Webdunia - Bharat's app for daily news and videos

Install App

ಎಟಿಎಂನಲ್ಲಿ ಕ್ಯೂ ನಿಂತು ಬೇಸತ್ತ ಯುವತಿ ಆಕ್ರೋಶದಿಂದ ಟಾಪ್‌ಲೆಸ್ ಪ್ರತಿಭಟನೆ

Webdunia
ಗುರುವಾರ, 17 ನವೆಂಬರ್ 2016 (15:55 IST)
ಹಣವನ್ನು ಪಡೆಯಲು ಎಟಿಎಂನಲ್ಲಿ ಸರದಿಗಾಗಿ ನಿಂತಿದ್ದ ಯುವತಿಯೊಬ್ಬಳು ಗಂಟೆಗಳು ಕಳೆದರು ಹಣ ದೊರೆಯದಿದ್ದಾಗ ಆಕ್ರೋಶಗೊಂಡು ಪ್ರತಿಭಟನೆ ತೋರಲು ತನ್ನ ಟಿ-ಶರ್ಟ್ ಬಿಚ್ಚೆಸೆದು ಟಾಪ್‌ಲೆಸ್ ಆದ ಘಟನೆ ವರದಿಯಾಗಿದೆ.  
ಪ್ರಧಾನಮಂತ್ರಿ ನರೇಂದ್ರ ಮೋದಿಯ 500 ರೂ ಮತ್ತು 1000 ರೂಪಾಯಿ ನೋಟುಗಳಿಗಾಗಿ ಹೇರಿದ ನಿಷೇಧ ಹಲವರ ಜೀವನದಲ್ಲಿ ರಾತೋರಾತ್ರಿ ಬದಲಾವಣೆ ತಂದಿದೆ. ಹಳೆಯ ನೋಟುಗಳನ್ನು ನಿಷೇಧಿಸಿದ್ದರಿಂದ ಜನರು ಹೊಸ ನೋಟಿಗಾಗಿ ಎಟಿಎಂ ಮುಂದೆ ನಿಲ್ಲುವುದು ಅನಿವಾರ್ಯವಾಗಿದೆ.
 
ಕೇಂದ್ರ ಸರಕಾರದ ವಿವೇಚನೆಯಿಲ್ಲದ ನಿರ್ಧಾರದಿಂದಾಗಿ ದೇಶದ ಜನತೆ ತತ್ತರಿಸಿ ಹೋಗಿದ್ದಾರೆ. ಕಪ್ಪು ಹಣ ಹೊಂದಿದವರು ತಮ್ಮ ಹಣವನ್ನು ವೈಟ್ ಹೇಗೆ ಮಾಡಬೇಕು ಎನ್ನುವ ಚಿಂತೆಯಲ್ಲಿದ್ದರೆ, ಕೆಲವರು ಪರಿಶ್ರಮ, ಪ್ರಾಮಾಣಿಕತೆಯಿಂದ ದುಡಿದ ಹಣವನ್ನು ಪಡೆಯುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದಾರೆ. 
 
ನವದೆಹಲಿಯ ಮಯೂರ್ ವಿಹಾರ್ ಪ್ರದೇಶದಲ್ಲಿ ಎಟಿಎಂ ಕ್ಯೂ ನಲ್ಲಿ ನಿಂತಿದ್ದ ಯುವತಿಯೊಬ್ಬಳು ಹಲವು ಗಂಟೆಗಳು ಕಾದರೂ ಹಣ ದೊರೆಯದಿದ್ದಾಗ ಸರದಿಯಲ್ಲಿ ನಿಂತಿರುವ ನೂರಾರು ಜನರ ಮಧ್ಯೆಯೇ ತನ್ನ ಟಿ-ಶರ್ಟ ಬಿಚ್ಚೆಸೆದು ಟಾಪ್‌ಲೆಸ್ ಆಗಿದ್ದಾಳೆ.
 
ಎಟಿಎಂ ಸರದಿಯಲ್ಲಿ ನಿಂತಿರುವ ಗ್ರಾಹಕರನ್ನು ನಿಯಂತ್ರಿಸಲು ನಿಂತಿದ್ದ ಮಹಿಳಾ ಪೇದೆಯೊಬ್ಬಳು ಕೂಡಲೇ ಯುವತಿಯನ್ನು ಟೀ-ಶರ್ಟ್ ಧರಿಸುವಂತೆ ಒತ್ತಾಯಿಸಿ ನಂತರ ಗಾಜಿಪುರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾಳೆ. ನಂತರ ಯುವತಿಯನ್ನು ಎಕ್ಸಿಸ್ ಬ್ಯಾಂಕ್‌ಗೆ ಕರೆದುಕೊಂಡು ಆಕೆಗೆ ಅಗತ್ಯವಾಗಿರುವ ಹಣ ಪಡೆಯಲು ಪೊಲೀಸರು ಸಹಕರಿಸಿದ್ದಾರೆ.
 
ವರದಿಗಳ ಪ್ರಕಾರ, ಹಲವು ಗಂಟೆಗಳಿಂದ ಎಟಿಎಂನಲ್ಲಿ ಹಣ ಪಡೆಯಲು ಸರದಿಗಾಗಿ ಗ್ರಾಹಕರು ಕಾಯುತ್ತಾ ನಿಂತಿದ್ದರು ಎನ್ನಲಾಗಿದೆ. ಆದರೆ,ಯುವತಿ ಬೇಸತ್ತು ತನ್ನ ಟಿ-ಶರ್ಟ್ ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಪ್ರಧಾನಿ ಮೋದಿಯ ನಿರ್ಧಾರವನ್ನು ಲಕ್ಷಾಂತರ ಜನರು ಸ್ವಾಗತಿಸಿದರೂ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಾಸ್ತವತೆ ಭಿನ್ನವಾಗಿದೆ ಎನ್ನುವುದನ್ನು ನಿರ್ಲಕ್ಷಿಸುವಂತಿಲ್ಲ ಎಂದು ಮೂಲಗಳು ತಿಳಿಸಿವೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕಿಸ್ತಾನ ಪರ ಬೇಹುಗಾರಿಗೆ: ಎನ್‌ಐಎಯಿಂದ ಯೂಟ್ಯೂಬರ್‌ ಜ್ಯೋತಿಗೆ ನಾನಾ ರೀತಿಯಲ್ಲಿ ಪ್ರಶ್ನೆ

ಕನ್ನಡ ಮಾತೇ ಆಡಲ್ಲ, ಹಿಂದಿ ರಾಷ್ಟ್ರ ಭಾಷೆ ಏನಿವಾಗ? SBI ಅಧಿಕಾರಿಯ ದರ್ಪ: video

Pahalgam Attack, ಅಂದು ಮೋದಿ ಎಚ್ಚರಿಕೆ ನೀಡುತ್ತಿದ್ದರೆ 26 ಮಂದಿಯ ಜೀವ ಉಳಿಯುತ್ತಿತ್ತು: ಮಲ್ಲಿಕಾರ್ಜುನ ಖರ್ಗೆ

ಅಂದು ನಾವು ನೀಡಿದ ಅನುದಾನದಲ್ಲಿ ಕಾಮಗಾರಿ ಮಾಡ್ತಿದ್ರೆ ಬೆಂಗಳೂರಿಗೆ ಈ ಪರಿಸ್ಥಿತಿ ಬರ್ತಿರ್ಲಿಲ್ಲ: ಆರ್‌ ಅಶೋಕ್‌

IMD, ಕೇರಳಕ್ಕೆ ನಾಲ್ಕೈದು ದಿನಗಳಲ್ಲಿ ಮುಂಗಾರು ಪ್ರವೇಶ

ಮುಂದಿನ ಸುದ್ದಿ
Show comments