ದರ್ಶನ್ ಒಂದು ಮಾತು ಎಲ್ಲವನ್ನೂ ನಿಭಾಯಿಸಬಹುದಿತ್ತು: ನಟಿ ರಮ್ಯಾ

Sampriya
ಸೋಮವಾರ, 28 ಜುಲೈ 2025 (20:27 IST)
ಬೆಂಗಳೂರು:  ನಟ ದರ್ಶನ್ ಅವರು ಈ ಹಿಂದೆ ಒಂದು ಮಾತು ಹೇಳ್ತಿದ್ರೆ ರೇಣುಕಾಸ್ವಾಮಿ ಪ್ರಕರಣ ನಡೆಯುತ್ತಿರಲಿಲ್ವೇನು ಎಂದು ನಟಿ ರಮ್ಯಾ ಅವರು ಪೊಲೀಸ್ ಕಮಿಷನರ್‌ಗೆ ದೂರು ನೀಡಿದ ಬಳಿಕ ಪ್ರತಿಕ್ರಿಯಿಸಿದ್ದಾರೆ. 

ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಯಾರಿಗೂ ಕೆಟ್ಟ ಮೆಸೇಜ್ ಮಾಡದಂತೆ ಈ ಹಿಂದೆಯೇ ಹೇಳುತ್ತಿದ್ದರೆ ರೇಣುಕಾಸ್ವಾಮಿ ಪ್ರಕರಣ ನಡೆಯುತ್ತಿರಲಿಲ್ಲ ಅನ್ಸುತ್ತೆ. ರೇಣುಕಾಸ್ವಾಮಿ ದರ್ಶನ್ ಅವರ ಅಭಿಮಾನಿ ಆಗಿರುವುದರಿಂದ ಈ ಹಿಂದೆಯೇ ದರ್ಶನ್‌ ಅವರು ಕಿವಿಮಾತನ್ನು ಹೇಳುತ್ತಿದ್ದರೆ ಇಷ್ಟೆಲ್ಲಾ ನಡೆಯುತ್ತಿರಲಿಲ್ಲ ಎಂದರು. 

ಇನ್ನೂ ನಟಿ ರಕ್ಷಿತಾ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇನ್‌ಸ್ಟಾಗ್ರಾಂ ಪೋಸ್ಟ್‌ ಸಂಬಂಧ ಪ್ರತಿಕ್ರಿಯಿಸಿದ ಅವರು, ಅವರಿಬ್ಬರು ನನ್ನ ವಿಚಾರವಾಗಿ ಪೋಸ್ಟ್ ಹಾಕಿಲ್ಲ ಅನ್ಸುತ್ತೆ. ವಿಜಿ ಅವರು ಅವರ ವಿಚಾರವಾಗಿ ಹೇಳಿರಬೇಕು, ಇನ್ನೂ ರಕ್ಷಿತಾ ಅವರ ಪೋಸ್ಟ್ ಇದಕ್ಕೂ ಸಂಬಂಧಿಸಿದ್ದಲ್ಲ ಅನ್ಸುತ್ತೆ ಎಂದರು. 

ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ನಟಿ ರಕ್ಷಿತಾ ಅವರು ಹಾಕಿದ ಪೋಸ್ಟ್ ಬಗ್ಗೆ ಮಾತನಾಡಿದ ರಮ್ಯಾ ಅವರು ನನ್ನ ಬಗ್ಗೆ ಹಾಕಿಲ್ಲ ಅನಿಸುತ್ತದೆ. ಆ ಬಗ್ಗೆ ಮಾತನಾಡುವುದು ಏನು ಇಲ್ಲ. ದರ್ಶನ್ ಅವರ ನಂಬರ್​ ಕೂಡ ನನ್ನ ಬಳಿ ಇಲ್ಲ. ರೇಣುಕಾಸ್ವಾಮಿ ಕೇಸ್​ಗೂ ಮೊದಲು ಅವರು ಒಮ್ಮೆ ಮದುವೆಯಲ್ಲಿ ಸಿಕ್ಕಿದ್ದರು ಅಷ್ಟೇ. ದರ್ಶನ್ ಅವರು ಒಮ್ಮೆ ಅಭಿಮಾನಿಗಳಿಗೆ ಮನವರಿಕೆ ಮಾಡಬೇಕು. ಫ್ಯಾನ್ಸ್​​ಗೆ ಅವರು ಹೇಳಬೇಕು ಎಂದು ಹೇಳಿದ್ದಾರೆ.

ಇನ್ನೂ ದರ್ಶನ್ ಫ್ಯಾನ್ಸ್ ಅವರಿಂದ ಬರುತ್ತಿರುವ ಅಶ್ಲೀಲ ಮೆಸೇಜ್ ಸಂಬಂಧ ನಟಿ ರಮ್ಯಾ ಅವರು 43ಅಕೌಂಟ್ಸ್‌ಗಳ ವಿರುದ್ಧ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಜಯ್ ಅವರ ಕೊನೆಯ ಸಿನಿಮಾ ಜಾಗತಿಕವಾಗಿ ಗಳಿಸಿದ್ದೆಷ್ಟು ಗೊತ್ತಾ

ಹೆಸರಿಡದ ಸಿನಿಮಾದ ಸಾಹಸ ಚಿತ್ರೀಕರಣ ವೇಳೆ ಅವಘಡ: ಟಾಲಿವುಡ್‌ ನಟ ಬಾಲಯ್ಯಗೆ ಶಸ್ತ್ರಚಿಕಿತ್ಸೆ

ನಟಿ ಕಾಜೋಲ್ ಗೆ ಸಾರ್ವಜನಿಕವಾಗಿ ಮುಜುಗರ: ಖಾಸಗಿ ಭಾಗ ಸ್ಪರ್ಶಿಸಿದ ವ್ಯಕ್ತಿ, ನಟಿಯ ರಿಯಾಕ್ಷನ್ ನೋಡಿ

ನಾನು ಮನೆಯಿಂದಲೇ ಊಟ ಕಳುಹಿಸುತ್ತೇನೆ, ಸಹೋದರ ಸೋನಮ್ ಉಪವಾಸ ಸತ್ಯಾಗ್ರಹ ಕೈಬಿಡಿ: ಸಲ್ಮಾನ್ ಖಾನ್ ಮನವಿ

ತೆರೆಗೆ ಅಪ್ಪಲಿಸಿದ ಜನ ನಾಯಗನ್: ಮುಖ್ಯಮಂತ್ರಿಯನ್ನು ಬೆಳ್ಳಿತೆರೆಯಲ್ಲಿ ಕಂಡು ಅಭಿಮಾನಿಗಳು ಫುಟ್‌ಖುಷ್‌

ಮುಂದಿನ ಸುದ್ದಿ
Show comments