Select Your Language

Notifications

webdunia
webdunia
webdunia
webdunia

ವಿವಾಹ ವಿಚ್ಚೇದನ: ನಟ ಸುದೀಪ್ ದಂಪತಿಗೆ ಕೋರ್ಟ್ ಲಾಸ್ಟ್ ಚಾನ್ಸ್

ವಿವಾಹ ವಿಚ್ಚೇದನ: ನಟ ಸುದೀಪ್ ದಂಪತಿಗೆ ಕೋರ್ಟ್ ಲಾಸ್ಟ್ ಚಾನ್ಸ್
ಬೆಂಗಳೂರು: , ಬುಧವಾರ, 14 ಜೂನ್ 2017 (18:59 IST)
ಸ್ಯಾಂಡಲ್‌ವುಡ್ ನಟ ಸುದೀಪ್ ಮತ್ತು ಅವರ ಪತ್ನಿ ವಿಚ್ಚೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಪದೇ ಪದೇ ಕೋರ್ಟ್‌ಗೆ ಗೈರುಹಾಜರಾಗುತ್ತಿರುವುದರಿಂದ ಕೋರ್ಟ್ ಗರಂ ಆಗಿದೆ.
 
ಕೋರ್ಟ್‌ನಲ್ಲಿ ವಿವಾಹ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ ದಂಪತಿಗಳು ವಿಚಾರಣೆಯ ಸಂದರ್ಭದಲ್ಲಿ ಗೈರು ಹಾಜರಾಗುತ್ತಿರುವುದನ್ನು ಪರಿಗಣಿಸಿ, ಆಗಸ್ಟ್ 24 ರೊಳಗೆ ಹಾಜರಾಗುವಂತೆ ಗಡುವು ವಿಧಿಸಿದೆ.
 
 ನಟ ಸುದೀಪ್ ಹಾಗೂ ಪ್ರಿಯಾ ಅವರು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜಾರಾಗಿ ಹೇಳಿಕೆ ನೀಡಬೇಕಿತ್ತು. ಆದರೆ ವಿಚಾರಣೆಗೆ ಸುದೀಪ್ ಹಾಗೂ ಪ್ರಿಯಾ ಅವರು ಗೈರಾಗಿದ್ದು ವಿಚಾರಣೆಯನ್ನು ಆಗಸ್ಟ್ 24 ಕ್ಕೆ ಕೋರ್ಟ್ ಮುಂದೂಡಿದೆ.
 
ಕಳೆದ 2015 ರ ಸೆಪ್ಟೆಂಬರ್ ನಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸುವ ಮೂಲಕ ತಮ್ಮ 14 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹೇಳಲು ಸುದೀಪ್ ದಂಪತಿ ನಿರ್ಧರಿಸಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮೊದ್ಲು ಪಾಕ್‌ ಜತೆ ಚರ್ಚಿಸಿ ಯೋಧರ ಪ್ರಾಣ ಉಳಿಸಿ: ಮೋದಿ ಸರ್ಕಾರಕ್ಕೆ ಸಲ್ಮಾನ್ ಖಾನ್ ಚಾಟಿ