Select Your Language

Notifications

webdunia
webdunia
webdunia
webdunia

ನಟ ರಜನಿಕಾಂತ್‌ಗೆ ರಾಜಕೀಯಕ್ಕೆ ಬರುವ ಇಚ್ಚೆಯಿದೆ: ಬಹದ್ದೂರ್

ನಟ ರಜನಿಕಾಂತ್‌ಗೆ ರಾಜಕೀಯಕ್ಕೆ ಬರುವ ಇಚ್ಚೆಯಿದೆ: ಬಹದ್ದೂರ್
ಬೆಂಗಳೂರು , ಬುಧವಾರ, 17 ಮೇ 2017 (13:40 IST)
ನಟ ರಜನಿಕಾಂತ್‌ಗೆ ರಾಜಕೀಯಕ್ಕೆ ಬರುವ ಇಚ್ಚೆಯಿದೆ. ಆದರೆ. ಯಾವಾಗ ರಾಜಕೀಯ ಪ್ರವೇಶಿಸುತ್ತಾರೆ ಎನ್ನುವುದು ತಿಳಿದಿಲ್ಲ ಎಂದು ರಜನಿ ಆಪ್ತ ಸ್ನೇಹಿತ ರಾಜ್ ಬಹದ್ದೂರ್ ಹೇಳಿದ್ದಾರೆ.
 
ಒಂದು ವೇಳೆ, ಹಿಮಾಲಯದಲ್ಲಿರುವ ಬಾಬಾ, ರಜನಿಯವರಿಗೆ ರಾಜಕೀಯ ಪ್ರವೇಶಿಸುವಂತೆ ಇಂದೇ ಅನುಮತಿ ನೀಡಿದಲ್ಲಿ ನಾಳೆಯೇ ರಾಜಕೀಯಕ್ಕೆ ಬರುತ್ತಾರೆ ಎಂದು ತಿಳಿಸಿದ್ದಾರೆ.   
 
ರಾಜಕೀಯಕ್ಕೆ ಬರೋದಕ್ಕೆ ರಜನಿ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ತಮಿಳುನಾಡಿನ ಏಳುವರೆ ಕೋಟಿ ಜನ ರಜನಿ ರಾಜಕೀಯ ಪ್ರವೇಶಿಸುವಂತೆ ಒತ್ತಡ ಹೇರುತ್ತಿದ್ದಾರೆ. ಆದರೆ, ಯಾವಾಗ ರಜನಿ ರಾಜಕೀಯ ಪ್ರವೇಶಿಸುತ್ತಾರೆ ಎನ್ನುವುದು ತಿಳಿದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
 
ತಮಿಳುನಾಡಿನಲ್ಲಿ ರಾಜಕೀಯ ಹದಗೆಟ್ಟಿದೆ. ಬಡವರಿಗಾಗಿ, ಶೋಷಿತರಿಗಾಗಿ ಏನಾದರೂ ಮಾಡಲೇಬೇಕು ಎನ್ನುವುದು ರಜನಿ ಬಯಕೆಯಾಗಿದೆ. ಹಿಮಾಲಯದಲ್ಲಿರುವ ಬಾಬಾ ಅನುಮತಿ ದೊರೆಯುವವರೆಗೆ ರಜನಿ ರಾಜಕೀಯ ಪ್ರವೇಶಿಸುವುದಿಲ್ಲ ಎನ್ನುವುದು ಸತ್ಯ ಎಂದು ರಜನಿ ಆಪ್ತ ಸ್ನೇಹಿತ ರಾಜ್ ಬಹದ್ದೂರ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಾಡಿಗಾರ್ಡ್ ಗಳಿಗೆ ಬಂಪರ್ ಆಫರ್ ನೀಡಿದ ಸಲ್ಮಾನ್ ಖಾನ್