ಚಾಲೆಂಜಿಂಗ್ ಸ್ಟಾರ್ ದರ್ಶನ್ ವೃತ್ತಿಬದುಕಿನಲ್ಲಿ ಅರ್ಧ ಸೆಂಚುರಿಗೆ ಹತ್ತಿರವಾಗಿದ್ದಾರೆ. ಈ ಚಿತ್ರವನ್ನು ಯಾರು ನಿರ್ದೇಶಿಸಲಿದ್ದಾರೆ ಎಂಬುದು ಮಹತ್ವದ ಪ್ರಶ್ನೆಯಾಗಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ದರ್ಶನ್ ಅವರ 49ನೇ ಚಿತ್ರವನ್ನು ಮಿಲನ ಪ್ರಕಾಶ್ ನಿರ್ದೇಶಿಸಲಿದ್ದು, ಅದಾದ ಬಳಿಕ ಆಕ್ಷನ್ ಕಟ್ ಹೇಳಲಿದ್ದಾರೆ ಎಂ.ಡಿ ಶ್ರೀಧರ್.
ಎಲ್ಲವೂ ಅಂದುಕೊಂಡಿದ್ದರೆ 50ನೇ ಚಿತ್ರಕ್ಕೆ ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶಿಸಬೇಕಿತ್ತು. ಆ ಚಿತ್ರಕ್ಕೆ ಸರ್ವಾಂತರ್ಯಾಮಿ ಎಂದು ಶೀರ್ಷಿಕೆ ಇಡಲಾಗಿದೆ. ಸದ್ಯಕ್ಕೆ ಚಿತ್ರದ ನಿರ್ಮಾಣ ಪೂರ್ವ ಕೆಲಸಗಳು ನಡೆಯುತ್ತಿವೆ.
ಈ ಚಿತ್ರಕ್ಕೆ ದರ್ಶನ್ ಅವರ ಮೈಸೂರು ಗೆಳೆಯರು ಬಂಡವಾಳ ಹೂಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಎಂ.ಡಿ. ಶ್ರೀಧರ್ ಈ ಹಿಂದೆ ದರ್ಶನ್ ಜೊತೆಗೆ ಪೊರ್ಕಿ ಮತ್ತು ಬುಲ್ ಬುಲ್ ಸಿನಿಮಾಗಳನ್ನು ಮಾಡಿದ್ದಾರೆ. ಇದು ದರ್ಶನ್ ಜೊತೆಗಿನ ಮೂರನೇ ಸಿನಿಮಾ ಆಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.