Select Your Language

Notifications

webdunia
webdunia
webdunia
webdunia

ನೋಟ್ ಬ್ಯಾನ್ ನಡುವೆಯೂ ’ಮುಕುಂದ ಮುರಾರಿ’ ಹಾಫ್ ಸೆಂಚುರಿ

ನೋಟ್ ಬ್ಯಾನ್ ನಡುವೆಯೂ ’ಮುಕುಂದ ಮುರಾರಿ’ ಹಾಫ್ ಸೆಂಚುರಿ
Bangalore , ಗುರುವಾರ, 1 ಡಿಸೆಂಬರ್ 2016 (07:07 IST)
ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಜೋಡಿಯ ಮುಕುಂದ ಮುರಾರಿ ಚಿತ್ರ ಅರ್ಧ ಶತಕದ ಹೊಸ್ತಿಲಲ್ಲಿದೆ. ನೋಟ್ ಬ್ಯಾನ್ ಎಫೆಕ್ಟ್ ನಿಂದ ಎಂತೆಂತಹ ಚಿತ್ರಗಳು ಥಿಯೇಟರ್‌ನಿಂದ ಕಾಲ್ಕಿತ್ತವು. ಆದರೆ ’ಮುಕುಂದ ಮುರಾರಿ’ಯನ್ನ ಪಟ್ಟುಬಿಡದೆ ಕಚ್ಚಿಕೊಂಡಿದೆ.
 

ರೀಮೇಕ್ ಚಿತ್ರಗಳಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿರುವ ನಂದಕಿಶೋರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಬಾಲಿವುಡ್‌ನ ಓ ಮೈ ಗಾಡ್ ಚಿತ್ರದ ರೀಮೇಕ್. ಎಂ ಎನ್ ಕುಮಾರ್ ನಿರ್ಮಾಣದ ಚಿತ್ರ.  ನಿರ್ಮಾಪಕರ ಪ್ರಕಾರ ಹಾಕಿದ ಬಂಡವಾಳ ಒಂದು ವಾರದಲ್ಲೇ ವಾಪಸ್ ಆಗಿದೆಯಂತೆ. 
 
ಈ ಚಿತ್ರದಲ್ಲಿ ಸುದೀಪ್ ಉಪಯೋಗಿಸಿರುವ ವಿಶೇಷ ಬೈಕನ್ನು ಹರಾಜು ಹಾಕಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ 500 ಮತ್ತು 1000 ನೋಟು ಬ್ಯಾನ್ ಆಗಿರುವ ಕಾರಣ ಹರಾಜು ಪ್ರಕ್ರಿಯೆಯನ್ನ ಮುಂದೂಡಿದ್ದೇವೆ ಎನ್ನುತ್ತಾರೆ ನಿರ್ಮಾಪಕರಲ್ಲಿ ಒಬ್ಬರಾ ಬಿ ಜಯಶ್ರೀ ದೇವಿ. 
 
ನಿಖಿತಾ ತುಕ್ರಲ್, ಇಶಿತಾ ವ್ಯಾಸ್, ರವಿಶಂಕರ್, ಅವಿನಾಶ್, ಪ್ರಕಾಶ್ ಬೆಳವಾಡಿ, ತಬಲಾ ನಾಣಿ, ಶಿವರಾಂ ಸೇರಿದಂತೆ ಮುಂತಾದ ಕಲಾವಿದರ ಬಳಗವೇ ಚಿತ್ರದಲ್ಲಿದೆ. ಅರ್ಜುನ್ ಜನ್ಯ ಸಂಗೀತ, ಸುಂದರ್ ಎಸ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗೋಲ್ಡನ್ ಸ್ಟಾರ್ ಗಣೇಶ್-ಯೋಗರಾಜ್ ಭಟ್ ಸಿನಿಮಾದ ಟೈಟಲ್ ಕೇಳಿದರೆ ನಗು ಬಂದೀತು