Webdunia - Bharat's app for daily news and videos

Install App

ವಿವಾದದಿಂದಾಗಿ ಕರ್ಣ ಸೀರಿಯಲ್ ನಿಂದ ಹೊರಬಂದರಾ ಭವ್ಯಾ ಗೌಡ

Krishnaveni K
ಮಂಗಳವಾರ, 17 ಜೂನ್ 2025 (08:46 IST)
Photo Credit: Instagram
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗಬೇಕಿದ್ದ ಕರ್ಣ ಧಾರವಾಹಿ ಇದ್ದಕ್ಕಿದ್ದಂತೆ ಮುಂದೂಡಿಕೆಯಾಗಿದೆ. ಇದೀಗ ನಾಯಕಿ ಭವ್ಯಾ ಗೌಡ ಧಾರವಾಹಿಯಿಂದಲೇ ಹೊರ ಬಂದಿದ್ದಾರಾ ಎಂಬ ಊಹಾಪೋಹಗಳು ಎದ್ದಿವೆ. ಅಸಲಿ ಸತ್ಯವೇನು ಇಲ್ಲಿದೆ ನೋಡಿ.
 

ಭವ್ಯಾ ಗೌಡ ಈ ಮೊದಲು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದವರು. ಅದಾದ ಬಳಿಕ ಅವರು ರಿಯಾಲಿಟಿ ಶೋ ಒಂದರಲ್ಲಿ ಭಾಗಿಯಾಗಬೇಕಿತ್ತು. ಆದರೆ ಆ ರಿಯಾಲಿಟಿ ಶೋನಿಂದ ಆರೋಗ್ಯದ ನೆಪದಲ್ಲಿ ಅವರು ಹೊರಬಂದಿದ್ದರು. ಆದರೆ ಆ ವಾಹಿನಿ ಜೊತೆಗಿನ ಒಪ್ಪಂದ ಇನ್ನೂ ಮುಗಿದಿಲ್ಲ.

ಇದರ ನಡುವೆ ಅವರು ಕರ್ಣ ಧಾರವಾಹಿಯ ಹೀರೋಯಿನ್ ಆಗಿ ಸೆಲೆಕ್ಟ್ ಆಗಿದ್ದಾರೆ. ಅಷ್ಟೇ ಅಲ್ಲ ಧಾರವಾಹಿಯಲ್ಲಿ ಅವರು ನಟಿಸಿರುವ ಪ್ರೋಮೋಗಳೂ ಬಿಡುಗಡೆಯಾಗಿತ್ತು. ಆದರೆ ಈಗ ಆ ವಾಹಿನಿ ಭವ್ಯಾ ನಟಿಸಿರುವ ಧಾರವಾಹಿಗೆ ಸ್ಟೇ ತಂದಿದೆ. ಇದರಿಂದಾಗಿ ಕರ್ಣ ಧಾರವಾಹಿಯನ್ನು ಇದ್ದಕ್ಕಿದ್ದಂತೆ ಮುಂದೂಡಬೇಕಾಗಿ ಬಂತು.

ಈಗಾಗಲೇ ಭವ್ಯಾ ತಮ್ಮ ಸೋಷಿಯಲ್ ಮೀಡಿಯಾ ಪುಟದಿಂದ ಕರ್ಣ ಧಾರವಾಹಿಯ ಎಲ್ಲಾ ಪ್ರೋಮೋಗಳನ್ನೂ ಅಳಿಸಿ ಹಾಕಿದ್ದಾರೆ. ಹೀಗಾಗಿ ಭವ್ಯಾ ಧಾರವಾಹಿಯಿಂದ ಹೊರಬಂದರಾ ಎಂಬ ಅನುಮಾನ ಮೂಡಿತ್ತು. ಆದರೆ ಈ ನಡುವೆ ಅವರು ಪ್ರಕ್ರಿಯೆಯ ಮೇಲೆ ನಂಬಿಕೆಯಿಡಿ ಎಂದು ಸಂದೇಶವೊಂದನ್ನು ಬರೆದುಕೊಂಡಿದ್ದಾರೆ. ಹೀಗಾಗಿ ಅವರು ಇನ್ನೂ ಧಾರವಾಹಿಯಿಂದ ಹೊರಬಂದಿಲ್ಲ ಎನ್ನಲಾಗಿದೆ. ಹೊಸ ದಿನಾಂಕವನ್ನು ಜೀ ವಾಹಿನಿ ಇನ್ನಷ್ಟೇ ಪ್ರಕಟಿಸಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಾಣಿ ಜಲಾಶಯದಲ್ಲಿ ದೋಣಿ ದುರಂತ: ಕಾಂತಾರ ಚಿತ್ರತಂಡಕ್ಕೆ ಬಿಗ್ ಶಾಕ್‌

ನಿಂತೇ ಹೋಯಿತು ಎಂದು ಸುದ್ದಿಯಾಗಿದ್ದ ಸತೀಶ್ ನೀನಾಸಂ ಸಿನಿಮಾ ಶೂಟಿಂಗ್ ಪೂರ್ಣ

ವೃಕ್ಷಮಾತೆ ಸಿನಿಮಾ ತಂಡದ ವಿರುದ್ಧ ದೂರು ಕೊಟ್ಟ ಸಾಲು ಮರದ ತಿಮ್ಮಕ್ಕ ದೂರು

ವಿಜಯ್ ದೇವರಕೊಂಡ ಅದೆಲ್ಲವೂ ನನಗಿಷ್ಟ ಎಂದು ನಾಚಿಕೊಂಡ ರಶ್ಮಿಕಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

ಮುಂದಿನ ಸುದ್ದಿ
Show comments