Webdunia - Bharat's app for daily news and videos

Install App

ಗೂಗಲ್ ಅಸಿಸ್ಟೆಂಟ್ ಹೊಸ ರೂಪದಲ್ಲಿ ವರ್ಷಾಂತ್ಯಕ್ಕೆ....!

ಗುರುಮೂರ್ತಿ
ಸೋಮವಾರ, 19 ಫೆಬ್ರವರಿ 2018 (14:02 IST)
ನೀವು ಹೊಸ ಊರಿಗೋ ದೇಶಕ್ಕೋ ಪ್ರಯಾಣಿಸಿದರೆ ಇನ್ನು ಮುಂದೆ ತಲೆಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ, ಅಲ್ಲಿನ ಸ್ಥಳೀಯ ಭಾಷೆ ಗೊತ್ತಿಲ್ಲವೆಂದು ಆತಂಕ ಪಡುವ ಅಗತ್ಯವು ಇಲ್ಲ. ಅದು ಹೇಗೆ ಅಂತೀರಾ ಇಲ್ಲಿದೆ ವರದಿ..
ಆಮ್‌ಸ್ಟೆರ್‌ಡಾಮ್‌ನಲ್ಲಿ ಮಂಗಳವಾರ ನಡೆದ ಡಿಜಿಟಲ್ ನ್ಯೂಸ್ ಇನಿಶಿಯೇಟಿವ್ (DNI) ಸೆಭೆಯಲ್ಲಿ ಇನ್ನಷ್ಟು ದೇಶಗಳಲ್ಲಿನ ಸ್ಥಳೀಯ ಭಾಷೆಯನ್ನು ಬೆಂಬಲಿಸುವಂತೆ ಗೂಗಲ್ ಅಸಿಸ್ಟೆಂಟ್ ನವೀಕರಿಸಿ 2018 ರ ವರ್ಷಾಂತ್ಯಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಗೂಗಲ್ ಹೇಳಿದೆ. ಈ ವರದಿಯು ಗೂಗಲ್‌ ತನ್ನ ಅಧಿಕೃತ ಪುಟದಲ್ಲಿ ವಿವರಿಸಿದ್ದು, ಈ ವರ್ಷದ ಅಂತ್ಯಕ್ಕೆ ಪಟ್ಟಿಮಾಡಿರುವ ಎಲ್ಲಾ ದೇಶಗಳ ಭಾಷೆಯನ್ನು ಅಳವಡಿಸಲಾಗುತ್ತದೆ ಅಲ್ಲದೇ ಹೊಸ ಭಾಷೆಗಳನ್ನು ಸೇರಿಸಲಾಗುವುದು ಎಂದು ಹೇಳಲಾಗಿದೆ. ಅಲ್ಲದೇ ಭಾರತದಿಂದ ಇನ್ನು ಕೆಲವು ಭಾಷೆಗಳನ್ನು ಸೇರಿಸಲಾಗುವುದು ಎಂದು ಹೇಳಿದೆ. 
 
ಈಗಾಗಲೇ ಅಸಿಸ್ಟೆಂಟ್ ಅನ್ನು ಸಾಕಷ್ಟು ಅಭಿವೃದ್ಧಿ ಪಡಿಸಲಾಗಿದೆ ಅಷ್ಟೇ ಅಲ್ಲ ಇದರಲ್ಲಿ ಗೂಗಲ್ ಹೋಮ್ ಸ್ಮಾರ್ಟ್ ಸ್ಪಿಕರ್ ಅನ್ನು ಅಳವಡಿಸಿದ್ದು, ಟೈಪ್ ಮಾಡದೆಯೇ ನಿಮ್ಮ ಮಾತುಗಳಲ್ಲಿ ಪದಗಳನ್ನು ಗುರುತಿಸುವ ಸಾಮರ್ಥ್ಯವನ್ನು ಗೂಗಲ್ ಅಸಿಸ್ಟೆಂಟ್‌ ಹೊಂದಿದೆ. ಈಗಾಗಲೇ ಭಾರತದ ಸ್ಥಳೀಯ ಭಾಷೆ ಸೇರಿದಂತೆ ಹಲವು ದೇಶದ ಭಾಷೆಗಳನ್ನು ಅಳವಡಿಸಿರುವ ಗೂಗಲ್ ಅಸಿಸ್ಟೆಂಟ್‌ನಲ್ಲಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ದೇಶದ ಭಾಷೆಗಳು ಮತ್ತು ದೇಶದ ಸ್ಥಳೀಯ ಭಾಷೆಗಳನ್ನು ಸೇರಿಸುವತ್ತ ಗೂಗಲ್ ಗಮನಹರಿಸಿದೆ ಎನ್ನಲಾಗುತ್ತಿದೆ.
 
ಈಗಾಗಲೇ ಲಭ್ಯವಿರುವ ಗೂಗಲ್ ಅಸಿಸ್ಟೆಂಟ್ ಆಂಡ್ರೊಯ್ಡ್ ಲಾಲಿಪಾಪ್ ಮತ್ತು ಅದರ ಮುಂದಿನ ಆವೃತ್ತಿಯ ಆಂಡ್ರೊಯ್ಡ್ ಫೋನ್‌ಗಳು, ಗೂಗಲ್ ಹೋಮ್ ಡಿವೈಸ್ ಮತ್ತು ಹಲವಾರು ತೃತೀಯ ಸಾಧನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಗೂಗಲ್ ಯತ್ನಿಸುತ್ತಿದೆ ಎನ್ನಲಾಗುತ್ತಿದೆ.
ಈಗಾಗಲೇ ಕಳೆದ ತಿಂಗಳು ಗೂಗಲ್ ಅಸಿಸ್ಟೆಂಟ್ ಹಿಂದಿ ಭಾಷೆಯ ನವೀಕರಣವನ್ನು ಸಿದ್ಧಪಡಿಸಿದ್ದು, ನೀವು ಇದನ್ನು ನಿಮ್ಮ ಫೋನ್‌ನಲ್ಲಿ ಅಳವಡಿಸಿಕೊಂಡು ಧ್ವನಿ ಕಮಾಂಡ್‌‌ಗಳನ್ನು ನೀಡುವ ಮೂಲಕ ನೀವು ಸಂವಹನ ನೆಡೆಸಬಹುದು ನಿಮಗೆ ಬೇಕಾದ ಪದದ ಅರ್ಥ ಹಾಗೂ ಅದರ ಬಳಕೆಯನ್ನು ಸುಲಭವಾಗಿ ಮಾಡಬಹುದಾಗಿದೆ. ಅಲ್ಲದೇ ಇಂಗ್ಲೀಷ್‌ನಲ್ಲಿ ನೀವು ಕಮಾಂಡ್‌ಗಳನ್ನು ನೀಡುವ ಮೂಲಕ ಭಾಷಾಂತರ ಮತ್ತು ಇಂಗ್ಲೀಷ್ ಪದದ ಹಿಂದಿ ಅರ್ಥವನ್ನು ಪಡೆಯಬಹುದಾಗಿದೆ.
 
ಒಟ್ಟಿನಲ್ಲಿ ಸುಲಭವಾಗಿ ಭಾಷೆಯನ್ನು ಅರ್ಥೈಸಿಕೊಳ್ಳಲು ಮತ್ತು ಸಂವಹನ ನಡೆಸಲು ಈ ಆಪ್ ಉಪಯುಕ್ತಕಾರಿಯಾಗಿದೆ ಎನ್ನಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ
Show comments