗಿ ಕಾರ್ಯಕ್ರಮ ರದ್ದು ಮಾಡಿರುವುದೇಕೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂರು ದಿನಗಳಲ್ಲಿ ಎಷ್ಟು ಜಿಲ್ಲೆ ಸುತ್ತಲು ಸಾಧ್ಯ? ಕೊನೆಗೆ ಸರಿಯಾದ ಪ್ರಚಾರವಿಲ್ಲದೇ ಚಿತ್ರ ಬಿಡುಗಡೆ ಮಾಡಿದಂತಾಗುತ್ತದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಒಂದು ಜಿಲ್ಲೆಗೆ ಪ್ರಿ ರಿಲೀಸ್ ಕಾರ್ಯಕ್ರಮ ಸೀಮಿತಗೊಳಿಸುವ ಬದಲು ಎಲ್ಲಾ ಜಿಲ್ಲೆಗಳ ಪ್ರವಾಸ ಮಾಡಿ ಸಿನಿಮಾ ಪ್ರಚಾರ ಮಾಡಲು ಚಿತ್ರತಂಡ ದಿಡೀರ್ ಆಗಿ ನಿರ್ಧರಿಸಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.