Select Your Language

Notifications

webdunia
webdunia
webdunia
webdunia

ಡಾ.ರಾಜ್ ಹಾದಿ ಹಿಡಿದ ನಿರ್ದೇಶಕ ಎಸ್. ನಾರಾಯಣ್ ಕುಟುಂಬ

ಡಾ.ರಾಜ್ ಹಾದಿ ಹಿಡಿದ ನಿರ್ದೇಶಕ ಎಸ್. ನಾರಾಯಣ್ ಕುಟುಂಬ
Bangalore , ಸೋಮವಾರ, 5 ಜೂನ್ 2017 (09:42 IST)
ಬೆಂಗಳೂರು: ಡಾ.ರಾಜ್ ಕುಮಾರ್ ಅದೆಷ್ಟೋ ಮಂದಿಗೆ ಪ್ರೇರಕ ಶಕ್ತಿ. ನೇತ್ರದಾನ ಮಹಾದಾನ ಎಂದು ಸಂದೇಶ ಸಾರಿರುವ ಅಣ್ಣಾವ್ರು ಮತ್ತು ಅವರ ಕುಟುಂಬದವರೆಲ್ಲರೂ ನೇತ್ರದಾನ ಮಾಡುವುದಾಗಿ ಮೊದಲೇ ಘೋಷಿಸಿಕೊಂಡಿದ್ದರು.

 
ಇದೀಗ ಅವರದೇ ಹಾದಿಯಲ್ಲಿ ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಸಾಗಿದ್ದಾರೆ. ನಾರಾಯಣ್ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಕುಟುಂಬ ಸಮೇತರಾಗಿ ನೇತ್ರದಾನ ಮಾಡುವುದಾಗಿ ಘೋಷಿಸಿದ್ದಾರೆ.

ನಾರಾಯಣ ನೇತ್ರಾಲಯದ ಅಧ್ಯಕ್ಷ ಭುಜಂಗ ಶೆಟ್ಟಿಯವರನ್ನು ಭೇಟಿ ಮಾಡಿದ ನಾರಾಯಣ್ ಕುಟುಂಬ ನೇತ್ರದಾನ ಘೋಷಣಾ ಪತ್ರಕ್ಕೆ ಸಹಿ ಹಾಕಿದರು. ಇದೇ ವೇಳೆ ಮಾತನಾಡಿದ  ನಾರಾಯಣ್, ವರನಟ ಡಾ. ರಾಜ್ ಪ್ರೇರಣೆಯಿಂದ ನೇತ್ರದಾನಕ್ಕೆ ಮುಂದಾಗಿರುವುದಾಗಿ ಹೇಳಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಆವಂತಿಕಾ ಶೆಟ್ಟಿ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಹೊಸ ಟ್ವಿಸ್ಟ್