Select Your Language

Notifications

webdunia
webdunia
webdunia
webdunia

ನಟ ದರ್ಶನ್ ನೋಡಲು ತಮ್ಮ ದಿನಕರ್ ತೂಗುದೀಪ ಆಸ್ಪತ್ರೆಗೆ ಬರದೇ ಇರಲು ಕಾರಣವೇನು ಗೊತ್ತಾ?

ನಟ ದರ್ಶನ್ ನೋಡಲು ತಮ್ಮ ದಿನಕರ್ ತೂಗುದೀಪ ಆಸ್ಪತ್ರೆಗೆ ಬರದೇ ಇರಲು ಕಾರಣವೇನು ಗೊತ್ತಾ?
ಮೈಸೂರು , ಗುರುವಾರ, 27 ಸೆಪ್ಟಂಬರ್ 2018 (14:02 IST)
ಮೈಸೂರು : ಕಾರು ಅಪಘಾತದಲ್ಲಿ ಕೈ ಮುರಿದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ  ಆರೋಗ್ಯದ ಬಗ್ಗೆ ಸ್ಯಾಂಡಲ್ ವುಡ್ ನಟರು ಆಸ್ಪತ್ರೆಗೆ ಬಂದು ವಿಚಾರಿಸಿದರೆ ದರ್ಶನ್ ಅವರ  ತಮ್ಮ ನಿರ್ದೇಶಕ ದಿನಕರ್ ತೂಗುದೀಪ ಅವರು ಮಾತ್ರ ಇಲ್ಲಿಯವರೆಗೆ  ಬಂದಿಲ್ಲ.


ಹೌದು. ಈ ಪ್ರಶ್ನೆ ಹಲವರಲ್ಲಿ ಮೂಡಿರಬಹುದು.ಇದಕ್ಕೆ ಕಾರಣ ಇಷ್ಟೇ. ಸದ್ಯ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ದಿನಕರ್ ಅವರಿಗೆ ಕಳೆದ ಒಂದು ವಾರದಿಂದ ಬಿಡದೆ ವೈರಲ್ ಫೀವರ್ ಕಾಡುತ್ತಿರುವ ಹಿನ್ನಲೆಯಲ್ಲಿ ದಿನಕರ್ ತೂಗುದೀಪ ಅವರು ಆಸ್ಪತ್ರೆಗೆ ಬರಲು ಸಾಧ್ಯವಾಗಿಲ್ಲ ಎಂಬುದಾಗಿ ತಿಳಿದುಬಂದಿದೆ.


ಇನ್ನು ಪ್ರತಿ ನಿತ್ಯ ದರ್ಶನ್ ಗೆ ಕರೆ ಮಾಡಿ ದಿನಕರ್ ತೂಗುದೀಪ ಅವರು ವಿಚಾರಿಸಿಕೊಳ್ಳುತ್ತಿದ್ದರೆ ಎನ್ನಲಾಗಿದ್ದು, ದರ್ಶನ್ ನೀನು ಬರೋದು ಬೇಡ, ಇಲ್ಲಿ ಎಲ್ಲ ಸರಿ ಇದೆ, ನೀನು ರೆಸ್ಟ್ ಮಾಡು ಅಂತ ದಿನಕರ್ ತೂಗುದೀಪ ಗೆ ಹೇಳಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ನಟಿ ತನುಶ್ರೀ ದತ್ತ ಮೈ ಕೈ ಎಲ್ಲಾ ಮುಟ್ಟಿ ಹಿಂಸಿಸಿದ ಆ ನಟ ಯಾರು ಗೊತ್ತಾ?