ಗುಂಡಮ್ಮಳು ಸೋಮುವಿನ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಳು. ಮೊಕದ್ದಮೆಯಲ್ಲಿ ಗುಂಡಮ್ಮನನ್ನು ಸೋಮುವು ಹಂದಿ ಎಂದು ನಿಂದಿಸಿದ್ದ ಎಂದು ಆರೋಪಿಸಲಾಗಿತ್ತು. ಅವನು ಆರೋಪಿಯೆಂದು ಘೋಷಿಸಿ ನ್ಯಾಯಾಲಯ ತೀರ್ಪು ನೀಡಿತು. ವಿಚಾರಣೆಯ ನಂತರ ಸೋಮು ನ್ಯಾಯಾಧೀಶರಿಗೆ ಕೇಳಿದ "ತೀರ್ಪಿನ ಅರ್ಥ ನಾನು ಶ್ರೀಮತಿ ಗುಂಡಮ್ಮನವರನ್ನು ಇನ್ನು ಮುಂದೆ ಹಂದಿ ಎಂದು ಕರೆಯುವ ಹಾಗಿಲ್ಲವೇ?". ನ್ಯಾಯಾಧೀಶರು ಹೌದು ಎಂದು ಹೇಳಿದರು. ಸೋಮು ಮತ್ತೆ ಕೇಳಿದ, " ಇದರರ್ಥ ಹಂದಿಯನ್ನು ನಾನು ಗುಂಡಮ್ಮ ಎಂದು ಕರೆಯುವ ಹಾಗೂ ಇಲ್ಲವೇ?" ನ್ಯಾಯಾಧೀಶರು ಆ ರೀತಿ ಕಾನೂನು ಹೇಳುವುದಿಲ್ಲವಾದ್ದರಿಂದ ಹಂದಿಗೆ ಗುಂಡಮ್ಮ ಎಂದು ಕರೆಯುವುದರಲ್ಲಿ ಯಾವುದೇ ತೊಂದರೆಯಿಲ್ಲ ಎಂದು ಹೇಳಿದರು. ನಂತರ ಸೋಮು ಗುಂಡಮ್ಮನತ್ತ ತಿರುಗಿ, "ನಮಸ್ಕಾರ ಗುಂಡಮ್ಮನವರೇ"ಎಂದ.