Select Your Language

Notifications

webdunia
webdunia
webdunia
webdunia

ಪ್ರಾಕ್ಟಿಕಲ್ ಆಗಿ ಪರಭಾಷಿಕರಿಗೆ ಗುದ್ದುಕೊಡಲು ಮುಂದಾದ ನಟ ದರ್ಶನ್

ಪ್ರಾಕ್ಟಿಕಲ್ ಆಗಿ ಪರಭಾಷಿಕರಿಗೆ ಗುದ್ದುಕೊಡಲು ಮುಂದಾದ ನಟ ದರ್ಶನ್
ಬೆಂಗಳೂರು , ಶುಕ್ರವಾರ, 1 ಡಿಸೆಂಬರ್ 2023 (10:40 IST)
ಬೆಂಗಳೂರು: ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೆ ಮೊದಲ ಆದ್ಯತೆಯಿರಬೇಕು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳುತ್ತಲೇ ಬರುತ್ತಿದ್ದಾರೆ.

ಇತ್ತೀಚೆಗೆ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಹೋರಾಟದಲ್ಲಿ ಭಾಗಿಯಾಗಿದ್ದಾಗ ಹೋರಾಟಕ್ಕೆ ಮಾತ್ರ ನಾವು ನೆನಪಾಗ್ತೀವಿ. ಸಿನಿಮಾ ಎಂದರೆ ಕನ್ನಡ ಸಿನಿಮಾವನ್ನೂ ಕಡೆಗಣಿಸಿ ತಮಿಳು, ತೆಲುಗು ಎಂದು ಪರಭಾಷೆ ಸಿನಿಮಾಗಳಿಗೆ ಕೋಟಿ ಕೋಟಿ ದುಡ್ಡು ಮಾಡಲು ಅವಕಾಶ ಕೊಡ್ತೀರಿ ಎಂದು ಆಕ್ಷೇಪಿಸಿದ್ದರು.

ಇತ್ತೀಚೆಗೆ ನಡೆದ ಕೈವ ಸಿನಿಮಾ ಟ್ರೈಲರ್ ಲಾಂಚ್ ವೇಳೆಯೂ ದರ್ಶನ್ ಮತ್ತೆ ಇದೇ ಮಾತನ್ನು ಪುನರುಚ್ಚರಿಸಿದ್ದರು. ಬೇರೆ ಭಾಷೆಯ ಸಿನಿಮಾಗಳನ್ನೂ ನೋಡಿ. ಆದರೆ ಮೊದಲು ನಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮಿಕ್ಕಿದ್ದೆಲ್ಲಾ ಆ ಮೇಲೆ. ಕನ್ನಡ ಸಿನಿಮಾಗಳನ್ನು ನೋಡಿ ಎಂದಿದ್ದರು.

ಇದೀಗ ಅದನ್ನೇ ಪ್ರಾಕ್ಟಿಕಲ್ ಆಗಿ ಮಾಡಲು ಹೊರಟಿದ್ದಾರೆ ದರ್ಶನ್. ತೆಲುಗು, ಹಿಂದಿ ಭಾಷೆಗಳ ಬಿಗ್ ಸಿನಿಮಾಗಳ ಮುಂದೆ ತಮ್ಮ ಕಾಟೇರ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ಈ ಮೂಲಕ ಕನ್ನಡ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕರು ಎಷ್ಟು ನೋಡುತ್ತಾರೆ, ಪ್ರೋತ್ಸಾಹ ಕೊಡುತ್ತಾರೆ ನೋಡೋಣ ಎಂದು ಸ್ಪರ್ಧೆಗಿಳಿದಿದ್ದಾರೆ. ದರ್ಶನ್ ಗೆ ಕನ್ನಡದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಹೀಗಾಗಿ ಪರಭಾಷೆ ಹಾವಳಿ ಮಧ್ಯೆ ಅವರ ಸಿನಿಮಾವನ್ನು ಕನ್ನಡ ಪ್ರೇಕ್ಷಕ ವೀಕ್ಷಿಸಿ ಸಿನಿಮಾ ಗೆದ್ದರೆ ದರ್ಶನ್ ಗೆ ಜಯ ಸಿಕ್ಕಂತಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್, ರಕ್ಷಿತ್ ಸೇರಿದಂತೆ ಶೆಟ್ಟಿ ಗ್ಯಾಂಗ್ ಬಗ್ಗೆ ನಿರ್ದೇಶಕ ದಯಾಳ್ ಪದ್ಮನಾಭನ್ ಗೆ ಹೊಟ್ಟೆ ಉರಿನಾ?