Webdunia - Bharat's app for daily news and videos

Install App

ಶಾಕಿಂಗ್ ನ್ಯೂಸ್! ಕೂಡಲೇ ನೂತನ ವಾಟ್ಸ್ ​ಆ್ಯಪ್​ ವರ್ಶನ್​​ ಅಪ್ ​​ಡೇಟ್​ ಮಾಡಿಕೊಳ್ಳಿ

Webdunia
ಬುಧವಾರ, 15 ಮೇ 2019 (06:43 IST)
ಬೆಂಗಳೂರು : ಸೋಶಿಯಲ್ ಮೀಡಿಯಾಗಳಲ್ಲಿ ತುಂಬಾನೇ ಸೇಫ್ ಎಂದುಕೊಂಡಿದ್ದ ವಾಟ್ಸ್​ ಆ್ಯಪ್​​​ ಮೂಲಕವೂ ಹ್ಯಾಕರ್ ​​ಗಳು ನಮ್ಮ  ವೈಯಕ್ತಿಕ ಡೇಟಾವನ್ನು ಕದಿಯುತ್ತಿದ್ದಾರೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.




ನಮ್ಮ ವೈಯಕ್ತಿಕ ಡೇಟಾ ಸುರಕ್ಷಿತವಾಗಿರಿಸಲು ವಾಟ್ಸ್ ​​ಆ್ಯಪ್​​​ ತುಂಬಾ  ಸಹಕಾರಿ ಎಂದು ತಜ್ಞರು ಹೇಳುತ್ತಿದ್ದರು. ಅಲ್ಲದೇ ಕೊನೆಯವರೆಗೂ ನಮ್ಮ ಪರ್ಸನಲ್​ ಡಾಟಾ, ವಿಡಿಯೋ ಮತ್ತು ಪೋಟೋಸ್, ಮೆಸೇಜ್​ಗಳನ್ನು​​ ವಾಟ್ಸ್​​ಆ್ಯಪ್​​​ ಸಂಸ್ಥೆ ಭದ್ರವಾಗಿ ಉಳಿಸಿಕೊಳ್ಳುತ್ತದೆ ಎನ್ನಲಾಗಿತ್ತು.


ಆದರೆ ಇತ್ತೀಚೆಗೆ ಇಸ್ರೇಲ್​ ಮೂಲದ ಎನ್​.ಎಸ್.​ಒ ಎಂಬ ಕಂಪನಿ ಡಾಟಾ ಕಳವು ಬಗ್ಗೆ ವ್ಯಾಟ್ಸ್​​ಆ್ಯಪ್​​ ಸಂಸ್ಥೆಗೆ ಮಾಹಿತಿ ನೀಡಿದ್ದು, ಕರೆಯ ಮೂಲಕ ಬಳಕೆದಾರನ ವ್ಯಯಕ್ತಿಕ ಮಾಹಿತಿಯನ್ನು ಕದಿಯುತ್ತಿದೆ ಎಂದು ತಿಳಿಸಿದೆ. ವಾಟ್ಸ್​ಆ್ಯಪ್​ ವರ್ಶನ್​​ V2.19.134, ಬ್ಯುಸಿನಸ್​​ v2.19.44, ವಾಟ್ಸ್​ಆ್ಯಪ್ iOS v2.19.51, ವಾಟ್ಸ್​ಆ್ಯಪ್ ಬ್ಯುಸಿನೆಸ್ iOS v2.19.51, ವಾಟ್ಸ್​ಆ್ಯಪ್​ ವಿಂಡೋಸ್​  v2.18.348, ವಾಟ್ಸ್​ಆ್ಯಪ್​​ ಟೈಝೆನ್​ v2.18.15 ವರ್ಶನ್​​ ಗಳಲ್ಲಿ ಮಾಹಿತಿ ಕದಿಯಲಾಗುತ್ತಿದೆ ಎಂದು ಇಸ್ರೇಲ್​​ ಕಂಪನಿ ತಿಳಿಸಿದೆ.


ಆದ್ದರಿಂದ ವಾಟ್ಸ್​ಆ್ಯಪ್​ ಸಂಸ್ಥೆ ಇದೇ ಮೇ.10ರಂದು iOS ಮತ್ತು ಆ್ಯಂಡ್ರಾಯ್ಡ್​ ಬಳಕೆದಾರಿಗೆ ಅಪ್​ಡೇಟ್​ ವರ್ಷನ್​ ಬಿಡುಗಡೆ ಮಾಡಿದೆ. ಬಳಕೆದಾರರು ಗೂಗಲ್​ ಪ್ಲೇಸ್ಟೋರ್​ ಹೋಗಿ ಕೂಡಲೇ ನೂತನ ವಾಟ್ಸ್ ​ಆ್ಯಪ್​ ವರ್ಶನ್​​ ಅಪ್​​ಡೇಟ್​ ಮಾಡಿಕೊಳ್ಳಬೇಕಿದೆ. ಐಫೋನ್​ ಬಳಕೆದಾರರು ಆ್ಯಪ್​ ಸ್ಟೋರ್​ ಮೂಲಕ ಅಪ್​ಡೇಟ್​​ ಮಾಡಬಹುದು ಎಂಬುದಾಗಿ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆನೆ ಜತೆ ಸೆಲ್ಪಿ ವಿಡಿಯೋ ವೈರಲ್, ಇನ್ಮುಂದೆ ಈ ಥರ ಮಾಡುವವರ ವಿರುದ್ಧ ಕ್ರಮಕ್ಕೆ ಈಶ್ವರ್ ಖಂಡ್ರೆ ಸೂಚನೆ

ಪಾಕ್ ವಿರುದ್ಧ ಅದು ಸರಿಯಾದ ಪ್ರತೀಕಾರ: ಆಪರೇಷನ್ ಸಿಂಧೂರ್‌ನ್ನು ಶ್ಲಾಘಿಸಿದ ಜಪಾನಿನ ಕಾರ್ಯತಂತ್ರ ತಜ್ಞ

IPL 2025: ಅನುಚಿತ ವರ್ತನೆಗೆ ಡೆಲ್ಲಿ ವೇಗದ ಬೌಲರ್‌ ಮುಕೇಶ್‌ ಕುಮಾರ್‌ಗೆ ಬಿತ್ತು ದಂಡ

ಜಮ್ಮು ಕಾಶ್ಮೀರದ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಯೋಧ ಹುತಾತ್ಮ

ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ: ಡಿಸಿಎಂ ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments