Webdunia - Bharat's app for daily news and videos

Install App

ಊಟ ಎಸೆಯುತ್ತಾರೆ, ಶೂ ಕಾಲಿನಲ್ಲೇ ಬರ್ತಾರೆ: ದರ್ಶನ್ ಕಂಪ್ಲೇಂಟ್ ಒಂದಾ ಎರಡಾ

Krishnaveni K
ಬುಧವಾರ, 3 ಸೆಪ್ಟಂಬರ್ 2025 (10:06 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ತೂಗುದೀಪ ಪರ ವಕೀಲರು ಕೋರ್ಟ್ ನಲ್ಲಿ ನಾನಾ ದೂರು ನೀಡಿದ್ದಾರೆ. ಜೈಲು ಸಿಬ್ಬಂದಿ ಊಟ ಎಸೆಯುತ್ತಾರೆ, ಶೂ ಕಾಲಿನಲ್ಲೇ ರೂಂ ಒಳಗೆ ಬರ್ತಾರೆ ಇತ್ಯಾದಿ.

ದರ್ಶನ್ ಗೆ ಬೆನ್ನು ನೋವಿದೆ, ಈ ಕಾರಣಕ್ಕೆ ಅವರಿಗೆ ಹಾಸಿಗೆ, ದಿಂಬು ನೀಡಬೇಕು ಎಂದು ಅವರ ಪರ ವಕೀಲರು ಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ. ಈ ವೇಳೆ ಜೈಲಿನಲ್ಲಿ ದರ್ಶನ್ ಅವಸ್ಥೆಯ ಬಗ್ಗೆಯೂ ಕೋರ್ಟ್ ಗಮನಕ್ಕೆ ತಂದಿದ್ದಾರೆ.

ಊಟವನ್ನು ದೂರದಿಂದಲೇ ಎಸೆಯುತ್ತಾರೆ. ಶೂ ಕಾಲಿನಲ್ಲೇ ರೂಂ ಒಳಗೆ ಬರ್ತಾರೆ. ಸುಪ್ರೀಂಕೋರ್ಟ್ ನಲ್ಲಿ ಬೇಲ್ ರದ್ದಾಗಿದ್ದಕ್ಕೆ ಅಮಾನವೀಯವಾಗಿ ನಡೆದುಕೊಳ್ತಿದ್ದಾರೆ. ಸಿಗರೇಟು ಕೇಳಿದ್ರೂ ಕೊಡ್ತಿಲ್ಲ. ಜೈಲಿನ ಮ್ಯಾನ್ಯುವೆಲ್ ನಲ್ಲಿ ಸಿಗರೇಟು ಕೊಡಬಾರದು ಎಂದಿಲ್ಲ. ಆದರೂ ಕೊಡ್ತಿಲ್ಲ. ಜೈಲಿನ ನಿಯಮದ ಪ್ರಕಾರವೂ ಕೊಡಬೇಕಾದ ವಸ್ತುಗಳನ್ನು ಕೊಡಲ್ಲ. ಎಲ್ಲದಕ್ಕೂ ಕೋರ್ಟ್ ಆದೇಶ ಕೊಡಬೇಕು ಅಂತಾರೆ. ಎಲ್ಲವನ್ನೂ ಪುಟಗಟ್ಟಲೆ ಕೋರ್ಟ್ ನಿಂದ ಬರೆಸಿಕೊಂಡು ಹೋಗಕ್ಕೆ ಆಗುತ್ತಾ ಎಂದು ಆಕ್ರೋಶ ಹೊರಹಾಕಿದ್ದಾರೆ.

ಬೇಲ್ ರದ್ದುಗೊಳಿಸುವ ವೇಳೆ ಸುಪ್ರೀಂಕೋರ್ಟ್ ಯಾವುದೇ ವಿಶೇಷ ಸವಲತ್ತು ಕೊಡಬಾರದು ಎಂದಿತ್ತು. ಇದನ್ನು ಜೈಲು ಸಿಬ್ಬಂದಿಗಳು ಖಡಕ್ ಆಗಿ ಪಾಲಿಸುತ್ತಿದ್ದಾರೆ. ಆದರೆ ಇದಕ್ಕೆ ದರ್ಶನ್ ಪರ ವಕೀಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣುವರ್ಧನ್‌ 75ನೇ ಜನ್ಮದಿನದಂದೇ ಕರ್ನಾಟಕ ರತ್ನ ಪುರಸ್ಕಾರ ನೀಡಲು ಹಿರಿಯ ನಟಿಯರಿಂದ ಒತ್ತಾಯ

Gold Smuggling Case: ಜೈಲು ಹಕ್ಕಿಯಾಗಿರುವ ನಟಿ ರನ್ಯಾ ರಾವ್‌ಗೆ ಬಿಗ್‌ ಶಾಕ್‌

ಅಭಿಮಾನಿಗಳಿಗಾಗಿ ತಾವೇ ಸಿಎಂ ಭೇಟಿಗೆ ಮುಂದಾದ ಭಾರತಿ ವಿಷ್ಣುವರ್ಧನ್

ಪವಿತ್ರಾ ಗೌಡಗೆ ಬಿಗ್ ಶಾಕ್ ನೀಡಿದ ಕೋರ್ಟ್, ಬೇಲ್ ಅರ್ಜಿ ವಜಾ

Video: ಯಾವ ಕಿತ್ತೋದ ನನ್ಮಕ್ಳಿಗೂ ತಲೆಕೆಡಿಸಿಕೊಳ್ಬೇಡಿ: ಕಿಚ್ಚ ಸುದೀಪ್ ಕೌಂಟರ್ ಕೊಟ್ಟಿದ್ದು ಯಾರಿಗೆ

ಮುಂದಿನ ಸುದ್ದಿ
Show comments