ಬ್ಯಾಂಕಿಂಗ್ ವಲಯ ಸುಧಾರಣೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ಮತ್ತು ಕೆಲವು ವಿಷಯದಲ್ಲಿ ನಿಷ್ಕ್ರಿಯತೆಯನ್ನು ಖಂಡಿಸಿ 9 ಬ್ಯಾಂಕ್ ಸಂಘಟನೆಗಳು ಜುಲೈ 29 ರಿಂದ ಮುಷ್ಕರ ನಡೆಸಲು ತೀರ್ಮಾನಿಸಿದೆ.
ಬ್ಯಾಂಕ್ ಸಂಘಗಳ ಸಂಯುಕ್ತ ವೇದಿಕೆ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಖಿಲ ಭಾರತೀಯ ಬ್ಯಾಂಕ್ ನೌಕರರ ಒಕ್ಕೂಟದ ಜನರಲ್ ಸೆಕ್ರೆಟರಿ ಸಿ. ಹೆಚ್. ವೆಂಕಟಾಚಾಲಂ ತಿಳಿಸಿದ್ದಾರೆ.
ಬ್ಯಾಂಕಿಂಗ್ ಸೆಕ್ಟರ್ನ ಬ್ಯಾಡ್ಲೋನ್ 10 ಲಕ್ಷ ಕೋಟಿಗೆ ಹೆಚ್ಚಳಶವಾಗಿದ್ದು, ಈ ಪೈಕಿ ಅತಿ ಹೆಚ್ಚು ಬಾಕಿ ಹಣ ಉಳಿಸಿಕೊಂಡಿರುವವರು ಕಾರ್ಪೊರೇಟ್ ವಲಯದವರಾಗಿದ್ದಾರೆ. ಬಾಕಿ ಹಣ ವಸೂಲಿ ಮಾಡಲು ಕೇಂದ್ರ ಸರ್ಕಾರ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ವೆಂಕಟಾಚಲಂ ಹೇಳಿದ್ದಾರೆ.
7 ,000 ಉದ್ದೇಶ ಪೂರ್ವಕ ಬಾಕಿದಾರರಿದ್ದು, ಇವರಿಂದ 60 ,000 ಕೋಟಿ ಬಾಕಿ ಹಣ ವಸೂಲಿ ಆಗಬೇಕಿದ್ದು, ಇಂತಹ ಬಾಕಿದಾರರ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸುವಂತೆ ವೆಂಕಟಾಚಲಂ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