Webdunia - Bharat's app for daily news and videos

Install App

ಕಾಮಿಡಿ ಕಿಲಾಡಿಗಳಿಗೆ ಸರ್ಪ್ರೈಸ್ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್

Webdunia
ಶನಿವಾರ, 4 ಜನವರಿ 2020 (09:04 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿರುತೆರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇ ಅಪರೂಪ. ಹಾಗಿದ್ದರೂ ಡಿ ಬಾಸ್ ರನ್ನು ಟಿವಿ ಪರದೆ ಮೇಲೆ ನೋಡಬೇಕು ಎಂಬ ಎಷ್ಟೋ ಅಭಿಮಾನಿಗಳ ಆಸೆ ಮಾತ್ರ ಹಾಗೆಯೇ ಇದೆ.


ಇದಕ್ಕೂ ಮೊದಲು ದರ್ಶನ್ ಕಿರುತೆರೆಯ ಶೋ ಒಂದಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿಯಿತ್ತಾದರೂ ಸಿನಿಮಾ ಶೂಟಿಂಗ್ ಗೇ ನನಗೆ ಸಮಯ ಸಾಲುತ್ತಿಲ್ಲ. ಇನ್ನು ಕಿರುತೆರೆಗೆ ಹೇಗೆ ಬರಲಿ ಎಂದು ಈ ಎಲ್ಲಾ ಸುದ್ದಿಗಳನ್ನು ತಳ್ಳಿ ಹಾಕಿದ್ದರು ದರ್ಶನ್.

ಆದರೆ ಇದೀಗ ದರ್ಶನ್ ಕಾಮಿಡಿ ಕಿಲಾಡಿಗಳು ಸೆಟ್ ಗೆ ಬಂದು ಸರ್ಪ್ರೈಸ್ ಕೊಟ್ಟಿದ್ದಾರೆ. ಅದೂ ಕರೆಯದೇ ಬಂದಿದ್ದಾರೆ ಎನ್ನುವುದು ವಿಶೇಷ. ಹಲವು ದಿನಗಳಿಂದ ದರ್ಶನ್ ರನ್ನು ವೇದಿಕೆಗೆ ಕರೆಸಬೇಕೆಂದುಕೊಂಡರೂ ಆಗಿರಲಿಲ್ಲವಂತೆ. ಆದರೆ ಈಗ ದರ್ಶನ್ ತಾವಾಗಿಯೇ ಪ್ರೀತಿಯಿಂದ ಸೆಟ್ ಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಕುರುಕ್ಷೇತ್ರ ಜೀ ಕನ್ನಡದಲ್ಲಿ ಪ್ರಸಾರವಾಗಿ ದಾಖಲೆಯ 19.2 ಟಿವಿಆರ್ ಅಂಕಗಳನ್ನು ಪಡೆದುಕೊಂಡಿದ್ದಕ್ಕೆ ಕೇಕ್ ಕಟ್ ಮಾಡಿ ಸಂಭ್ರಮಿಸಲಾಯಿತು. ಈ ಕ್ಷಣಗಳನ್ನು ನವರಸನಾಯಕ ಜಗ್ಗೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments