Webdunia - Bharat's app for daily news and videos

Install App

ದರ್ಶನ್ ಗೆ ಟಿವಿ ಬಂತು, ಆದ್ರೆ ಬೇಕಾದ ಚಾನೆಲ್ ನೋಡೋ ಭಾಗ್ಯ ಇಲ್ಲ

Krishnaveni K
ಬುಧವಾರ, 18 ಸೆಪ್ಟಂಬರ್ 2024 (14:10 IST)
ಬಳ್ಳಾರಿ: ನಟ ದರ್ಶನ್ ಬೇಡಿಕೆಯಂತೆ ಕೊನೆಗೂ ಜೈಲಿನಲ್ಲಿ ಅವರಿಗೆ ಟಿವಿ ಭಾಗ್ಯ ದೊರೆತಿದೆ. ಆದರೂ ಬೇಕು ಬೇಕಾದ ಚಾನೆಲ್ ಎಲ್ಲಾ ನೋಡುವ ಅವಕಾಶ ಅವರಿಗಿಲ್ಲ ಎನ್ನಲಾಗಿದೆ.

ಬಳ್ಳಾರಿ ಜೈಲಿಗೆ ಬಂದ ಬಳಿಕ ನಟ ದರ್ಶನ್ ಗೆ ಮೊದಲ ನಾಲ್ಕು ದಿನ ಟಿವಿ ಇರಲಿಲ್ಲ. ಆದರೆ ಅವರು ಟಿವಿಗೆ ಬೇಡಿಕೆಯಿಟ್ಟ ಕಾರಣ ಜೈಲಿನಲ್ಲಿ ಹಾಳಾಗಿ ಬಿದ್ದಿದ್ದ ಟಿವಿಯೊಂದನ್ನು ರಿಪೇರಿ ಮಾಡಿಕೊಡಲಾಗಿತ್ತು. ಆದರೆ ಒಂದೇ ದಿನದಲ್ಲಿ ಆ ಟಿವಿ ಮತ್ತೆ ಹಾಳಾಗಿತ್ತು. ಹೀಗಾಗಿ ಮತ್ತೆ ಟಿವಿಯಿಲ್ಲದೇ ದರ್ಶನ್ ಕಳೆಯಬೇಕಾಯಿತು.

ಇದರಿಂದ ದರ್ಶನ್ ಜೈಲು ಅಧಿಕಾರಿಗಳ ವಿರುದ್ಧವೇ ಹರಿಹಾಯ್ದಿದ್ದರು. ನಿಯಮದ ಪ್ರಕಾರ ಏನು ನೀಡಬೇಕೋ ಅದನ್ನೂ ನೀಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು. ನಿನ್ನೆ ಕೋರ್ಟ್ ನಲ್ಲೂ ದರ್ಶನ್ ಪರ ವಕೀಲರು ಜೈಲು ಅಧಿಕಾರಗಳು ಚೇರ್ ಕೂಡಾ ನೀಡುತ್ತಿಲ್ಲ ಎಂದು ದೂರಿದ್ದರು. ಇದಕ್ಕೆ ನ್ಯಾಯಾಧೀಶರು ಜೈಲು ನಿಯಮದ ಪ್ರಕಾರ ಏನು ನೀಡಬೇಕೋ ಅದನ್ನು ನೀಡುತ್ತಾರೆ ಬಿಡಿ ಎಂದಿದ್ದರು.

ಇದೀಗ ಕೊನೆಗೂ ದರ್ಶನ್ ಗೆ ಟಿವಿ ರಿಪೇರಿ ಮಾಡಿಕೊಡಲಾಗಿದೆ. ಆದರೆ ಈ ಟಿವಿಯಲ್ಲಿ ಅವರಿಗೆ ಬೇಕು ಬೇಕಾದ ಚಾನೆಲ್ ಗಳನ್ನೆಲ್ಲಾ ವೀಕ್ಷಿಸಲು ಅವಕಾಶವಿಲ್ಲ. ಕೇವಲ ಸರ್ಕಾರೀ ಒಡೆತನದ ದೂರದರ್ಶನ ಚಾನೆಲ್ ಮಾತ್ರ ಬರುತ್ತಿದೆ. ಖಾಸಗಿ ವಾಹಿನಿಗಳನ್ನು ವೀಕ್ಷಿಸಲು ಅವಕಾಶವಿಲ್ಲ. ಹೀಗಾಗಿ ಟಿವಿ ಬಂದರೂ ಒಂದೇ ಚಾನೆಲ್ ನೋಡಿಕೊಂಡು ಇರಬೇಕಾದ ಪರಿಸ್ಥಿತಿಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments