Webdunia - Bharat's app for daily news and videos

Install App

ಪುಪ್ಪ 2 ಕಾಲ್ತುಳಿತ ಬೆನ್ನಲ್ಲೇ ಸಿಎಂ ರೇವಂತ್ ರೆಡ್ಡಿ ಭೇಟಿಯಾದ ತೆಲುಗು ಚಿತ್ರರಂಗ

Sampriya
ಗುರುವಾರ, 26 ಡಿಸೆಂಬರ್ 2024 (14:56 IST)
Photo Courtesy X
ತೆಲಂಗಾಣ: ಪುಪ್ಪ 2 ಮೊದಲ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತದ ಬೆನ್ನಲ್ಲೇ ತೆಲುಗು ಚಿತ್ರರಂಗದ ಪ್ರಮುಖರು ಸಿಎಂ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಗುರುವಾರ (ಡಿಸೆಂಬರ್ 26, 2024) ಬೆಳಗ್ಗೆ ಹೈದರಾಬಾದ್‌ನಲ್ಲಿರುವ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್‌ನಲ್ಲಿ (ಐಸಿಸಿಸಿ) ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರೊಂದಿಗೆ ತೆಲಂಗಾಣ ರಾಜ್ಯ ಚಲನಚಿತ್ರ ಅಭಿವೃದ್ಧು ನಿಗಮ ಸಭೆ ನಡೆಸಿದೆ.  ಈ ವೇಳೆ ಅಲ್ಲು ಅರ್ಜುನ್ ತಂದೆ, ನಿರ್ಮಾಪಕ ಅಲ್ಲು ಅರವಿಂದ್ ಕೂಡಾ ಭಾಗಿಯಾದರು.

ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮದ (ಟಿಜಿಎಫ್‌ಡಿಸಿ) ಅಧ್ಯಕ್ಷ ವಿ. ವೆಂಕಟ ರಮಣ ರೆಡ್ಡಿ (ದಿಲ್ ರಾಜು) ಅವರು ಮುಂದಿನ ದಿನಗಳಲ್ಲಿ ಆರೋಗ್ಯಕರ ವಾತಾವರಣವನ್ನು ಹೇಗೆ ಹೊಂದುವುದು ಎಂಬುದರ ಬಗ್ಗೆ ಮಾತನಾಡಿದರು.

ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಮಲ್ಲು, ಛಾಯಾಗ್ರಹಣ ಸಚಿವ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ, ಡಿಜಿಪಿ ಜಿತೇಂದರ್ ಮತ್ತು ರಾಜ್ಯ ಆಡಳಿತದ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಾಗಿದ್ದಾರೆ.

ನಟರಾದ ಅಕ್ಕಿನೇನಿ ನಾಗಾರ್ಜುನ, ದಗ್ಗುಬಾಟಿ ವೆಂಕಟೇಶ್, ಸಿದ್ದು ಜೊನ್ನಲಗಡ್ಡ, ಕಿರಣ್ ಅಬ್ಬಾವರಂ; ನಿರ್ಮಾಪಕರು ಅಲ್ಲು ಅರವಿಂದ್, ದಗ್ಗುಬಾಟಿ ಸುರೇಶ್ ಬಾಬು; ನಿರ್ದೇಶಕರಾದ ಕೆ ರಾಘವೇಂದ್ರ ರಾವ್, ತ್ರಿವಿಕ್ರಮ್, ಬೋಯಪತಿ ಶ್ರೀನು, ವಂಶಿ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಾನು ನಿಮ್ಮೊಂದಿಗೆ ಫ್ಲರ್ಟ್‌ ಮಾಡ್ಬೇಕು: ನಟಿಗೆ ಸಂದೇಶ ಕಳುಹಿಸಿ ಸಿಕ್ಕಿಬಿದ್ದ ಕಿರುತೆರೆ ನಟ

Madenooru Manu: ರೇಪ್‌ಕೇಸ್‌ನಲ್ಲಿ ಜೈಲು ಸೇರಿದ ನಟ ಮಡೆನೂರು ನಟ

Madenur Manu: ಮಡೆನೂರು ಮನು ಹೇಳಿದ್ದು ನಿಜವೇ ಆದರೆ.. ರೊಚ್ಚಿಗೆದ್ದ ಡಿಬಾಸ್ ಫ್ಯಾನ್ಸ್

Jaggesh: ಶಿವರಾಜ್ ಕುಮಾರ್ ಸಾವು ಬಯಸಿದವರಿಗೆ ಕೇಡುಗಾಲ ಬರಲಿದೆ: ನಟ ಜಗ್ಗೇಶ್ ಶಾಪ

Rape Case: ಮಡೆನೂರು ಮನು 31 ಚಾಟಿಂಗ್ ಡಿಟೇಲ್ಸ್ ಪಡೆದ ಖಾಕಿ, ಹಲವು ನಟ ನಟಿಯರಿಗೂ ಸಂಕಷ್ಟ

ಮುಂದಿನ ಸುದ್ದಿ
Show comments