Webdunia - Bharat's app for daily news and videos

Install App

BBK11: ಬಿಗ್ ಬಾಸ್ ನಿಂದ ಕಿತ್ತಾಡಿದ್ದಕ್ಕೆ ಎಲಿಮಿನೇಟ್ ಜಗದೀಶ್, ರಂಜಿತ್ ನೋಡಿ ಕಣ್ಣೀರು ಹಾಕಿದ ಮನೆಮಂದಿ

Krishnaveni K
ಶುಕ್ರವಾರ, 18 ಅಕ್ಟೋಬರ್ 2024 (10:27 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಆಗಬಾರದ ಘಟನೆಯೊಂದು ನಡೆದು ಹೋಗಿದೆ. ವಾರದ ಮಧ್ಯದಲ್ಲಿ ಪರಸ್ಪರ ಕಿತ್ತಾಟ ಮಾಡಿಕೊಂಡ ಲಾಯರ್ ಜಗದೀಶ್ ಮತ್ತು ರಂಜಿತ್ ಅವರನ್ನು ಮನೆಯಿಂದ ಹೊರಹಾಕಲಾಗಿದೆ.

ಮೊನ್ನೆಯೇ ಬಿಗ್ ಬಾಸ್ ಮನೆಯಿಂದ ಇಬ್ಬರು ಹೊರಹೋದ ಸುದ್ದಿ ಔಟ್ ಆಗಿತ್ತು. ಇಂದಿನ ಎಪಿಸೋಡ್ ನಲ್ಲಿ ಇದು ಖಚಿತವಾಗಲಿದೆ. ಈ ಬಗ್ಗೆ ಕಲರ್ಸ್ ವಾಹಿನಿ ಈಗಾಗಲೇ ಪ್ರೋಮೋ ಹರಿಯಬಿಟ್ಟಿದೆ. ಹಂಸ ವಿಚಾರಕ್ಕೆ ಜಗದೀಶ್ ವಿರುದ್ಧ ಮನೆಯವರೆಲ್ಲರೂ ತಿರುಗಿಬಿದ್ದಿದ್ದರು.

ನಿನ್ನೆಯ ಎಪಿಸೋಡ್ ನಲ್ಲಿ ಜಗದೀಶ್ ಮತ್ತು ಸುರೇಶ್ ನಡುವೆ ಮೊದಲು ವಾಗ್ವಾದ ಶುರುವಾಗಿತ್ತು. ಹಂಸ ಬಗ್ಗೆ ಜಗದೀಶ್ ಕೆಟ್ಟ ಪದ ಬಳಕೆ ಮಾಡಿದ್ದಕ್ಕೆ ಸುರೇಶ್ ನನ್ನ ಬಳಿ ಹೆಣ್ಣು ಮಕ್ಕಳ ಬಗ್ಗೆ ಆ ರೀತಿ ಮಾತನಾಡಬೇಡಿ ಎಂದಿದ್ದರು. ಅಲ್ಲಿಂದ ಇಬ್ಬರ ನಡುವೆ ವಾಗ್ವಾದ ಶುರುವಾಗಿದ್ದು, ಇಡೀ ಮನೆಯೇ ಹತ್ತಿ ಉರಿಯುವಂತೆ ಮಾಡಿದೆ.

