Select Your Language

Notifications

webdunia
webdunia
webdunia
webdunia

ಸದ್ದು ಮಾಡುತ್ತಿದೆ `ಅವಲಕ್ಕಿ ಪವಲಕ್ಕಿ’ ಟ್ರೇಲರ್!

ಸದ್ದು ಮಾಡುತ್ತಿದೆ `ಅವಲಕ್ಕಿ ಪವಲಕ್ಕಿ’ ಟ್ರೇಲರ್!
bengaluru , ಬುಧವಾರ, 25 ಆಗಸ್ಟ್ 2021 (17:58 IST)

ಶ್ರೀ ಪ್ರಣವ್ ಪಿಕ್ಚರ್ಸ್ ಲಾಂಛನದಲ್ಲಿ ರಂಜಿತಾ ಸುಬ್ರಹ್ಮಣ್ಯ ಅವರು ನಿರ್ಮಿಸಿರುವ "ಅವಲಕ್ಕಿ ಪವಲಕ್ಕಿ" ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಒಂದು ವಾರದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ. ಟ್ರೇಲರ್ ಗೆ ಅಪಾರ ಮೆಚ್ಚುಗೆಯೂ ದೊರಕಿದೆ. ಈ ಸಂತಸವನ್ನು ಚಿತ್ರತಂಡ ಮಾ

ಧ್ಯಮದ ಮುಂದೆ ಹಂಚಿಕೊಂಡರು.

ನಾನು ಹೈದರಾಬಾದ್ ಮೂಲದವನು. ಇದು ನನ್ನ ಮೊದಲ ಚಿತ್ರ. ಚಿತ್ರ ಮುಗಿಯುವಷ್ಟರಲ್ಲಿ ಕನ್ನಡ ಕಲಿತ್ತಿದ್ದೀನಿ. ವಿಭಿನ್ನ ಕಥೆಯಿಟ್ಟುಕೊಂಡು ಸಿನಿಮಾ ನಿರ್ದೇಶಿಸಿದ್ದೇನೆ. ಈ ಚಿತ್ರದ ಕಥೆ ಮಕ್ಕಳ ಮೇಲೆ ಹೆಣೆಯಲಾಗಿದರೂ, ಇದು ಪೂರ್ತಿ ಮಕ್ಕಳ ಚಿತ್ರವಲ್ಲ ಎನ್ನುವ ನಿರ್ದೇಶಕ ದುರ್ಗಾಪ್ರಸಾದ್ ನಮ್ಮ ಚಿತ್ರ ಈಗಾಗಲೇ ಅನೇಕ ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿದೆ ಹಾಗೂ ಪ್ರಶಸ್ತಿಗಳನ್ನು ಗೆದ್ದು ಕೊಂಡಿದೆ. ಸದ್ಯದಲ್ಲೇ ನಿಮ್ಮ ಮುಂದೆ ಬರಲಿದೆ ನೋಡಿ ಹರಸಿ ಎಂದರು.

ಕಥೆ ಇಷ್ಟವಾಯಿತು. ಹೆಬ್ರಿ ಕಾಡಿನಲ್ಲೇ ಇಪ್ಪತ್ತು ದಿನಗಳ ಚಿತ್ರೀಕರಣ ಮಾಡಿದ್ದ ಅನುಭವ ಮರೆಯಲು ಸಾಧ್ಯವೇ ಇಲ್ಲ. ಏನು ಸಿಗದ ಜಾಗದಲ್ಲಿ ಯಾವುದಕ್ಕೂ ‌ಕೊರತೆ ಬರದ ಹಾಗೆ ಚಿತ್ರೀಕರಣವಾಗಿದೆ ಅಂದರೆ ಅದಕ್ಕೆ ಚಿತ್ರತಂಡದ ಪ್ರೋತ್ಸಾಹ ವೇ ಪ್ರಮುಖ ಕಾರಣ ಎನ್ನುತ್ತಾರೆ ನಿರ್ಮಾಪಕಿ ರಂಜಿತಾ ಸುಬ್ರಹ್ಮಣ್ಯ. ಇಪ್ಪತ್ತೈದು ವಯಸ್ಸಿನ ಒಳಗಿನ ಉತ್ಸಾಹಿ ಗಳೇ ಈ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲೂ ಹೆಚ್ಚಿನವರು ರಂಗಭೂಮಿಯಲ್ಲಿ ಅನುಭವ ಹೊಂದಿರುವವರು ಎನ್ನುತ್ತಾರೆ ನಿರ್ಮಾಪಕರು.

ಸಂಗೀತ ನಿರ್ದೇಶಕ ಜುಬಿನ್ ಪಾಲ್ ಚಿತ್ರದ ಹಾಡುಗಳ ಹಾಗೂ ಹಾಡಿದವರ ಬಗ್ಗೆ ವಿವರಣೆ ನೀಡಿದರು. ಸಹ ನಿರ್ದೇಶಕ ಸಂದೀಪ್ ಅಯ್ಯರ್ ಚಿತ್ರ ಸಾಗಿ ಬಂದ ಹಾದಿಯ ಬಗ್ಗೆ ಮಾತನಾಡಿದರು.

ಕಲಾವಿದರಾದ ಇಂದಿರಾ ನಾಯರ್, ರಾಘವೇಂದ್ರ, ಸಿಂಚನಾ, ಪ್ರವೀಣ್, ಪ್ರಿಯಾ ಶಂಕರ್, ಉದಯಕುಮಾರ್, ನಾಗರಾಜ್ ಭಂಡಾರಿ ಹಾಗೂ ಛಾಯಾಗ್ರಹಕ ನಿರೀಕ್ಷಿತ್ ತಮ್ಮ ಅನುಭವ ಹಂಚಿಕೊಂಡರು. ವಿನೋದ್, ಅನೂಪ್ ಹಾಗೂ ಸುಖೇಶ್ ಸಹ ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಸ್ವೆಟರ್ ಹಗರಣದಲ್ಲಿ ಜಗ್ಗೇಶ್ ಹೆಸರು: ಕುದ್ದು ಹೋದ ನಟ