Webdunia - Bharat's app for daily news and videos

Install App

ಜೈಲೂಟ ಸೇರ್ತಿಲ್ಲ ಎಂದ ದರ್ಶನ್ ಗೆ ಬಂತು ಕೆಜಿಗಟ್ಟಲೆ ಹಣ್ಣುಗಳು

Krishnaveni K
ಗುರುವಾರ, 11 ಜುಲೈ 2024 (13:38 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಇತ್ತೀಚೆಗೆ ಜೈಲೂಟ ಸೇರುತ್ತಿಲ್ಲ ಎಂದಿದ್ದರು. ಜೈಲೂಟ ಸೇರುತ್ತಿಲ್ಲ ಎಂದಿದ್ದಕ್ಕೆ ಈಗ ದರ್ಶನ್ ಗೆ ಈಗ ಜೈಲಿಗೆ ಕೆಜಿಗಟ್ಟಲೆ ಫ್ರೂಟ್ ಬಂದಿದೆ.

ನಟ ದರ್ಶನ್ ಮನೆ ಆಹಾರ ಕೊಡಿ ಎಂದು ಈಗಾಗಲೇ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅದಕ್ಕೆ ಕೋರ್ಟ್ ನಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಇದರ ವಿಚಾರಣೆಯನ್ನು ಹೈಕೋರ್ಟ್ ಜುಲೈ 18 ಕ್ಕೆ ಮುಂದೂಡಿದೆ. ಕೋರ್ಟ್ ಅನುಮತಿ ನೀಡದೇ ನಾವು ಮನೆ ಆಹಾರ ಕೊಡಲು ಒಪ್ಪಿಗೆ ನೀಡಲ್ಲ ಎಂದು ಜೈಲು ಅಧಿಕಾರಿಗಳೂ ಹೇಳಿದ್ದಾರೆ.

ಕೈದಿಗಳಿಗೆ ಮನೆಯವರು ನಿಯಮದ ಪ್ರಕಾರ ಹಣ್ಣುಗಳನ್ನು ಮಾತ್ರ ನೀಢಬಹುದಾಗಿದೆ. ಹೀಗಾಗಿ ಜೈಲೂಟ ಸೇರುತ್ತಿಲ್ಲ ಎಂದ ದರ್ಶನ್ ಗೆ ಅವರ ಆಪ್ತರು ಎಲ್ಲಾ ರೀತಿಯ ಕೆಜಿಗಟ್ಟಲೆ ಹಣ್ಣನ್ನು ತಂದಿದ್ದಾರೆ. ಬಾಳೆಹಣ್ಣು, ಪಪ್ಪಾಯ, ಮೂಸಂಬಿ ಸೇರಿದಂತೆ ವಿವಿಧ ಹಣ್ಣುಗಳನ್ನು ಅವರ ಆಪ್ತರು ಮತ್ತು ಅಕ್ಕನ ಮಗ ಇಂದು ಜೈಲಿಗೆ ತಂದಿದ್ದಾರೆ.

ಇದಕ್ಕೆ ಮೊದಲು ನಿನ್ನೆ ದರ್ಶನ್ ಅಕ್ಕನ ಮಗ ಡ್ರೈ ಫ್ರೂಟ್ಸ್ ಗಳನ್ನು ತಂದಿದ್ದರು. ಆದರೆ ಇದನ್ನು ಕೊಡಲು ಜೈಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಕೇವಲ ಹಣ್ಣುಗಳನ್ನು ಮಾತ್ರ ನೀಡಬಹುದು ಎಂದಿದ್ದರು. ಹೀಗಾಗಿ ಇಂದು ಹಣ್ಣುಗಳನ್ನು ತಂದಿದ್ದಾರೆ. ಜೈಲೂಟ ಮಾಡಿ ಅಜೀರ್ಣ ಸಮಸ್ಯೆಯಾಗುತ್ತಿದೆ, ಬೇಧಿಯಾಗುತ್ತಿದೆ ಎಂದು ದರ್ಶನ್ ಅಳಲು ತೋಡಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಲು ಗಡುವು: ಥಗ್ ಲೈಫ್ ಸಿನಿಮಾಕ್ಕೆ ರಾಜ್ಯದಲ್ಲಿ ಬ್ಯಾನ್‌ ಎಚ್ಚರಿಕೆ

Actor Kamal Hassan: ಮೌನವಾಗಿರುವ ಕೆಲ ನಟರ ಮಧ್ಯೆ ಚೇತನ್ ಹೇಳಿಕೆಗೆ ಭಾರೀ ಮೆಚ್ಚುಗೆ

150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣಹಚ್ಚಿದ ಬಹುಭಾಷಾ ಹಿರಿಯ ನಟ ರಾಜೇಶ್‌ ಇನ್ನಿಲ್ಲ

Kamal Hassan: ಬಹಿರಂಗ ಕ್ಷಮೆ ಕೇಳದಿದ್ದರೆ ಕಮಲ್ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ಬ್ಯಾನ್

Darshan: ಸುಮ ಅಮ್ಮನಿಂದ ದೂರವಿದ್ದರೂ ಅಂಬಿ ಅಪ್ಪಾಜಿ ಮರೆಯದ ನಟ ದರ್ಶನ್

ಮುಂದಿನ ಸುದ್ದಿ
Show comments