Select Your Language

Notifications

webdunia
webdunia
webdunia
webdunia

ಬೇಲೂರು ಚೆನ್ನಕೇಶವ ದೇಗುಲದಲ್ಲಿ ಅಲ್ಲು ಅರವಿಂದ ಚಿತ್ರ ಎತ್ತಂಗಡಿ

ಬೇಲೂರು ಚೆನ್ನಕೇಶವ ದೇಗುಲದಲ್ಲಿ ಅಲ್ಲು ಅರವಿಂದ ಚಿತ್ರ ಎತ್ತಂಗಡಿ
Bangalore , ಶನಿವಾರ, 18 ಫೆಬ್ರವರಿ 2017 (13:56 IST)
ಇತಿಹಾಸ ಪ್ರಸಿದ್ಧ ಬೇಲೂರಿನ ಚೆನ್ನಕೇಶವ ದೇವಸ್ಥಾನದಲ್ಲಿ ಚಿತ್ರೀಕರಣ ನಡೆಸುತ್ತಿದ್ದ ತೆಲುಗು ಚಿತ್ರ ಅಲ್ಲಿಂದ ಎತ್ತಂಗಡಿಯಾಗಿದೆ. ಭಾರತದ ಪುರಾತತ್ವ ಸಂಸ್ಥೆ ಸಿನಿಮಾ ಚಿತ್ರೀಕರಣಕ್ಕೆ ನೀಡಿದ್ದ ಪರವಾನಗಿಯನ್ನು ರದ್ದು ಮಾಡಿದೆ.
 

ಸಿನಿಮಾ ತಂಡ ನಿಯಮಗಳನ್ನು (ರೂಲ್ ನಂಬರ್ 44) ಉಲ್ಲಂಘಿಸಿದೆ ಎಂದು ಇಲಾಖೆ ತಿಳಿಸಿದ್ದು, ಚಿತ್ರೀಕರಣಕ್ಕೆ ಕೊಟ್ಟಿದ್ದ ಪರವಾನಗಿಯನ್ನು ರದ್ದು ಮಾಡಿರುವುದಾಗಿ ತಿಳಿಸಿದೆ. ಫೆಬ್ರವರಿ 16ರಿಂದ 19ರವರೆಗೂ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿತ್ತು.
 
ಚಿತ್ರೀಕರಣಕ್ಕಾಗಿ ಸಿನಿಮಾ ತಂಡ ನಿಷೇಧಿದ ಸ್ಥಳದಲ್ಲಿ ಆಲಯದಲ್ಲಿ ಸೆಟ್ ಹಾಕಿ ನಾನಾ ರಾದ್ಧಾಂತ ಸೃಷ್ಟಿಸಿತ್ತು. ಇದರಿಂದ ಆಲಯಕ್ಕೆ ಬರುತ್ತಿದ್ದ ಭಕ್ತಾದಿಗಳು ಮತ್ತು ಪ್ರವಾಸಿಗರಿಗೆ ತುಂಬಾ ತೊಂದರೆಯಾಗಿ ಅವರು ಚಿತ್ರತಂಡದ ವಿರುದ್ಧ ಸಿಡಿಮಿಡಿಗೊಂಡಿದ್ದರು. ಅಂದಹಾಗೆ ಈ ಚಿತ್ರದ ನಾಯಕ ನಟ ಅಲ್ಲು ಅರ್ಜುನ್, ಚಿತ್ರದ ಹೆಸರು ’ಡಿಜೆ’. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶಶಿಕಲಾ ಜೈಲು ಕೊಠಡಿಯಲ್ಲಿ ಜಯಲಲಿತಾ ಆತ್ಮ