Webdunia - Bharat's app for daily news and videos

Install App

ಅಟಲ್ ಪಿಂಚಣಿ ಯೋಜನೆಗೆ ಚಂದಾದಾರರಾಗಲು ಆಧಾರ್ ವಿವರ ಕಡ್ಡಾಯ

ಲಾಲ್‌ಸಾಬ್
ಶುಕ್ರವಾರ, 29 ಡಿಸೆಂಬರ್ 2017 (12:38 IST)
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್ಆರ್‌‌ಡಿಎ) ಅಟಲ್ ಪಿಂಚಣಿ ಯೋಜನೆಯಲ್ಲಿ (ಎಪಿವೈ) ಹೂಡಿಕೆ ಮಾಡುವುದಕ್ಕಾಗಿ ಆಧಾರ್ ವಿವರಗಳನ್ನು ಒದಗಿಸಲು ಚಂದಾದಾರರಿಗೆ ಕಡ್ಡಾಯಗೊಳಿಸಿದೆ.
ಚಂದಾದಾರರು ತಮ್ಮ ಆಧಾರ್‌ ಸಂಖ್ಯೆಯನ್ನು ಒದಗಿಸುವಕ್ಕಾಗಿ ಎಪಿವೈಗಾಗಿ ಪಿಎಫ್ಆರ್‌‌ಡಿಎ ನೋಂದಣೆ ಫಾರ್ಮ್ ಅನ್ನು ಮಾರ್ಪಡಿಸಿದೆ.
 
ತನ್ನ ಇತ್ತೀಚಿನ ಸುತ್ತೋಲೆಯಲ್ಲಿ ಪಿಎಫ್ಆರ್‌‌ಡಿಎ ಹೀಗೆ ಹೇಳಿದೆ, "ಆಧಾರ್ ಜೋಡಣೆ ಮತ್ತು ನಂತರದ ದೃಢೀಕರಣಕ್ಕಾಗಿ ಚಂದಾದಾರರ ಒಪ್ಪಿಗೆಯನ್ನು ಪಡೆಯಲು ಎಪಿವೈ ಚಂದಾದಾರರ ನೋಂದಣಿ ಫಾರ್ಮ್‌ ಅನ್ನು ಸೂಕ್ತ ರೂಪದಲ್ಲಿ ಮಾರ್ಪಡಿಸಿದೆ".
 
ಆಧಾರ್ ಆಟಲ್ ಪಿಂಚಣಿ ಯೋಜನೆಗೆ ಆಧಾರ್ ಕಡ್ಡಾಯವಾಗಿ ಸೇರಿಸುವುದು ಜನವರಿ 1, 2018 ರಿಂದ ಜಾರಿಗೆ ಬರುತ್ತದೆ.
 
ಎಲ್ಲಾ ಎಪಿವೈ-ಸೇವಾ ಪೂರೈಕೆದಾರರು ಜನವರಿ 1, 2018 ರಿಂದ ಜಾರಿಯಾಗುವ ಪರಿಷ್ಕೃತ ಸಮ್ಮತಿಯ ನಮೂನೆಯನ್ನು ಪಡೆಯಲು ಮತ್ತು ಪರಿಷ್ಕೃತ ನಮೂನೆಯ ಪ್ರಕಾರ ವಿವರಗಳನ್ನು ತಿಳಿದುಕೊಳ್ಳಲು ತಿಳಿಸಲಾಗಿದೆ. APY-SP ನ ಗ್ರಾಹಕರಾದ ಚಂದಾದಾರರ ಮೂಲಕ ಸಲ್ಲಿಸಲಾದ ಆಧಾರ್ ಮಾಹಿತಿಯನ್ನು ಅವರ ದೃಢೀಕರಣದ ಬಳಿಕ ಸಿಆರ್‌ಎಗೆ ಅದನ್ನು ಅಪ್‌ಲೋಡ್‌ ಮಾಡಲಾಗುತ್ತದೆ.
 
ಮೋದಿ ಸರಕಾರವು 2015 ರ ಮೇ ತಿಂಗಳಲ್ಲಿ ಎಪಿವೈ ಅನ್ನು ಪ್ರಾರಂಭಿಸಿದೆ. ಅಸಂಘಟಿತ ವಲಯದಲ್ಲಿನ ಕಾರ್ಮಿಕರ ನಡುವಿನ ದೀರ್ಘ ಅಪಾಯಗಳನ್ನು ಪರಿಹರಿಸಲು ಮತ್ತು ನಿವೃತ್ತಿಯ ಪಿಂಚಣೆಗೆ ಸ್ವಯಂಪ್ರೇರಣೆಯಿಂದ ಹೂಡಿಕೆ ಮಾಡಿ ಉಳಿಸಲು ಕಾರ್ಮಿಕರನ್ನು ಅಸಂಘಟಿತ ವಲಯದಲ್ಲಿ ಪ್ರೋತ್ಸಾಹಿಸಲು ಇದು ಸಹಾಯಕವಾಗಿದೆ.
 
ಎಪಿಐ ಅಡಿಯಲ್ಲಿ, ಪ್ರತಿ ಚಂದಾದಾರರು 60 ವರ್ಷ ಪೂರೈಸಿದ ಬಳಿಕ ಖಾತರಿಪಡಿಸಿದ ಕನಿಷ್ಠ ಮಾಸಿಕ ಪಿಂಚಣೆಯನ್ನು ಅಥವಾ ಅಧಿಕ ಮಾಸಿಕ ಪಿಂಚಣೆಯನ್ನು ಪಡೆಯುತ್ತಾರೆ, ಒಂದು ವೇಳೆ ಕನಿಷ್ಠ ಖಾತರಿಪಡಿಸಿದ ಪಿಂಚಣಿಗೆ ಸಂಬಂಧಿಸಿದಂತೆ ಹಿಂತಿರುಗಿಸುವ ಹಣದ ಹೂಡಿಕೆಯ ಆದಾಯವು ಹೆಚ್ಚಾಗಿದ್ದರೆ ಮಾತ್ರ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Hit And Run Case: ಅಮೆರಿಕದಲ್ಲಿ ಮುಂದಿನ ತಿಂಗಳು ಪದವಿ ಪಡೆಯಬೇಕಿದ್ದ ಗುಂಟೂರು ವಿದ್ಯಾರ್ಥಿನಿ ಸಾವು

ರಸ್ತೆ ಮಧ್ಯೆಯಲ್ಲಿ ಚೇರ್ ಮೇಲೆ ಕುಳಿತು ರೀಲ್ಸ್ ಹುಚ್ಚಾಟ ಮಾಡಿದವ ಅರೆಸ್ಟ್‌

Rahul Gandhi: ರೋಹಿತ್ ವೇಮುಲಾ ಕಾಯಿದೆ ಜಾರಿಗೊಳಿಸಲು ರಾಹುಲ್ ಗಾಂಧಿ ಪತ್ರ: ಯೆಸ್ ಬಾಸ್ ಎಂದ ಸಿದ್ದರಾಮಯ್ಯ

50 ಕೋಟಿ ಅಲ್ಲ ಲಕ್ಷಕ್ಕೂ ಬೆಲೆ ಬಾಳಲ್ಲ ಸತೀಶ್‌ ಖರೀದಿಸಿದ ನಾಯಿ, ED ದಾಳಿಯಲ್ಲಿ ಅಸಲಿಯತ್ತು ಬಯಲು

60ನೇ ವರ್ಷದಲ್ಲಿ ಹಸೆಮಣೆಯೇರಿದ ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ದಿಲೀಪ್‌ ಘೋಷ್‌

ಮುಂದಿನ ಸುದ್ದಿ
Show comments