Webdunia - Bharat's app for daily news and videos

Install App

ಕಿಚ್ಚ ಸುದೀಪ್ ವಿರುದ್ಧ ಹಚ್ಚ ನಿರ್ಮಾಪಕ ರೆಹಮಾನ್ ಆರೋಪ

Webdunia
ಸೋಮವಾರ, 10 ಜುಲೈ 2023 (16:30 IST)
ಬೆಂಗಳೂರು: ಹಿರಿಯ ನಿರ್ಮಾಪಕ ಎಂ.ಎನ್ ಕುಮಾರ್ ಬಳಿಕ ಮತ್ತೊಬ್ಬ ಸ್ಯಾಂಡಲ್ ವುಡ್ ನಿರ್ಮಾಪಕ ರೆಹಮಾನ್ ಇದೀಗ ಕಿಚ್ಚ ಸುದೀಪ್ ವಿರುದ್ಧ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪ ಮಾಡಿದ್ದಾರೆ.

ಕಿಚ್ಚ ಸುದೀಪ್ ಜೊತೆ ಹುಚ್ಚ ಸಿನಿಮಾ ಮಾಡಿದ್ದ ನಿರ್ಮಾಪಕ ರೆಹಮಾನ್ ನನಗೆ ಸುದೀಪ್ ರಿಂದಾಗಿ 35 ಲಕ್ಷ ಲಾಸ್ ಆಗಿದೆ. ಮನೆ ಮಾರಿ ಬಾಡಿಗೆ ಮನೆಯಲ್ಲಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

‘ಹುಚ್ಚ ಬಳಿಕ ಹಿಂದಿಯ ಸ್ವರ್ಗ್ ಸಿನಿಮಾ ರಿಮೇಕ್ ಮಾಡೋಣವೆಂದರು. ಹಾಗಾಗಿ 10 ಲಕ್ಷ ರೂಪಾಯಿಗೆ ರಿಮೇಕ್ ರೈಟ್ಸ್ ತಂದೆ. ಆದರೆ ಸಿನಿಮಾ ಮುಂದಕ್ಕೆ ಹೋಗಲಿಲ್ಲ. ಬಳಿಕ ಅಂದಾಜ್ ಅಪ್ನಾ ಅಪ್ನಾ ರಿಮೇಕ್ ಮಾಡೋಣವೆಂದರು. ಅದರ ಹಕ್ಕನ್ನೂ ತಂದೆ. ಅದೂ ಕ್ಯಾನ್ಸಲ್ ಆಯಿತು. ಇದೆಲ್ಲದರಿಂದ ನನಗೆ 35  ಲಕ್ಷ ರೂ. ಲಾಸ್ ಆಗಿದೆ’ ಎಂದಿದ್ದಾರೆ.

‘ಹಣಕ್ಕಾಗಿ ಸಾಕಷ್ಟು ಬಾರಿ ಅವರ ಮನೆ ಬಳಿ ಹೋಗಿದ್ದೆ. ಪ್ರತೀ ಬಾರಿ ಮನೆಯಲ್ಲಿಲ್ಲ ಎಂಬ ಉತ್ತರ ಬರುತ್ತಿತ್ತು. ಕೊನೆಗೆ ಒಂದು ದಿನ ಅವರ ಹುಟ್ಟುಹಬ್ಬದಿನ ಮನೆಗೆ ಹೋಗಿದ್ದೆ. ಆಗ ನನ್ನನ್ನು ಅಭಿಮಾನಿಗಳ ಗುಂಪಿನಲ್ಲಿ ನಿಲ್ಲಿಸಿದರು. ನನಗೆ 10 ಲಕ್ಷ ರೂ. ವಾಪಸ್ ಮರಳಿಸಿದರೂ ಸಾಕು. ಮನೆ ಬಾಡಿಗೆ ಕಟ್ಟಲು ಸಹಾಯವಾಗುತ್ತದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Darshan Thoogudeepa: ತೋಟದ ಮನೆಯಲ್ಲಿ ಎತ್ತಿನ ಗಾಡಿ ಮೇಲೆ ನಟ ದರ್ಶನ್ ಫುಲ್ ಮಜಾ Video

Vijay Prakash: ಗಾಯಕ ವಿಜಯ್ ಪ್ರಕಾಶ್ ಲವ್ ಮ್ಯಾರೇಜ್ ಪ್ರತಿಯೊಬ್ಬರಿಗೂ ಮಾದರಿ

ಟೈಗರ್‌ ಶ್ರಾಫ್‌ ಹತ್ಯೆಗೆ ಸುಫಾರಿ ಕೊಡಲಾಗಿದೆ ಎಂದು ಪೊಲೀಸರಿಗೆ ಕರೆ ಮಾಡಿದ್ದ ವ್ಯಕ್ತಿ ಅಂದರ್‌

Darshan Thoogudeepa: ಪವಿತ್ರಾ ಗೌಡಗೂ ದರ್ಶನ್ ಗೂ ಮದುವೆಯಾಗಿದ್ಯಾ, ಏನು ಸಂಬಂಧ ಎಂದು ಪ್ರಶ್ನಿಸಿದ ಜಡ್ಜ್

ಮುಂದಿನ ಸುದ್ದಿ
Show comments