Select Your Language

Notifications

webdunia
webdunia
webdunia
webdunia

ಫೇವರಿಟ್ ಕಾರು ಆಗಿದ್ದಕ್ಕೇ ಧ್ರುವ ಸರ್ಜಾ ಅಪಘಾತದಲ್ಲಿ ಬಚಾವ್ ಆದರಂತೆ!

ಫೇವರಿಟ್ ಕಾರು ಆಗಿದ್ದಕ್ಕೇ ಧ್ರುವ ಸರ್ಜಾ ಅಪಘಾತದಲ್ಲಿ ಬಚಾವ್ ಆದರಂತೆ!
ಬೆಂಗಳೂರು , ಗುರುವಾರ, 26 ಸೆಪ್ಟಂಬರ್ 2019 (09:18 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಚಲಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಧ್ರುವ ಕೂದಲೆಳೆಯಲ್ಲಿ ಗಂಭೀರ  ಅಪಾಯದಿಂದ ಪಾರಾಗಿದ್ದರು.


ಈ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ಧ್ರುವ ಸರ್ಜಾ ಕಾರಿನ ಕುರಿತಾಗಿ ಹೊಸ ವಿಚಾರ ಹೊರ ಹಾಕಿದ್ದಾರೆ. ಸದ್ಯಕ್ಕೆ ಪೊಲ್ಯಾಂಡ್ ನಲ್ಲಿ ಶೂಟಿಂಗ್ ಗೆ ತೆರಳಿರುವ ಕಿಚ್ಚ ಅಲ್ಲಿಂದಲೇ ಧ್ರುವ ಕ್ಷೇಮವಾಗಿದ್ದಾರೆ ಎಂದು ತಿಳಿದು ನೆಮ್ಮದಿಯಾಯಿತು ಎಂದು ಟ್ವೀಟ್ ಮಾಡಿದ್ದಾರೆ.

ಜತೆಗೆ ಈ ಕಾರು ನಿನ್ನ ಫೇವರಿಟ್ ಕಾರು ಅಂತ ತಿಳಿಯಿತು. ಅದಕ್ಕೇ ನೀನು ಬಚಾವ್ ಆದೆ ಎಂದಿದ್ದಾರೆ. ಆ ಮೂಲಕ ಅದೃಷ್ಟದ ಕಾರಿನಿಂದಲೇ ಧ್ರುವ ಬಚಾವ್ ಆದರು ಎಂದಿದ್ದಾರೆ. ಜತೆಗೆ ನನ್ನ ಹಾರೈಕೆ ಯಾವತ್ತೂ ನಿನ್ನ ಜತೆಗಿರುತ್ತದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಪಚುನಾವಣೆ ಟಿಕೆಟ್ ನನಗೆ ಬೇಕಾಗಿಲ್ಲ ಎಂದ ಜಗ್ಗೇಶ್