Webdunia - Bharat's app for daily news and videos

Install App

ದರ್ಶನ್ ಕೇಸ್ ನಲ್ಲಿ ಕೊನೆಗೂ ತಗ್ಲಾಕೊಂಡ ಆಪ್ತ ನಟ ಚಿಕ್ಕಣ್ಣ

Krishnaveni K
ಸೋಮವಾರ, 17 ಜೂನ್ 2024 (12:23 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಈಗ ನಟ ದರ್ಶನ್ ಗೆ ಆಪ್ತರಾಗಿದ್ದವರಿಗೂ ಕಂಟಕ ಶುರುವಾಗಿದೆ. ದರ್ಶನ್ ಆತ್ಮೀಯ ಬಳಗದಲ್ಲಿದ್ದ ನಟ ಚಿಕ್ಕಣ್ಣಗೂ ವಿಚಾರಣೆಗೆ ಹಾಜರಾಗಲು ಪೊಲೀಸರು ನೋಟಿಸ್ ನೀಡಿದ್ದಾರೆ.

ಅಷ್ಟಕ್ಕೂ ಚಿಕ್ಕಣ್ಣ ಅಂದು ಶೆಡ್ ನಲ್ಲಿರಲಿಲ್ಲ. ಆದರೂ ಅವರಿಗೆ ಯಾಕೆ ನೋಟಿಸ್ ನೀಡಲಾಗಿದೆ ಎಂಬ ಕುತೂಹಲ ನಿಮಗಿರಬಹುದು. ಯಾಕೆಂದರೆ ಘಟನೆ ನಡೆದ ದಿನ ದರ್ಶನ್ ಶೆಡ್ ಗೆ ತೆರಳುವ ಮುನ್ನ ತಮ್ಮ ಆತ್ಮೀಯರೊಂದಿಗೆ ರೆಸ್ಟೋರೆಂಟ್ ಒಂದರಲ್ಲಿ ಪಾರ್ಟಿ ಮಾಡಿದ್ದರು.

ಈ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಕೂಡಾ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಈಗ ಚಿಕ್ಕಣ್ಣರಿಂದ ವಿವರಣೆ ಪಡೆಯಲು ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಘಟನೆ ಬಗ್ಗೆ ದರ್ಶನ್ ತಮ್ಮ ಆಪ್ತನ ಜೊತೆ ಹಂಚಿಕೊಂಡಿರಬಹುದೇ ಎಂದು ಪೊಲೀಸರು ತಿಳಿದುಕೊಳ್ಳಲಿದ್ದಾರೆ.

ನಟ ಚಿಕ್ಕಣ್ಣ ಬಹಳ ಸಮಯದಿಂದಲೂ ದರ್ಶನ್ ಗೆ ಆತ್ಮೀಯರಾಗಿದ್ದಾರೆ. ಆಗಾಗ ದರ್ಶನ್ ಫಾರ್ಮ್ ಹೌಸ್ ನಲ್ಲಿ ಅವರ ಜೊತೆ ಕಾಣಿಸಿಕೊಳ್ಳುತ್ತಾರೆ. ದರ್ಶನ್ ಪ್ರೇರಣೆಯಿಂದ ತಮ್ಮ ಊರಿನಲ್ಲಿ ತಾವೂ ಒಂದು ಫಾರ್ಮ್ ಹೌಸ್ ಮಾಡಿಕೊಂಡಿದ್ದಾರೆ. ಈಗ ಈ ಕೇಸ್ ನಲ್ಲಿ ಅವರೂ ತಗ್ಲಾಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವ್ಯಕ್ತಿಯೊಬ್ಬರಿಗೆ ರಶ್ಮಿಕಾ ಶೇಕ್‌ಹ್ಯಾಂಡ್ ಕೊಟ್ರೆ ವಿಜಯ್ ದೇವರಕೊಂಡ ಹೀಗೇ ನಡೆದುಕೊಳ್ಳುವುದಾ, Viral Video

ವಿಷ್ಣು ಸ್ಮಾರಕಕ್ಕೆ ಕಿಚ್ಚ ಜಾಗ ಕೊಟ್ರೇ, ಅಭಿಮಾನಿಗಳ ಸಂಘಟನೆ ಹೈಕೋರ್ಟ್ ಗೆ ಹೋಗೋದಾ

ರಮ್ಯಾಗೆ ಅಶ್ಲೀಲ ಮೆಸೇಜ್‌, ಜೀವಬೆದರಿಕೆ ಪ್ರಕರಣ: ತನಿಖೆಯಲ್ಲಿ ಭಾರೀ ಬೆಳವಣಿಗೆ

ಬಾಲಿವುಡ್ ನಟ ಗುಲ್ಶನ್ ದೇವಯ್ಯ ಫಸ್ಟ್ ಲುಕ್ ಬಿಡುಗಡೆ ಮಾಡಿದ ಕಾಂತಾರ ತಂಡ

ಸಾಹಸಸಿಂಹ ವಿಷ್ಣುವರ್ದನ್ ಸ್ಮಾರಕಕ್ಕಾಗಿ ಕಿಚ್ಚ ಸುದೀಪ್ ಜಾಗ ಖರೀದಿ

ಮುಂದಿನ ಸುದ್ದಿ
Show comments