ಮನೆಯವರೆಲ್ಲರೂ ಜಗದೀಶ್ ವಿರುದ್ಧ ತಿರುಗಿಬಿದ್ದಿದ್ದಾರೆ. ತೀರಾ ವೈಯಕ್ತಿಕ ಮಟ್ಟಕ್ಕೆ ಪದ ಪ್ರಯೋಗಗಳು, ಟೀಕೆಗಳೂ ಬಂತು. ಚೈತ್ರಾರನ್ನು ಜಗದೀಶ್ ರೋಲ್ ಕಾಲ್ ಎಂದರೆ ಜಗದೀಶ್ ಗೆ ಲಾಯರ್ ಲೈಸೆನ್ಸೇ ಇಲ್ಲ ಎಂದು ಚೈತ್ರಾ ಕೂಗಾಡಿದರು. ಮಾನಸಾ, ಭವ್ಯಾ ಸೇರಿದಂತೆ ಎಲ್ಲಾ ಹೆಣ್ಣು ಮಕ್ಕಳು ಕಿತ್ತಾಟಕ್ಕಿಳಿದಾಗ ಮನೆಯ ಉಳಿದ ಗಂಡು ಮಕ್ಕಳು ಬೆಂಬಲವಾಗಿ ನಿಂತರು. ಈ ವೇಳೆ ಹೆಣ್ಣು ಮಕ್ಕಳ ಮೈಮೇಲೆ ಬೀಳಲು ಹೋಗುತ್ತಿದ್ದ ಜಗದೀಶ್ ರನ್ನು ರಂಜಿತ್ ತಳ್ಳಿದರು. ಇಬ್ಬರ ನಡುವೆ ತಳ್ಳಾಟವೂ ನಡೆದಿದೆ.

ಈ ಬಗ್ಗೆ ಬಿಗ್ ಬಾಸ್ ಎಲ್ಲರ ಅಭಿಪ್ರಾಯವನ್ನು ಮತ್ತು ನಡೆದ ಘಟನೆಯನ್ನು ಸ್ಪರ್ಧಿಗಳ ಬಾಯಿಯಿಂದಲೇ ಕೇಳಿದರು. ಬಳಿಕ ಬಿಗ್ ಬಾಸ್ ತೀರ್ಪು ನೀಡಿದ್ದು, ಹೆಣ್ಣು ಮಕ್ಕಳ ಬಗ್ಗೆ ಅಗೌರವವಾಗಿ ನಡೆದುಕೊಂಡಿದ್ದಕ್ಕೆ ಜಗದೀಶ್ ಅವರನ್ನು ಮತ್ತು ದೈಹಿಕವಾಗಿ ತಳ್ಳಾಟ ಮಾಡಿದ್ದಕ್ಕೆ ರಂಜಿತ್ ರನ್ನು ಮನೆಯಿಂದ ಹೊರಹಾಕಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಹುನಿರೀಕ್ಷಿತ ಕೊತ್ತಲವಾಡಿ ಸಿನಿಮಾದ ಟ್ರೈಲರ್ ಬಿಡುಗಡೆ: ಆಕ್ಷನ್ ಲುಕ್‌ನಲ್ಲಿ ಮಿಂಚಿದ ಪೃಥ್ವಿ ಅಂಬರ್

ಇದೇ 24ರಂದು ವೀರಮಲ್ಲು ರಿಲೀಸ್‌, ರಾಜಕೀಯಕ್ಕಾಗಿ ದಿಟ್ಟ ನಿರ್ಧಾರ ಕೈಗೊಂಡ ಪವನ್ ಕಲ್ಯಾಣ್

ಮೀ ಟೂನಲ್ಲಿ ಸದ್ದು ಮಾಡಿದ್ದ ಬಾಲಿವುಡ್ ನಟಿ ತನುಶ್ರೀ ದತ್ತಾ ಈಗ ಕಣ್ಣೀರು ಹಾಕುತ್ತಿರುವುದೇಕೆ

ಡೆಂಗ್ಯೂ ಜ್ವರ: ಆಸ್ಪತ್ರೆಗೆ ದಾಖಲಾಗಿದ್ದ ನಟ ವಿಜಯ್ ದೇವರಕೊಂಡ ಡಿಸ್ಚಾರ್ಜ್‌

ಬಿಗ್ ಬಾಸ್ 12 ನಡೆಯೋದು ಈ ಹೊಸ ಲೊಕೇಶನ್ ನಲ್ಲಿ ಎಲ್ಲಿದೆ ಇದು

ಮುಂದಿನ ಸುದ್ದಿ
Show comments