Select Your Language

Notifications

webdunia
webdunia
webdunia
webdunia

ಮನೆ ವಿಚಾರಕ್ಕೆ ಮತ್ತೆ ದುನಿಯಾ ವಿಜಯ್ ಕುಟುಂಬದ ನಡುವೆ ಕಿತ್ತಾಟ

ಮನೆ ವಿಚಾರಕ್ಕೆ ಮತ್ತೆ ದುನಿಯಾ ವಿಜಯ್ ಕುಟುಂಬದ ನಡುವೆ ಕಿತ್ತಾಟ
ಬೆಂಗಳೂರು , ಸೋಮವಾರ, 3 ಡಿಸೆಂಬರ್ 2018 (10:28 IST)
ಬೆಂಗಳೂರು : ಮನೆ ಮಾರಾಟ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ದುನಿಯಾ ವಿಜಯ್ ಕುಟುಂಬದ ನಡುವೆ ಮತ್ತೆ ಕಿತ್ತಾಟ ಶುರುವಾಗಿದೆ.


ನಾಗರತ್ನ ಮನೆಗಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷೀ ಬಾಯಿಯನ್ನು ಭೇಟಿಯಾಗಿ ತಮ್ಮ ಪತಿ ವಿಜಿ ವಿರುದ್ಧ ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯ ಹಿಂಭಾಗದಲ್ಲಿರೋ ದುನಿಯಾ ವಿಜಿ ಮನೆಯಿದ್ದು, ವಿಜಿ ತನಗೆ ಹೇಳದೇ ತಮ್ಮ ಮನೆಯನ್ನು ಸ್ನೇಹಿತ, ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರಿಗೆ ಮಾರಿದ್ದಾರೆ ಎಂದು ನಾಗರತ್ನ ಆರೋಪಿಸುತ್ತಿದ್ದಾರೆ.


ಅಲ್ಲದೇ ನನಗೆ ಸರಿಯಾಗಿ ಜೀವನಾಂಶ ತಲುಪಿಲ್ಲ ಎಂದು ನಾಗರತ್ನ ಮಹಿಳಾ ಆಯೋಗದ ಮೋರೆ ಹೋಗಲು ಮುಂದಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ನಾಗಲಕ್ಷೀ ಬಾಯಿ ಅವರಲ್ಲಿ ಮೌಖಿಕವಾಗಿ ನಾಗರತ್ನ ದೂರು ನೀಡಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷೀ ಬಾಯಿ ಭೇಟಿ ಮಾಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ದರ್ಶನ್ ಗೆ ಬಿಬಿಎಂಪಿ ದಂಡ ವಿಧಿಸಿದ್ಯಾಕೆ ಗೊತ್ತಾ?