Webdunia - Bharat's app for daily news and videos

Install App

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್‌ನೆಟ್ ಇಲ್ಲದೆಯೇ ಫೇಸ್‌ಬುಕ್ ಬಳಸುವುದು ಹೇಗೆ ಗೊತ್ತಾ?

Webdunia
ಬುಧವಾರ, 31 ಆಗಸ್ಟ್ 2016 (12:50 IST)
ಭಾರತದಲ್ಲಿ ಫೇಸ್‌ಬುಕ್ ಬಳಕೆದಾರರಿಗೆ ಸಂತದ ಸುದ್ದಿಯೊಂದು ಬಂದಿದೆ. ಇದೀಗ, ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಫೋನ್‌ನಿಂದ *325# ಡಯಲ್ ಮಾಡಿದಲ್ಲಿ ಇಂಟರ್‌ನೆಟ್ ಸಂಪರ್ಕ ಇಲ್ಲದೆಯೇ ತಮ್ಮ ಸ್ಮಾರ್ಟ್‌ಪೋನ್‌‌ನಲ್ಲಿ ಫೇಸ್‌ಬುಕ್ ಬಳಕೆ ಮಾಡುವಂತಹ ಸೌಲಭ್ಯ ಪಡೆಯಬಹುದಾಗಿದೆ.
 
ಫೇಸ್‌ಬುಕ್ ಇಂಡಿಯಾ ಸಂಸ್ಥೆ ಫೋನೆಟ್‌ವಿಷ್ ಸಂಸ್ಥೆಯೊಂದಿಗೆ ಹೊಂದಿದ ಸಹಭಾಗಿತ್ವದಿಂದಾಗಿ ಈ ವಿನೂತನ ಯೋಜನೆ ಸಾಧ್ಯವಾಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. 
 
ಫೋನೆಟ್ವಿಷ್ ಸಂಸ್ಥೆ, ಯುಎಸ್‌ಎಸ್‌ಡಿ ಆಧಾರಿತ ಇಂಟರ್‌ನೆಟ್ ಡೇಟಾ ಸಂಪರ್ಕವಿಲ್ಲದ ಸಾಧನಗಳನ್ನು ಪರಸ್ಪರ ಸಂಪರ್ಕಿಸುವ ಸೇವೆಯನ್ನು ನೀಡುತ್ತಿದೆ. 
 
ಈ ವಿನೂತನ ಸೌಲಭ್ಯದ ಸಹಾಯದಿಂದ ಫೇಸ್‌ಬುಕ್ ಬಳಕೆದಾರರು ತಮ್ಮ ಸ್ಟೇಟಸ್‌ನ್ನು ಉಚಿತವಾಗಿ ಅಪ್‌ಡೇಟ್ ಮಾಡಬಹುದಾಗಿದೆ. ಆದರೆ, ನೋಟಿಫಿಕೇಷನ್‌ ನೋಡಲು ಹಾಗೂ ಹೊಸ ಸ್ನೇಹಿತರನ್ನು ಆಡ್ ಮಾಡಿಕೊಳ್ಳಲು ಪ್ರತಿದಿನದ ಸೇವೆಗಾಗಿ ಕೇವಲ 1 ರೂಪಾಯಿಯನ್ನು ಸಂದಾಯ ಮಾಡಬೇಕಾಗುತ್ತದೆ. 
 
ಫೇಸ್‌ಬುಕ್ ಬಳಕೆದಾರರು ತಮ್ಮ ಸ್ಮಾರ್ಟ್‌ಪೋನ್‌ಗಳಲ್ಲಿ *325# ಡಿಯಲ್ ಮಾಡಿ, ತಮ್ಮ ಫೇಸ್‌ಬುಕ್ ಖಾತೆಯ ಯುಸರ್‌ನೇಮ್ ಹಾಗೂ ಪಾಸ್‌ವರ್ಡ್ ಭರ್ತಿ ಮಾಡಿದರೇ ಸಾಕು, ಉಚಿತವಾಗಿ ಫೇಸ್‌ಬುಕ್ ಖಾತೆ ಬಳಕೆ ಮಾಡಬಹುದಾಗಿದೆ. 
 
ಈ ಹೊಸ ಪ್ರಯೋಗದಲ್ಲಿ ಯುಎಸ್‌ಎಸ್‌ಡಿ ಸೇವೆಯನ್ನು ಬಳಕೆದಾರ ಹ್ಯಾಂಡ್‌ಸೆಟ್‌ಗಳಿಗೆ ಮಾಹಿತಿಯನ್ನು ರವಾನಿಸಲು ಉಪಯೋಗಿಸಿಕೊಳ್ಳಲಾಗುತ್ತಿದೆ. ಈ ಸೇವೆ ಕೇವಲ ಏರ್‌ಟೆಲ್, ಏರ್‌ಸೆಲ್, ಐಡಿಯಾ ಮತ್ತು ಡೊಕೊಮೊ ನೆಟ್‌ವರ್ಕ್‌ನಲ್ಲಿ ಲಭ್ಯವಿದ್ದು, ಶೀಘ್ರದಲ್ಲಿ ಎಲ್ಲ ದೈತ್ಯ ನೆಟ್‌ವರ್ಕ್‌ಗಳಲ್ಲಿ ಸೇವೆ ನೀಡಲು ಫೇಸ್‌ಬುಕ್ ಯೋಜನೆ ರೂಪಿಸುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೇನಾಧಿಕಾರಿ ಖುರೇಷಿ ಅತ್ತೆ ಮಾವನ ಮನೆ ಮೇಲೆ ದಾಳಿ ಪೋಸ್ಟ್‌: ಮೂವರ ವಿರುದ್ಧ ಪ್ರಕರಣ ದಾಖಲು

ಬರ್ತಡೇ ಆಚರಿಸಲ್ಲ ಅಂತಾ ಹೇಳಿ ನೆನಪಿನಲ್ಲಿ ಉಳಿದುಕೊಳ್ಳುವ ಹಾಗೇ ದಿನ ಕಳೆದ ಡಿಸಿಎಂ ಡಿಕೆ ಶಿವಕುಮಾರ್‌: Video

ಪಾಕ್‌ಗೆ ಸಹಾಯ ಮಾಡಿದ ಟರ್ಕಿ: ಟರ್ಕಿ ಆ್ಯಪಲ್ ಬ್ಯಾನ್ ಮಾಡಲು ಭಾರತದಲ್ಲಿ ಹೆಚ್ಚಿದ ಒತ್ತಾಯ

Tiranga Yatra, ಭಾರತೀಯ ಯೋಧರಿಗೆ ಸ್ಥೈರ್ಯ ತುಂಬಲು ತಿರಂಗಾ ಯಾತ್ರೆ: ಬಿವೈ ವಿಜಯೇಂದ್ರ

ಅಶ್ಲೀಲ ವಿಡಿಯೋಗಳನ್ನು ಹರಿಬಿಡುವುದಾಗಿ ಆನಂದ್‌ ಗುರೂಜಿಗೆ ಬೆದರಿಕೆ: ದಿವ್ಯ ವಸಂತಾ ಸೇರಿ ಇಬ್ಬರ ವಿರುದ್ಧ ದೂರು

ಮುಂದಿನ ಸುದ್ದಿ
Show comments