Webdunia - Bharat's app for daily news and videos

Install App

ದರ್ಶನ್ ಭೇಟಿ ಮಾಡಲು ಈಗ ಈ ಇಬ್ಬರ ಪರ್ಮಿಷನ್ ಬೇಕು: ಪತ್ನಿ ವಿಜಯಲಕ್ಷ್ಮಿ ಕೈಯಲ್ಲಿ ಕಂಟ್ರೋಲ್

Krishnaveni K
ಮಂಗಳವಾರ, 4 ಮಾರ್ಚ್ 2025 (12:19 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಕ್ಕೆ ಸಿಲುಕಿ ಜೈಲಿಗೆ ಹೋಗಿ ಬಂದ ಮೇಲೆ ನಟ ದರ್ಶನ್ ಜೀವನಶೈಲಿ ಸಂಪೂರ್ಣ ಬದಲಾಗಿದೆ. ಅವರನ್ನು ಈಗ ಯಾರೇ ಭೇಟಿಯಾಗಬೇಕಾದರೂ ಈ ಇಬ್ಬರ ಅನುಮತಿ ಬೇಕು. ಪತ್ನಿ ವಿಜಯಲಕ್ಷ್ಮಿ ಕೈಯಲ್ಲಿ ಕಂಟ್ರೋಲ್ ಇದೆ ಎನ್ನಲಾಗುತ್ತಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಳಿಕ ದರ್ಶನ್ ಸಾಕಷ್ಟು ಪಾಠ ಕಲಿತಿದ್ದಾರೆ. ಇಷ್ಟು ದಿನವೂ ಅವರ ಸುತ್ತ ಕುಟುಂಬದವರಿಗಿಂತ ಬೆಂಬಲಿಗರೇ ಓಡಾಡಿಕೊಂಡಿದ್ದರು. ಪತ್ನಿ ವಿಜಯಲಕ್ಷ್ಮಿ ಕೂಡಾ ದೂರವೇ ಇದ್ದರು.

ಆದರೆ ದರ್ಶನ್ ಜೈಲಿಗೆ ಹೋದ ಬಳಿಕ ಅವರನ್ನು ಬಿಡಿಸಿಕೊಂಡು ಬರುವಲ್ಲಿ ವಿಜಯಲಕ್ಷ್ಮಿ ಪಾತ್ರ ದೊಡ್ಡದು. ಮೈದುನ ದಿನಕರ್ ಜೊತೆಗೂಡಿ ವಿಜಯಲಕ್ಷ್ಮಿ ಕಷ್ಟಪಟ್ಟು ಗಂಡನಿಗೆ ಜಾಮೀನು ಕೊಡಿಸಿ ಹೊರಗೆ ಕರೆತಂದಿದ್ದಾರೆ.

ಈ ಪ್ರಕರಣದ ಬಳಿಕ ದರ್ಶನ್ ಹೆಚ್ಚು ತಮ್ಮ ಪತ್ನಿ, ಮಗ, ತಾಯಿ, ಸಹೋದರ ಎಂದು ಕುಟುಂಬದ ಜೊತೆಗೇ ಕಾಲ ಕಳೆಯುತ್ತಿದ್ದಾರೆ. ಇಷ್ಟು ದಿನ ಪತ್ನಿ ಜೊತೆ ಹೊರಗೆ ಸುತ್ತಾಡುವುದೇ ಅಪರೂಪ ಎಂಬಂತಿದ್ದ ದರ್ಶನ್ ಈಗ ಎಲ್ಲೇ ಹೋದರೂ ಪತ್ನಿ ವಿಜಯಲಕ್ಷ್ಮಿ ಜೊತೆಗಿರುತ್ತಾರೆ.

ಈಗ ದರ್ಶನ್ ಸಿನಿಮಾಗಳಿಗೆ ಕಮ್ ಬ್ಯಾಕ್ ಮಾಡಲು ಹೊರಟಿದ್ದಾರೆ. ಇಷ್ಟು ದಿನ ಅವರ ಮ್ಯಾನೇಜರ್ ಆಗಿದ್ದ ನಾಗರಾಜ್, ಡ್ರೈವರ್ ಲಕ್ಷ್ಮಣ್ ಗೆ ವಿಜಯಲಕ್ಷ್ಮಿ ಕೊಕ್ ನೀಡಿದ್ದಾರೆ. ಇಬ್ಬರನ್ನೂ ದರ್ಶನ್ ರಿಂದ ದೂರವೇ ಇಟ್ಟಿದ್ದಾರಂತೆ. ಇದೀಗ ದರ್ಶನ್ ವ್ಯವಹರಾವನ್ನೆಲ್ಲಾ ತಾವೇ ಖುದ್ದಾಗಿ ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ದಿನಕರ್ ಕೂಡಾ ಸಾಥ್ ನೀಡುತ್ತಿದ್ದಾರೆ. ಈಗ ದರ್ಶನ್ ರನ್ನು ಯಾರೇ ಭೇಟಿ ಮಾಡಬೇಕೆಂದಿದ್ದರೂ ವಿಜಯಲಕ್ಚ್ಮಿ ಇಲ್ಲವೇ ದಿನಕರ್ ಒಪ್ಪಿಗೆ ಪಡೆಯಬೇಕು. ಜೊತೆಗೆ ನಟ ಧನ್ವೀರ್ ಗೌಡ ಕೂಡಾ ದರ್ಶನ್ ಗೆ ಕಾವಲಾಗಿ ನಿಂತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Pahalgam Attack, ದುಃಖದ ಸಮಯದಲ್ಲಿ ದೇಶ ಮೆಚ್ಚುವ ನಿರ್ಧಾರ ಕೈಗೊಂಡ ನಟ ಸಲ್ಮಾನ್ ಖಾನ್‌

Shruti Haasan, ಚೆನ್ನೈಗೆ ಸೋಲಾಗುತ್ತಿದ್ದ ಹಾಗೇ ಬಿಕ್ಕಿ ಬಿಕ್ಕಿ ಅತ್ತ ಸ್ಟಾರ್ ನಟಿ, Video Viral

Ranya Rao: ಗೋಲ್ಡ್ ರಾಣಿ ರನ್ಯಾ ರಾವ್ ಪರಿಸ್ಥಿತಿ ಏನಾಗಿದೆ ನೋಡಿ: ಶಾಕಿಂಗ್ ಸುದ್ದಿ

ಎರಡೇ ವಾರದ ಹಿಂದೆ ಪಹಲ್ಗಾಮ್ ಸ್ಥಿತಿ ಹೀಗಿತ್ತು : ಭಯಾನಕ ಸತ್ಯ ಬಿಚ್ಚಿಟ್ಟ ಗಣೇಶ್ ಕಾರಂತ್

Pahalgam Terror Attack:ಪಾಕ್‌ನ ನಟ-ನಟಿಯರಿಗೂ ತಟ್ಟಿದ ಬಿಸಿ, ಫವಾದ್ ಖಾನ್ ಸಿನಿಮಾಕ್ಕಿಲ್ಲ ಬಿಡುಗಡೆ ಭಾಗ್ಯ

ಮುಂದಿನ ಸುದ್ದಿ
Show comments