Webdunia - Bharat's app for daily news and videos

Install App

ಸೋನಲ್ ಜೊತೆ ನನ್ನ ಮದುವೆ ಎಂದ ತರುಣ್ ಸುಧೀರ್ ಗೆ ಅವರು ಬರ್ತಾರಾ ಎಂದು ಕೇಳ್ತಿದ್ದಾರೆ ಫ್ಯಾನ್ಸ್

Krishnaveni K
ಮಂಗಳವಾರ, 23 ಜುಲೈ 2024 (10:47 IST)
ಬೆಂಗಳೂರು: ಸ್ಯಾಂಡಲ್ ವುಡ್ ನಿರ್ದೆಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮಾಂಥೆರೊ ನಿನ್ನೆಯಷ್ಟೇ ಅಧಿಕೃತವಾಗಿ ತಮ್ಮ ಮದುವೆ ಸುದ್ದಿಯನ್ನು ಹೊರಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರು ಪ್ರಕಟಿಸಿರುವ ವಿಡಿಯೋಗೆ ಈಗ ಸಾಕಷ್ಟು ಕಾಮೆಂಟ್ ಗಳು ಹರಿದುಬರುತ್ತಿವೆ.

ಅದರಲ್ಲೂ ಹೆಚ್ಚಿನವರು ಕೇಳುತ್ತಿರುವ ಒಂದೇ ಪ್ರಶ್ನೆ ಎಂದರೆ ಅವರು ಬರ್ತಾರಾ ಎಂದು. ಇಲ್ಲಿ ಅವರು ಎಂದರೆ ಬೇರೆ ಯಾರೂ ಅಲ್ಲ ಡಿ ಬಾಸ್. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಮದುವೆ ವೇಳೆಗೆ ಬಿಡುಗಡೆಯಾಗಿ ಜೈಲಿನಿಂದ ಹೊರಬರಬಹುದೇ ಎಂಬ ಆಶಾಭಾವನೆ ಅಭಿಮಾನಿಗಳದ್ದು.

ತಮ್ಮ ಮದುವೆ ಸುದ್ದಿ ಹೊರಹಾಕುವ ಮೊದಲು ತರುಣ್ ಜೈಲಿಗೆ ಹೋಗಿ ದರ್ಶನ್ ಭೇಟಿ ಮಾಡಿ ಬಂದಿದ್ದರು. ಈ ವೇಳೆ ನನಗಾಗಿ ಮದುವೆ ದಿನಾಂಕ ಮುಂದೂಡುವುದು ಬೇಡ. ಮದುವೆ ಸಮಯಕ್ಕೆ ಬರುತ್ತೇನೆ ಎಂದಿದ್ದರಂತೆ. ತರುಣ್-ಸೋನಲ್ ಮದುವೆಯಿರುವುದು ಆಗಸ್ಟ್ 11 ಕ್ಕೆ. ದರ್ಶನ್ ನ್ಯಾಯಾಂಗ ಬಂಧನ ಅವಧಿ ಆಗಸ್ಟ್ 1 ಕ್ಕೆ ಮುಗಿಯುತ್ತದೆ. ಅದಾದ ಬಳಿಕ ಅವರು ಜಾಮೀನಿಗೆ ಅರ್ಜಿ ಸಲ್ಲಿಸಬಹುದು.

ಆದರೆ ಕೇಸ್ ಬಹಳ ಸ್ಟ್ರಾಂಗ್ ಆಗಿದ್ದು ಆಗಲೂ ದರ್ಶನ್ ಗೆ ಜಾಮೀನು ಸಿಗುವುದು ಅನುಮಾನ. ಹಾಗಿದ್ದರೂ ಫ್ಯಾನ್ಸ್ ಮಾತ್ರ ಮದುವೆಗೆ ನಮ್ಮ ಬಾಸ್ ಬಂದಿದ್ದರೆ ಕಳೆಯೇ ಬೇರೆ ಇರ್ತಿತ್ತು. ಅವರಿಲ್ಲದ ಮದುವೆ ಎಂದರೆ ಯಾಕೋ ಬೇಸರವಾಗುತ್ತಿದೆ. ಮದುವೆಗೆ ಅವರು ಬರ್ತಾರಾ ಅಣ್ಣ ಎಂದು ತರುಣ್ ಗೆ ಪ್ರಶ್ನೆ ಮಾಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments