Select Your Language

Notifications

webdunia
webdunia
webdunia
webdunia

‘ಬೇಕಿದ್ದರೆ ನೀವೇ ಪ್ರಶಸ್ತಿ ವಾಪಸ್ ತಗೊಳ್ಳಿ’

‘ಬೇಕಿದ್ದರೆ ನೀವೇ ಪ್ರಶಸ್ತಿ ವಾಪಸ್ ತಗೊಳ್ಳಿ’
Mumbai , ಮಂಗಳವಾರ, 25 ಏಪ್ರಿಲ್ 2017 (07:59 IST)
ಮುಂಬೈ: ರುಸ್ತುಂ ಚಿತ್ರದ ಅಭಿನಯಕ್ಕಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ಶ್ರೇಷ್ಠ ನಟ ಪ್ರಶಸ್ತಿ ನೀಡಿದ್ದು, ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಅಕ್ಷಯ್ ಕುಮಾರ್, ಬೇಕಿದ್ದರೆ ನೀವೇ ಪ್ರಶಸ್ತಿ ವಾಪಸ್ ತೆಗೆದುಕೊಳ್ಳಿ ಎಂದಿದ್ದಾರೆ.

 
ಇದೇ ಮೊದಲ ಬಾರಿಗೆ ಉತ್ತಮ ನಟ ಪ್ರಶಸ್ತಿ ಪಡೆದಿದ್ದ ಅಕ್ಷಯ್ ಕುಮಾರ್ ಗೆ ಪ್ರಶಸ್ತಿ ನೀಡಿದ್ದಕ್ಕೆ ಕೆಲವರು ವೃಥಾ ವಿವಾದ ಸೃಷ್ಟಿಸಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಅವರು ‘ಪ್ರತೀ ಬಾರಿಯೂ ನಾನು ಇಂತಹದ್ದನ್ನು ಕೇಳುತ್ತೇನೆ. ಯಾರಿಗಾದರೂ, ಪ್ರಶಸ್ತಿ ಬಂದರೆ, ಅವರಿಗೆ ಸಿಗಬಾರದಿತ್ತು ಎನ್ನುವುದು ಮಾಮೂಲಿ. ಅವರಿಗೆ ಬೇಕಿದ್ದರೆ ನನ್ನ ಪ್ರಶಸ್ತಿ ವಾಪಸ್ ತೆಗೆದುಕೊಳ್ಳಲಿ. ನನಗೇನೂ ಬೇಜಾರಿಲ್ಲ’ ಎಂದಿದ್ದಾರೆ.

25 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಯಾವತ್ತೂ ಪ್ರಶಸ್ತಿಗಾಗಿ ಯಾರ ಬಳಿಯೂ ಕೈ ಚಾಚಿಲ್ಲ. ಆದರೆ ಹಿಂದೆ ಯಾರಿಗೂ ಇಲ್ಲದ್ದು, ನನ್ನ ವಿಷಯದಲ್ಲಿ ಯಾಕಿಷ್ಟು ವಿವಾದ ಹುಟ್ಟು ಹಾಕುತ್ತಾರೋ ಎಂದು ಅಕ್ಕಿ ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್`ನಲ್ಲಿ ಸೂಪರ್ ಸ್ಟಾರ್ ಕಮಲ್ ಹಾಸನ್