Webdunia - Bharat's app for daily news and videos

Install App

ನಾನ್ ವೆಜ್ ಇಲ್ಲ, ಸಿಗರೇಟು ಸಿಗಲ್ಲ: ಬಳ್ಳಾರಿ ಜೈಲಲ್ಲಿ ತೀರಾ ಸೊರಗಿ ಹೋದ ದರ್ಶನ್

Krishnaveni K
ಗುರುವಾರ, 12 ಸೆಪ್ಟಂಬರ್ 2024 (16:05 IST)
ಬೆಂಗಳೂರು: ಬಳ್ಳಾರಿ ಜೈಲಿಗೆ ಹೋದ ಬಳಿಕ ಕೇವಲ ಎರಡೇ ವಾರದಲ್ಲಿ ನಟ ದರ್ಶನ್ ತೀರಾ ಸೊರಗಿ ಹೋಗಿದ್ದಾರೆ. ದೈಹಿಕವಾಗಿ ದರ್ಶನ್ ತೀರಾ ಇಳಿದುಹೋಗಿದ್ದಾರೆ ಎಂದು ನೋಡಿದರೇ ಗೊತ್ತಾಗುತ್ತಿದೆ.

ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ದ ನಟ ದರ್ಶನ್ ಮೊದಲು ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಆದರೆ ಅಲ್ಲಿ ಅವರಿಗೆ ಜೈಲಿನ ರೌಡಿಶೀಟರ್ ಗಳಿಂದ ರಾಜಾತಿಥ್ಯ ದೊರೆಯುತ್ತಿತ್ತು. ದುಡ್ಡು ಕೊಟ್ಟರೆ ಮದ್ಯ, ಬಿರಿಯಾನಿ ಎಂಬಂತೆ ಬೇಕಿದ್ದೆಲ್ಲವೂ ಸಿಗುತ್ತಿತ್ತು.

ಆದರೆ ಅವರಿಗೆ ಸಿಗುತ್ತಿದ್ದ ರಾಜಾತಿಥ್ಯ ಬಯಲಾದ ಬೆನ್ನಲ್ಲೇ ಅವರನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸಲಾಗಿತ್ತು. ಇಲ್ಲಿಗೆ ಬಂದ ಮೇಲೆ ದರ್ಶನ್ ರನ್ನು ವಿಐಪಿ ಸೆಲ್ ನಲ್ಲಿ ಪ್ರತ್ಯೇಕವಾಗಿರಿಸಲಿದೆ. ಯಾರೊಂದಿಗೂ ಸಂಪರ್ಕವಿಲ್ಲ. ಜೈಲಿನ ಊಟ, ತಿಂಡಿ ಬಿಟ್ಟು ಬೇರೆ ಏನೂ ಸಿಗುತ್ತಿಲ್ಲ. ಅವರಿಗೆ ಊಟ, ತಿಂಡಿ ಸೇರುತ್ತಿಲ್ಲ. ಈ ಕಾರಣಕ್ಕೆ ಪತ್ನಿ ತಂದುಕೊಟ್ಟ ಡ್ರೈ ಫ್ರೂಟ್ಸ್, ಬಿಸ್ಕಟ್ ತಿಂದು ಕಾಲಕಳೆಯುತ್ತಿದ್ದಾರೆ.

ಹೀಗಾಗಿ ದರ್ಶನ್ ಈಗ ದೈಹಿಕವಾಗಿಯೂ ತೀರಾ ಇಳಿದು ಹೋಗಿದ್ದಾರೆ. ಇಂದು ತಮ್ಮನ್ನು ಭೇಟಿ ಮಾಡಲು ಬಂದ ಪತ್ನಿ ಮತ್ತು ಸಹೋದರನನ್ನು ಕಾಣಲು ವಿಸಿಟರ್ಸ್ ರೂಂಗೆ ಬಂದಾಗ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಬಿಳಿ ಶರ್ಟ್, ಪ್ಯಾಂಟ್ ಧರಿಸಿದ್ದ ದರ್ಶನ್ ತೀರಾ ಇಳಿದುಹೋದವರಂತೆ ಕಂಡುಬರುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಮುಂದಿನ ಸುದ್ದಿ
Show comments