Webdunia - Bharat's app for daily news and videos

Install App

ಜಗ್ಗೇಶ್ ಪುತ್ರನಿಗೆ ಚಾಕು ಹಾಕಿದವನ ಬಗ್ಗೆ ಮಹತ್ವದ ಸುಳಿವು ಲಭ್ಯ

Webdunia
ಸೋಮವಾರ, 14 ಆಗಸ್ಟ್ 2017 (18:01 IST)
ಜಗ್ಗೇಶ್ ಪುತ್ರ ಗುರುರಾಜ್ ಜಗ್ಗೇಶ್`ಗೆ ಬೆಳಗ್ಗೆ ಚಾಕು ಇರಿದ ದುಷ್ಕರ್ಮಿಯ ಬಗ್ಗೆ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಹೌದು, ಹಲ್ಲೆ ಮಾಡಿದ ಆರೋಪಿಯನ್ನ ಹೆಬ್ಬಾಳದ ಶಿವಶಂಕರ್ ಎಂದು ಗುರ್ತಿಸಲಾಗಿದೆ.

ಗುರುರಾಜ್ ಜಗ್ಗೇಶ ಬರೆದುಕೊಂಡಿದ್ದ ಕಾರಿನ ನಂಬರ್ ಮತ್ತು ಸಿಸಿಟಿವಿ ದೃಶ್ಯಾವಳಿ ಆಧರಿಸಿದ ಪೊಲೀಸರು ಹಲ್ಲೆಕೋರನ ಗುರುತು ಪತ್ತೆ ಹಚ್ಚಿದ್ದಾರೆ. ಸದ್ಯ, ಇದೇ ಕಾರ್ಯಾಚರಣೆಯಲ್ಲಿರುವ ಪೊಳಿಸರು ಸದ್ಯದಲ್ಲೇ ಆರೋಪಿಯನ್ನ ಬಂಧಿಸುವ ಸಾಧ್ಯತೆ ಇದೆ. ಈ ಮಧ್ಯೆ, ಹಲ್ಲೆಗೊಳಗಾದ ಗುರುರಾಜ್ ಜಗ್ಗೇಶ್ ತೊಡೆಭಾಗದಲ್ಲಿ 9 ಹೊಲಿಗೆ ಹಾಕಲಾಗಿದ್ದು, ಅಪಾಯದಿಂದ ಪಾರಾಗಿದ್ಧಾರೆ.

ಆರ್.ಟಿ.ನಗರದಲ್ಲಿ ಮಗನನ್ನ ಶಾಲೆಗೆ ಬಿಡಲು ಗುರುರಾಜ್ ಕಾರಿನಲ್ಲಿ ತೆರಳುತ್ತಿದ್ಧಾಗ ಸೀಕ್ ವೇಲ್ ಜಂಕ್ಷನ್ ಬಳಿ ಹಿಂಬದಿಯಿಂದ ಕಾರೊಮದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದರೂ ಕಾರು ನಿಲ್ಲಿಸದೇ ತೆರಳಿದ್ದರಿಂದ ಚೇಸ್ ಮಾಡಿದ ಗುರುರಾಜ್ ಸಿಗ್ನಲ್`ನಲ್ಲಿ ಅಡ್ಡಗಟ್ಟಿದ್ದಾರೆ. ಕಾರಿಗೆ ಗುದ್ದಿದ ಬಗ್ಗೆ ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದಿದೆ. ಬಳಿಕ ಕಾರಿನಿಂದ ಡ್ಯಾಗರ್ ತೆಗೆದ ಆತ ಇರಿಯಲು ಯತ್ನಿಸಿದ್ದಾನೆ. ಅದೃಷ್ಟವಶಾತ್ ಗುರುರಾಜ್ ಎಗರಿದ್ದರಿಂದ ತೊಡೆಗೆ ಗಾಯವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments