ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಮದುವೆಗೆ ಖರ್ಚು ಬಲು ದುಬಾರಿ

Krishnaveni K
ಶುಕ್ರವಾರ, 1 ಮಾರ್ಚ್ 2024 (09:34 IST)
ಮುಂಬೈ: ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮಗಳು ಗುಜರಾತ್ ನ ಜಾಮ್ ನಗರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ.
 
ಈ ಕಾರ್ಯಕ್ರಮಕ್ಕೆ ಈಗಾಗಲೇ ಬಾಲಿವುಡ್, ರಾಜಕೀಯ, ಕ್ರಿಕೆಟ್, ಉದ್ಯಮ ವಲಯ ಸೇರದಿಂತೆ ಗಣ್ಯಾತಿ ಗಣ್ಯರು ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಬರಲು ಅತಿಥಿಗಳಿಗೆ ಐಷಾರಾಮಿ ಕಾರು, ವಸತಿ ವ್ಯವಸ್ಥೆ ಎಲ್ಲವನ್ನೂ ಅಂಬಾನಿ ಕುಟುಂಬ ಮಾಡಿದೆ.

ಈಗಾಗಲೇ ಬಾಲಿವುಡ್ ನಟ ಸಲ್ಮಾನ್ ಖಾನ್, ಶಾರುಖ್ ಖಾನ್ ಕುಟುಂಬ ಸೇರಿದಂತೆ ಸೆಲೆಬ್ರಿಟಿಗಳ ದಂಡೇ ಜಾಮ್ ನಗರಕ್ಕೆ ಬಂದಿದೆ. ಇವರೆಲ್ಲರಿಗೂ ಕೋಟಿ ಬೆಲೆಯ ರೋಲ್ಸ್ ರೋಯ್, ಬಿಎಂಡಬ್ಲ್ಲು ಕಾರಿನ ವ್ಯವಸ್ಥೆ ಮಾಡಲಾಗಿದೆ. ಮದುವೆಗೆ ಮೊದಲು ಅಂಬಾನಿ ಕುಟುಂಬ ಸಾಂಪ್ರದಾಯಿಕವಾಗಿ ತಮ್ಮ ಗ್ರಾಮಸ್ಥರಿಗೆ ಅನ್ನ ಸಂತರ್ಪಣೆ ಮಾಡಿದೆ. ಈ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿಗೆ ಭೋಜನ ನೀಡಲಾಗಿದೆ.

ಹೇಳಿ ಕೇಳಿ, ಮುಕೇಶ್ ಅಂಬಾನಿ ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು. ಹೀಗಾಗಿ ಅವರ ಸಂಪತ್ತಿಗೆ ತಕ್ಕಂತೇ ಮದುವೆ ಮಾಡುತ್ತಿದ್ದಾರೆ. ಮುಕೇಶ್ ಅಂಬಾನಿ ಮಕ್ಕಳ ಪೈಕಿ ಇದು ಕೊನೆಯ ಮದುವೆ. ಹೀಗಾಗಿ ಅಂಬಾನಿ ಕುಟುಂಬ ತಮ್ಮ ಕಿರಿಯ ಮಗನ ಮದುವೆಗೆ 1000 ಕೋಟಿ ರೂ. ಖರ್ಚು ಮಾಡುತ್ತಿದೆ ಎಂದು ವರದಿಯಾಗಿದೆ. ಮದುವೆಗೆ ರಾಧಿಕಾ ತೊಡುವ ಬಟ್ಟೆಯ ಬೆಲೆಯೇ ಕೋಟ್ಯಾಂತರ ರೂಪಾಯಿಗಳಿವೆ. ಜೊತೆಗೆ ಮದುವೆ ಕಾರ್ಯಕ್ರಮಗಳಿಗೆ ಆಗಮಿಸುವ ಅತಿಥಿಗಳಿಗೆ ಮನರಂಜನೆ ನೀಡಲು ಹಾಲಿವುಡ್, ಪಾಪ್ ಗಾಯಕರನ್ನು ಕರೆಸಲಾಗುತ್ತಿದ್ದು, ಅವರಿಗೆ ಕೋಟಿಗಟ್ಟಲೆ ಸಂಭಾವನೆ ನೀಡಲಾಗುತ್ತಿದೆ. ಜೊತೆಗೆ ಮದುವೆ ಬರುವ ಅತಿಥಿಗಳಿಗೆ ನೀಡಲೆಂದೇ ಅಂಬಾನಿ ಕುಟುಂಬ ವಿಶೇಷ ಉಡುಗೊರೆಗಳನ್ನೂ ನಿರ್ಮಿಸಲು ಗುತ್ತಿಗೆ ನೀಡಿದೆ. ಹೀಗೆ ಅಂಬಾನಿ ಮನೆ ಮದುವೆ ಎಂದರೆ ಇಡೀ ವಿಶ್ವವೇ ತಿರುಗಿ ನೋಡುವಂತೆ ಮದುವೆ ಮಾಡಲಿದ್ದಾರೆ ಮುಕೇಶ್ ಅಂಬಾನಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಲ್ಲೆಂದರಲ್ಲಿ ಕಸ ಎಸೆದರೆ ಎಚ್ಚರ: ಇನ್ನು ಮುಂದೆ ರಸ್ತೆರಸ್ತೆಯಲ್ಲೂ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು

ಗ್ರಾಹಕರಿಗೆ ಗುಡ್‌ನ್ಯೂಸ್‌: ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆ ಇಂದಿನಿಂದಲೇ ಕೊಂಚ ಅಗ್ಗ

ಆರ್ ಎಸ್ಎಸ್ ಪಂಥಸಂಚಲನಕ್ಕೆ ಅನುಮತಿ ಬೇಕು, ಎಂಇಎಸ್ ಪುಂಡರಿಗೆ ಇದು ಅಪ್ಲೈ ಆಗಲ್ವಾ

ಮತ್ತೊಂದು ಕಾಲ್ತುಳಿತ: ಇತಿಹಾಸ ಪ್ರಸಿದ್ಧ ಕ್ಷೇತ್ರದಲ್ಲಿ ದೇವರದರ್ಶನದ ನೂಕುನುಗ್ಗಲಿನಲ್ಲಿ 9 ಮಂದಿ ಸಾವು

ಮೋದಿ ವಿರುದ್ಧ ಸದಾ ಕೆಂಡಕಾರುತ್ತಿದ್ದ ಸಂಜಯ್ ರಾವತ್ ಗೆ ಏನಾಗಿದೆ ನೋಡಿ: ಗಂಭೀರ ಸಮಸ್ಯೆಯಲ್ಲಿ ನಾಯಕ

ಮುಂದಿನ ಸುದ್ದಿ
Show comments