Select Your Language

Notifications

webdunia
webdunia
webdunia
webdunia

ರಜನೀಕಾಂತ್ ಹೊಸ ಸಿನಿಮಾಗೆ ಸಹಿ ಹಾಕಿದ್ದಕ್ಕೆ ಎಐಎಡಿಎಂಕೆ ಆಕ್ಷೇಪ ಯಾಕೆ?

ರಜನೀಕಾಂತ್ ಹೊಸ ಸಿನಿಮಾಗೆ ಸಹಿ ಹಾಕಿದ್ದಕ್ಕೆ ಎಐಎಡಿಎಂಕೆ ಆಕ್ಷೇಪ  ಯಾಕೆ?
ಚೆನ್ನೈ , ಸೋಮವಾರ, 14 ಅಕ್ಟೋಬರ್ 2019 (10:38 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿಯ ವಿಚಾರ. ಆದರೆ ರಾಜಕೀಯ ನಾಯಕರಿಗೆ ಇದು ಕಾಲೆಳೆಯುವ ವಿಚಾರವಾಗಿದೆ.


ರಾಜಕೀಯಕ್ಕೆ ಕಾಲಿಟ್ಟಿರುವ ರಜನೀಕಾಂತ್ ಈಗ ಅದನ್ನು ಬಿಟ್ಟು ಒಂದಾದ ಮೇಲೊಂದರಂತೆ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ‘ದರ್ಬಾರ್’ ಸಿನಿಮಾ ಮುಗಿಸಿರುವ ರಜನೀ ಈಗ ಸನ್ ಪಿಕ್ಚರ್ಸ್ ಅಡಿಯಲ್ಲಿ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.

ಅದಕ್ಕೀಗ ಎಐಎಡಿಎಂಕೆ ರಜನೀಕಾಂತ್ ಕಾಲೆಳದಿದೆ. ಅಷ್ಟಕ್ಕೂ ರಜನೀ ಹೊಸ ಸಿನಿಮಾ ಒಪ್ಪಿಕೊಂಡರೆ ಎಐಎಡಿಎಂಕೆ ಪಕ್ಷಕ್ಕೇನು ತೊಂದರೆ ಅಂತೀರಾ? ರಜನೀ ಸಿನಿಮಾ ಒಪ್ಪಿಕೊಂಡಿರುವ ಸನ್ ಪಿಕ್ಚರ್ಸ್ ಸಂಸ್ಥೆ ಡಿಎಂಕೆ ನಾಯಕ ಕಲಾನಿಧಿ ಮಾರನ್ ಒಡೆತನದ್ದು. ಇದೇ ಕಾರಣಕ್ಕೆ ಟ್ವೀಟ್ ಮೂಲಕ ರಜನೀ ಕಾಲೆಳೆದಿರುವ ಎಐಎಡಿಎಂಕೆ ನೀವು ನಿಜವಾಗಿಯೂ ರಾಜಕೀಯವನ್ನು ಗಂಭೀರವಾಗಿ ಪರಿಗಣಿಸಿದ್ದೀರಾ ಎಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ ಟೀಸರ್ ಇಂದು