Webdunia - Bharat's app for daily news and videos

Install App

ಜೈಲಿನ ಜತೆಗೆ ಮಗಳ ಸುಪರ್ದಿಯನ್ನೂ ಕಳೆದುಕೊಳ್ಳಲಿದ್ದಾರಾ ನಟ ದಿಲೀಪ್?

Webdunia
ಬುಧವಾರ, 12 ಜುಲೈ 2017 (11:33 IST)
ಕೊಚ್ಚಿ: ಬಹುಭಾಷಾ ತಾರೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ನಟ ದಿಲೀಪ್ ವೈಯಕ್ತಿಕ ಜೀವನದಲ್ಲೂ ಸಂಕಷ್ಟಕ್ಕೀಡಾಗುವ ಸಾಧ್ಯತೆಯಿದೆ.


ಮೊದಲ ಪತ್ನಿ, ನಟಿ ಮಂಜು ವಾರಿಯರ್ ರಿಂದ ವಿಚ್ಛೇದನಗೊಂಡ ಬಳಿಕವೂ ಪುತ್ರಿ ದಿಲೀಪ್ ಬಳಿಯಲ್ಲೇ ಇದ್ದರು. ಆದರೆ ಇದೀಗ ಮಂಜು ವಾರಿಯರ್ ಮಗಳ ಭವಿಷ್ಯದ ದೃಷ್ಟಿಯಿಂದ ಆಕೆಯನ್ನು ತನ್ನ ಸುಪರ್ದಿಗೆ ಒಪ್ಪಿಸಬೇಕೆಂದು ನ್ಯಾಯಾಲಯ ಮೊರೆ ಹೋಗುವ ಸಾಧ್ಯತೆಯಿದೆ ಎಂದು ಮಲಯಾಳಂ ಮಾಧ್ಯಮ ವರದಿಗಳು ತಿಳಿಸಿವೆ.

ಇದೀಗ ಚಿತ್ರರಂಗದ ಪ್ರಮುಖ ನಾಯಕ ನಟರೂ ಅವರ ವಿರುದ್ಧ ಮಾತನಾಡಿದ್ದಾರೆ. ದಿಲೀಪ್ ಗೆ ಮೊದಲಿನಿಂದಲೂ ಬೆಂಬಲವಾಗಿ ನಿಂತಿದ್ದ ನಟ ಮುಖೇಶ್ ಕೂಡಾ ಇದೀಗ ದಿಲೀಪ್ ನನ್ನ ಸಹೋದರನಂತಿದ್ದರು. ಇಂತಹ ಕೆಲಸ ಮಾಡಬಹುದು ಎಂದುಕೊಂಡಿರಲಿಲ್ಲ ಎಂದಿದ್ದಾರೆ.

ಅಲ್ಲದೆ, ಇನ್ನೊಬ್ಬ ಸೂಪರ್ ಸ್ಟಾರ್, ದಿಲೀಪ್ ನಿಕಟವರ್ತಿಯಾಗಿದ್ದ ಜಯರಾಂ ಕೂಡಾ ದಿಲೀಪ್ ರಿಂದ ಇಂತಹ ವರ್ತನೆ ನಿರೀಕ್ಷಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಮಲಯಾಳಂ ಸಿನಿಮಾ ಸಂಘಟನೆಗಳಿಂದಲೂ ವಜಾಗೊಂಡಿರುವ ದಿಲೀಪ್ ಏಕಾಂಗಿಯಾಗಿದ್ದಾರೆ.

ಇದನ್ನೂ ಓದಿ.. ಆಪಲ್ ನಲ್ಲಿರುವ ವಿಷಾಂಶ ತೆಗೆಯಲು ಒಂದೊಳ್ಳೆ ಐಡಿಯಾ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Darshan Thoogudeepa: ತೋಟದ ಮನೆಯಲ್ಲಿ ಎತ್ತಿನ ಗಾಡಿ ಮೇಲೆ ನಟ ದರ್ಶನ್ ಫುಲ್ ಮಜಾ Video

Vijay Prakash: ಗಾಯಕ ವಿಜಯ್ ಪ್ರಕಾಶ್ ಲವ್ ಮ್ಯಾರೇಜ್ ಪ್ರತಿಯೊಬ್ಬರಿಗೂ ಮಾದರಿ

ಟೈಗರ್‌ ಶ್ರಾಫ್‌ ಹತ್ಯೆಗೆ ಸುಫಾರಿ ಕೊಡಲಾಗಿದೆ ಎಂದು ಪೊಲೀಸರಿಗೆ ಕರೆ ಮಾಡಿದ್ದ ವ್ಯಕ್ತಿ ಅಂದರ್‌

Darshan Thoogudeepa: ಪವಿತ್ರಾ ಗೌಡಗೂ ದರ್ಶನ್ ಗೂ ಮದುವೆಯಾಗಿದ್ಯಾ, ಏನು ಸಂಬಂಧ ಎಂದು ಪ್ರಶ್ನಿಸಿದ ಜಡ್ಜ್

ಮುಂದಿನ ಸುದ್ದಿ