Webdunia - Bharat's app for daily news and videos

Install App

ಅಟಲ್ ಪಿಂಚಣಿ ಯೋಜನೆಗೆ ಚಂದಾದಾರರಾಗಲು ಆಧಾರ್ ವಿವರ ಕಡ್ಡಾಯ

ಲಾಲ್‌ಸಾಬ್
ಶುಕ್ರವಾರ, 29 ಡಿಸೆಂಬರ್ 2017 (12:38 IST)
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್ಆರ್‌‌ಡಿಎ) ಅಟಲ್ ಪಿಂಚಣಿ ಯೋಜನೆಯಲ್ಲಿ (ಎಪಿವೈ) ಹೂಡಿಕೆ ಮಾಡುವುದಕ್ಕಾಗಿ ಆಧಾರ್ ವಿವರಗಳನ್ನು ಒದಗಿಸಲು ಚಂದಾದಾರರಿಗೆ ಕಡ್ಡಾಯಗೊಳಿಸಿದೆ.
ಚಂದಾದಾರರು ತಮ್ಮ ಆಧಾರ್‌ ಸಂಖ್ಯೆಯನ್ನು ಒದಗಿಸುವಕ್ಕಾಗಿ ಎಪಿವೈಗಾಗಿ ಪಿಎಫ್ಆರ್‌‌ಡಿಎ ನೋಂದಣೆ ಫಾರ್ಮ್ ಅನ್ನು ಮಾರ್ಪಡಿಸಿದೆ.
 
ತನ್ನ ಇತ್ತೀಚಿನ ಸುತ್ತೋಲೆಯಲ್ಲಿ ಪಿಎಫ್ಆರ್‌‌ಡಿಎ ಹೀಗೆ ಹೇಳಿದೆ, "ಆಧಾರ್ ಜೋಡಣೆ ಮತ್ತು ನಂತರದ ದೃಢೀಕರಣಕ್ಕಾಗಿ ಚಂದಾದಾರರ ಒಪ್ಪಿಗೆಯನ್ನು ಪಡೆಯಲು ಎಪಿವೈ ಚಂದಾದಾರರ ನೋಂದಣಿ ಫಾರ್ಮ್‌ ಅನ್ನು ಸೂಕ್ತ ರೂಪದಲ್ಲಿ ಮಾರ್ಪಡಿಸಿದೆ".
 
ಆಧಾರ್ ಆಟಲ್ ಪಿಂಚಣಿ ಯೋಜನೆಗೆ ಆಧಾರ್ ಕಡ್ಡಾಯವಾಗಿ ಸೇರಿಸುವುದು ಜನವರಿ 1, 2018 ರಿಂದ ಜಾರಿಗೆ ಬರುತ್ತದೆ.
 
ಎಲ್ಲಾ ಎಪಿವೈ-ಸೇವಾ ಪೂರೈಕೆದಾರರು ಜನವರಿ 1, 2018 ರಿಂದ ಜಾರಿಯಾಗುವ ಪರಿಷ್ಕೃತ ಸಮ್ಮತಿಯ ನಮೂನೆಯನ್ನು ಪಡೆಯಲು ಮತ್ತು ಪರಿಷ್ಕೃತ ನಮೂನೆಯ ಪ್ರಕಾರ ವಿವರಗಳನ್ನು ತಿಳಿದುಕೊಳ್ಳಲು ತಿಳಿಸಲಾಗಿದೆ. APY-SP ನ ಗ್ರಾಹಕರಾದ ಚಂದಾದಾರರ ಮೂಲಕ ಸಲ್ಲಿಸಲಾದ ಆಧಾರ್ ಮಾಹಿತಿಯನ್ನು ಅವರ ದೃಢೀಕರಣದ ಬಳಿಕ ಸಿಆರ್‌ಎಗೆ ಅದನ್ನು ಅಪ್‌ಲೋಡ್‌ ಮಾಡಲಾಗುತ್ತದೆ.
 
ಮೋದಿ ಸರಕಾರವು 2015 ರ ಮೇ ತಿಂಗಳಲ್ಲಿ ಎಪಿವೈ ಅನ್ನು ಪ್ರಾರಂಭಿಸಿದೆ. ಅಸಂಘಟಿತ ವಲಯದಲ್ಲಿನ ಕಾರ್ಮಿಕರ ನಡುವಿನ ದೀರ್ಘ ಅಪಾಯಗಳನ್ನು ಪರಿಹರಿಸಲು ಮತ್ತು ನಿವೃತ್ತಿಯ ಪಿಂಚಣೆಗೆ ಸ್ವಯಂಪ್ರೇರಣೆಯಿಂದ ಹೂಡಿಕೆ ಮಾಡಿ ಉಳಿಸಲು ಕಾರ್ಮಿಕರನ್ನು ಅಸಂಘಟಿತ ವಲಯದಲ್ಲಿ ಪ್ರೋತ್ಸಾಹಿಸಲು ಇದು ಸಹಾಯಕವಾಗಿದೆ.
 
ಎಪಿಐ ಅಡಿಯಲ್ಲಿ, ಪ್ರತಿ ಚಂದಾದಾರರು 60 ವರ್ಷ ಪೂರೈಸಿದ ಬಳಿಕ ಖಾತರಿಪಡಿಸಿದ ಕನಿಷ್ಠ ಮಾಸಿಕ ಪಿಂಚಣೆಯನ್ನು ಅಥವಾ ಅಧಿಕ ಮಾಸಿಕ ಪಿಂಚಣೆಯನ್ನು ಪಡೆಯುತ್ತಾರೆ, ಒಂದು ವೇಳೆ ಕನಿಷ್ಠ ಖಾತರಿಪಡಿಸಿದ ಪಿಂಚಣಿಗೆ ಸಂಬಂಧಿಸಿದಂತೆ ಹಿಂತಿರುಗಿಸುವ ಹಣದ ಹೂಡಿಕೆಯ ಆದಾಯವು ಹೆಚ್ಚಾಗಿದ್ದರೆ ಮಾತ್ರ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments