Webdunia - Bharat's app for daily news and videos

Install App

ರಿಷಬ್ ಶೆಟ್ಟಿ ಸಿನಿಮಾದಲ್ಲಿ ಅಮಿತಾಭ್ -ಸುದೀಪ್ ನಟಿಸಲಿದ್ದಾರಂತೆ!

Webdunia
ಶನಿವಾರ, 4 ಆಗಸ್ಟ್ 2018 (07:44 IST)
ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾದ ನಂತರ ನಿರ್ದೇಶಕ ರಿಷಬ್ ಶೆಟ್ಟಿ ಹೊಸ ಹೊಸ ಸಾಹಸ ಮಾಡಲು ಮುಂದಾಗುತ್ತಿದ್ದಾರೆ. ಈಗ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು' ಚಿತ್ರದಲ್ಲಿ ಬ್ಯುಸಿಯಾಗಿರುವ ಅವರು ನಂತರ ಬಾಲಿವುಡ್ ಸಿನಿಮಾವೊಂದನ್ನು ಮಾಡಲಿದ್ದಾರಂತೆ. ಅಂದ ಹಾಗೇ ಅವರು ಸಿನಿಮಾ ಮಾಡುತ್ತಿರುವುದು ಅಮಿತಾಭ್ ಬಚ್ಚನ್ ಅವರಿಗಾಗಿಯಂತೆ.


ರಿಷಬ್ ಶೆಟ್ಟಿ ಅವರ ಕಥೆ ಬಿಗ್ ಬಿ ಗೆ ಕೂಡ ಇಷ್ಟ ಆಗಿದೆಯಂತೆ. ಇನ್ನೂ ಒಂದು ವಿಶೇಷವೇನೆಂದರೆ ನಟ ಸುದೀಪ್ ಕೂಡ ಈ ಸಿನಿಮಾದಲ್ಲಿ ಇರ್ತಾರೆ. 'ಕಥೆಯೊಂದು ಶುರುವಾಗಿದೆ' ಸಿನಿಮಾದ ಸೆಲಿಬ್ರೆಟಿ ಶೋಗೆ ಆಗಮಿಸಿದ್ದ ರಿಷಬ್ ಶೆಟ್ಟಿ ಅವರು ಅವರು ತಮ್ಮ ಬಾಲಿವುಡ್ ಚಿತ್ರದ ಬಗ್ಗೆ ಹೇಳಿಕೊಂಡಿದ್ದಾರೆ.


ಅಮಿತಾಬ್ ಬಚ್ಚನ್  ಅವರಿಗೆ ಕಥೆ ಇಷ್ಟ ಆಗಿರುವುದು ನಿಜ 'ನನ್ನ ಹಿಂದಿ ಚಿತ್ರದ ಬಗ್ಗೆ ಮಾತನಾಡುವುದು ತುಂಬ ಅರ್ಲಿ ಅನಿಸುತ್ತಿದೆ. ಚಿತ್ರದ ಕಥೆ ಅಮಿತಾಭ್ ಬಚ್ಚನ್ ಅವರಿಗೆ ಇಷ್ಟ ಆಗಿರುವುದು ನಿಜ. ಆದರೆ, ಸುದೀಪ್ ಸರ್ ಅವರಿಗೆ ಇನ್ನು ಕಥೆ ಹೇಳಿಲ್ಲ. ಒಂದು ಒಳ್ಳೆಯ ಸ್ಕ್ರಿಪ್ಟ್ ಇದೆ ಅಂತ ಅಷ್ಟೇ ಸುದೀಪ್ ಸರ್ ಗೆ ಹೇಳಿದ್ದೇನೆ. ಆ ಸಿನಿಮಾ ಶುರು ಮಾಡುವುದೆ ಮುಂದಿನ ವರ್ಷ. ಅದೇ ನನ್ನ ಮುಂದಿನ ಸಿನಿಮಾ ಆದರು ಆಗಬಹುದು.

 
ಸದ್ಯ ಅದರ ಮೇಲೆ ವರ್ಕ್ ಮಾಡುತ್ತಿದ್ದೇನೆ. ಕಥೆ ಓಕೆ ಆಗಿರುವುದು ಸತ್ಯ. ನಾನಿನ್ನು ಸುದೀಪ್ ಸರ್ ಅವರಿಗೆ ಕಥೆ ನರೇಟ್ ಮಾಡಬೇಕು. ಅವರಿಗೆ ಇಷ್ಟ ಆಗಿ ಒಪ್ಪಿಕೊಳ್ಳಬೇಕು. ನನಗೆ ಆ ಕಥೆಗೆ ಅವರಿಬ್ಬರು ಸೂಟ್ ಆಗುತ್ತಾರೆ ಅಂತ ಅನಿಸಿದೆ. ಇಬ್ಬರು ಒಪ್ಪಿದರೆ ಸಿನಿಮಾ ಗ್ಯಾರೆಂಟಿ ಎಂದು ರಿಷಬ್ ಹೇಳಿದ್ದಾರೆ.


ಈಗಾಗಲೇ ಅಮಿತಾಬ್, ಸುದೀಪ್ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿಯ ಈ ಚಿತ್ರದಲ್ಲೂ ಈ ಜೋಡಿಗಳು ಮತ್ತೊಮ್ಮೆ ತೆರೆಮೇಲೆ ಕಾಣಿಕೊಳ್ಳುತ್ತಾರಾ ಎಂದು ಕಾದುನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

ಮುಂದಿನ ಸುದ್ದಿ
Show comments