Select Your Language

Notifications

webdunia
webdunia
webdunia
webdunia

ಅಗ್ನಿಸಾಕ್ಷಿ ಹುಡುಗ ಸಿದ್ಧಾರ್ಥನ ಹೊಸ ಲವ್ ಸ್ಟೋರಿ!

ಅಗ್ನಿಸಾಕ್ಷಿ ಹುಡುಗ ಸಿದ್ಧಾರ್ಥನ ಹೊಸ ಲವ್ ಸ್ಟೋರಿ!
Bangalore , ಶನಿವಾರ, 27 ಮೇ 2017 (11:03 IST)
ಬೆಂಗಳೂರು: ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಸನ್ನಿಧಿಯ ಮುದ್ದಿನ ಗಂಡನಾಗಿ ಮನೆ ಮಾತಾಗಿರುವ ಸಿದ್ಧಾರ್ಥ್ ಆಲಿಯಾಸ್ ವಿಜಯ್ ಸೂರ್ಯ ಹೊಸ ಲವ್ ಸ್ಟೋರಿಯಲ್ಲಿ ಬ್ಯುಸಿಯಾಗಿದ್ದಾರೆ!

 
ಅಂದರೆ ಗುಳಿ ಕೆನ್ನೆಯ ಈ ಚಾಕಲೇಟ್ ಹೀರೋ ರಿಯಲ್ ಲೈಫ್ ಲವ್ ಸ್ಟೋರಿ ಏನಾದ್ರೂ ಶುರುವಾಗಿದ್ಯಾ? ಅಲ್ಲಪ್ಪಾ.. ನಾವು ಹೇಳುತ್ತಿರುವುದು ರೀಲ್ ಲೈಫ್ ಸ್ಟೋರಿ ಬಗ್ಗೆ. ‘ಇಷ್ಟಕಾಮ್ಯ’ದಂತಹ ಚಿತ್ರದಲ್ಲಿ ನಟಿಸಿ ಸುದ್ದಿ ಮಾಡಿರುವ ವಿಜಯ್ ಹೊಸ ಸಿನಿಮಾ ಲಕ್ನೋ ಟು ಬೆಂಗಳೂರು ಬಗ್ಗೆ.

ಬೆಂಗಳೂರು ಮೂಲದ ಮುಸ್ಲಿಂ ಹುಡುಗ ಮತ್ತು ಲಕ್ನೋದ ಹಿಂದೂ ಯುವತಿಯ ನಡುವೆ ನಡೆಯುವ ಪ್ರೆಮಕತೆಯನ್ನೊಳಗೊಂಡ ಸಿನಿಮಾ ಇದಾಗಿದೆ. ಈ ಸಿನಿಮಾಗಾಗಿಯೇ ವಿಜಯ್ ದಾಡಿ ಬಿಟ್ಟುಕೊಂಡಿದ್ದಾರಂತೆ. ಸದ್ಯದಲ್ಲೇ ಚಿತ್ರ ತೆರೆ ಮೇಲೆ ಬರಲಿದ್ದು, ಅಗ್ನಿ ಸಾಕ್ಷಿ ಹುಡುಗನ ಲವ್ ಸ್ಟೋರಿ ನೋಡಲು ಸಿದ್ಧರಾಗಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ರಜಿನಿಕಾಂತ್ ರಾಜಕೀಯ ಎಂಟ್ರಿ ಬಗ್ಗೆ ಕಮಲ್ ಕೊಟ್ಟ ಶಾಕಿಂಗ್ ರಿಯಾಕ್ಷನ್