Select Your Language

Notifications

webdunia
webdunia
webdunia
webdunia

‘ನಾನು ಡಿಸೈಡ್ ಮಾಡಿದ್ರೆ ಮುಗಿದೋಯ್ತು.. ನಾನೇ ನಾಯಕ’

‘ನಾನು ಡಿಸೈಡ್ ಮಾಡಿದ್ರೆ ಮುಗಿದೋಯ್ತು.. ನಾನೇ ನಾಯಕ’
Chennai , ಬುಧವಾರ, 19 ಜುಲೈ 2017 (11:36 IST)
ಚೆನ್ನೈ: ತಮಿಳುನಾಡಿನ ರಾಜಕೀಯ ಕಣಕ್ಕೆ ರಜನೀಕಾಂತ್ ಧುಮುಕುತ್ತಾರೆ ಎಂಬ ಸುದ್ದಿಗಳ ಬೆನ್ನಲ್ಲೇ ಇನ್ನೊಬ್ಬ ಸೂಪರ್ ಸ್ಟಾರ್ ಕಮಲ್ ಹಾಸನ್ ಕೂಡಾ ರಾಜಕೀಯಕ್ಕೆ ಬರುವ ಸೂಚನೆ ನೀಡಿದ್ದಾರೆ.


ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದ ಕಮಲ್ ವಿರುದ್ಧ ಆಡಳಿತಾರೂಢ ಎಐಎಡಿಎಂಕೆ ಸವಾಲು ಹಾಕಿದ ಬೆನ್ನಲ್ಲೇ ಆಕ್ರೋಶಗೊಂಡಿರುವ ಕಮಲ್ ಹಾಸನ್ ಟ್ವೀಟ್ ಮಾಡಿದ್ದು, ನಾನು ನಿರ್ಧರಿಸಿದರೆ, ನಾಯಕನಾಗಿಯೇ ತೀರುತ್ತೇನೆ. ಒಂದು ದಿನ ನಾನೂ ನಾಯಕನಾಗಬಹುದು ಎಂದು ಸಂದೇಶ ನೀಡಿದ್ದಾರೆ. ಈ ಮೂಲಕ ಮುಂದೊಂದು ದಿನ ರಾಜಕೀಯ ಕಣಕ್ಕ ಧುಮುಕುವ ಸೂಚನೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಆದರೆ ಅಧಿಕೃತವಾಗಿ ಕಮಲ್ ಹಾಸನ್ ರಾಜಕೀಯಕ್ಕೆ ಬರುವುದಾಗಿ ಹೇಳಿಕೆ ನೀಡಿಲ್ಲ. ಆದರೆ ಅವರ ಹೇಳಿಕೆ ಅದನ್ನೇ ಸೂಚಿಸುತ್ತಿವೆ. ಕಮಲ್ ಅಧಿಕೃತವಾಗಿ ಹೇಳುವ ಮೊದಲೇ ತಮಿಳುನಾಡಿನ ಎರಡು ಪ್ರಮುಖ ಪಕ್ಷಗಳಾದ ಎಐಎಡಿಎಂಕೆ ಮತ್ತು ಡಿಎಂಕೆ ಪಕ್ಷಗಳು ಕಮಲ್ ರಾಜಕೀಯಕ್ಕೆ ಬರುವುದಾದರೆ ಸ್ವಾಗತ ಎಂದಿವೆ.

ಇದನ್ನೂ ಓದಿ..  ಧೋನಿ ಬ್ಯಾಟಿಗೆ ಬಂತು ಕಂಟಕ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಗ್ಗಾ ಜಾಸೂಸ್ ಚಿತ್ರ ನಟಿ ಆತ್ಮಹತ್ಯೆ