Webdunia - Bharat's app for daily news and videos

Install App

ಸಚಿವ ಜಮೀರ್ ಅಹ್ಮದ್ ಪುತ್ರ, ಕಲ್ಟ್ ಸಿನಿಮಾ ಹೀರೋ ಜೈದ್ ಖಾನ್ ವಿರುದ್ಧ ದೂರು

Krishnaveni K
ಶನಿವಾರ, 30 ನವೆಂಬರ್ 2024 (11:12 IST)
ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಪುತ್ರ, ಕಲ್ಟ್ ಸಿನಿಮಾದ ಹೀರೋ ಕಮ್ ನಿರ್ಮಾಪಕ ಜೈದ್ ಖಾನ್ ವಿರುದ್ಧ ವಂಚನೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಕೇಳಿಬಂದಿದ್ದು ದೂರು ದಾಖಲಾಗಿದೆ.

ಜೈದ್ ಖಾನ್ ನಿರ್ಮಿಸಿ ನಟಿಸುತ್ತಿರುವ ಕಲ್ಟ್ ಸಿನಿಮಾದಲ್ಲಿ ಡ್ರೋಣ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದಕ್ಕೆ ಕಾರಣ ಕಲ್ಟ್ ಸಿನಿಮಾ ತಂಡ ನೀಡಿದ ಕಿರುಕುಳ ಎಂಬ ಆರೋಪ ಕೇಳಿಬಂದಿದೆ. ಸಾಲ ಸೋಲ ಮಾಡಿ ಖರೀದಿಸಿದ್ದ ಡ್ರೋಣ್ ಹಾಳು ಮಾಡಿದ್ದಲ್ಲದೆ, ಪರಿಹಾರವೂ ಕೊಡದೇ ಚಿತ್ರತಂಡ ಸತಾಯಿಸಿತ್ತು. ಈ ಕಾರಣಕ್ಕೆ ಮನನೊಂದು ಡ್ರೋಣ್ ಟೆಕ್ನಿಷಿಯನ್ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಈ ಸಂಬಂಧ ಜೈದ್ ಖಾನ್ ವಿರುದ್ಧ ದೂರು ದಾಖಲಾಗಿದೆ. ಸಿನಿಮಾಗಳಿಗೆ ಡ್ರೋಣ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುವ ಸಂತೋಷ್ ತನ್ನ ಕೆಲಸಕ್ಕೆ ದಿನಕ್ಕೆ 25 ಸಾವಿರ ರೂ. ಸಂಭಾವನೆ ಪಡೆಯುತ್ತಿದ್ದ. ಸಿನಿಮಾ  ಚಿತ್ರೀಕರಣಕ್ಕೆಂದೇ ಸಂತೋಷ್ ಸಾಲ ಸೋಲ ಮಾಡಿ 25 ಲಕ್ಷ ರೂ. ಕೊಟ್ಟು ಡ್ರೋಣ್ ಖರೀದಿ ಮಾಡಿಟ್ಟುಕೊಂಡಿದ್ದ.

ಅದೇ ರೀತಿ ಕಲ್ಟ್ ಸಿನಿಮಾಗೂ ಸಂತೋಷ್ ಡ್ರೋಣ್ ಬಳಕೆ ಮಾಡಲಾಗಿದೆ. ತುಂಬಾ ರಿಸ್ಕಿ ಶಾಟ್ ಡ್ರೋಣ್ ಗೆ ಹಾನಿಯಾಗಬಹುದು ಎಂದರೂ ಕೇಳದೇ ಚಿತ್ರತಂಡ ಚಿತ್ರೀಕರಣಕ್ಕೆ ಮುಂದಾಗಿದೆ. ಈ ವೇಳೆ ಡ್ರೋಣ್ ಗೆ ಹಾನಿಯಾಗಿದೆ. ಇದರ ನಷ್ಟ ಪರಿಹಾರ ಕೇಳಲು ಬಂದರೆ ಜೈದ್ ಖಾನ್ ಮತ್ತು ಚಿತ್ರತಂಡ ಖಾಲಿ ಪೇಪರ್ ಮೇಲೆ ಸಹಿ ಹಾಕಿಸಿ ಆಧಾರ್ ನಂಬರ್ ಪಡೆದು ಅವಮಾನ ಮಾಡಿದೆ. ಇದರಿಂದ ಮನನೊಂದು ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಸಂಬಂಧ ದೂರು ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹೀರೋ ಆಗುವವರೆಗೆ ಫ್ಯಾನ್ಸ್ ಬೇಕು, ಆದ ಮೇಲೆ ಬರ್ತ್ ಡೇ ಆಚರಿಸಲು ಬೇಡ: ನಟ ಗಣೇಶ್ ಟ್ರೋಲ್

ನಟಿ ಶೆಫಾಲಿ ಜರಿವಾಲಾ ಸಾವಿಗೆ ನಿಜ ಕಾರಣ ಕೊನೆಗೂ ಬಯಲು

ಸೌಂದರ್ಯವನ್ನು ಕಾಪಾಡಲು ಹೋಗಿ ಕೊನೆಯುಸಿರೆಳೆದ್ರಾ ಕಾಂಟ ಲಗಾ ಸುಂದರಿ

ಇದು ಹೋಗುವ ಸಮಯವಲ್ಲ: ಶೆಪಾಲಿ ಸಾವಿನ ಬಗ್ಗೆ ಸ್ನೇಹಿತೆ ಆರತಿ ಸಿಂಗ್ ಭಾವುಕ ಪೋಸ್ಟ್‌

ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಗುಡ್ ನ್ಯೂಸ್

ಮುಂದಿನ ಸುದ್ದಿ
Show comments