Publish Date: Thu, 20 Apr 2017 (16:17 IST)
Updated Date: Thu, 20 Apr 2017 (16:21 IST)
ವಿಷ್ಣು ಅವತಾರದಲ್ಲಿ ಕಾಣಿಸಿಕೊಂಡಿದ್ದ ಟೀಮ್ ಇಂಡಿಯಾ ಮಾಜಿ ನಾಯಕ ಧೋನಿ ವಿರುದ್ಧದ ಕ್ರಿಮೆನಲ್ ಕೇಸನ್ನ ಸುಪ್ರೀಂಕೋರ್ಟ್ ರದ್ದು ಮಾಡಿದೆ. ಬ್ಯುಸಿನೆಸ್ ಟುಡೇ ಮ್ಯಾಗಜಿನ್`ನಲ್ಲಿ ಧೋನಿ ವಿಷ್ಣು ಅವತಾರದಲ್ಲಿ ಕಾಣಿಸಿಕೊಂಡು ಕೈಯಲ್ಲಿ ಶೂ ಮತ್ತಿತರ ವಸ್ತುಗಳನ್ನ ಹಿಡಿದುಕೊಂಡಿದ್ದದ್ದು ಭಾರೀ ಕ್ಕೆ ಕಾರಣವಾಗಿತ್ತು.
ಧೋನಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದ್ದಾರೆಂದು ಆರೋಪಿಸಿ ಬೆಂಗಳೂರು ಮತ್ತು ಅನಂತಪುರಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. .2016ರಲ್ಲೇ ಬೆಂಗಳೂರಿನಲ್ಲಿ ದಾಖಲಾಗಿದ್ದ ಕೇಸ್ ವಜಾಗೊಂಡಿತ್ತು. ಅನಂತಪುರದಲ್ಲಿ ದಾಖಲಾಗಿದ್ದ ಎಫ್`ಐಆಆರ್ ವಜಾ ಕೋರಿ ಧೋನಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಧೋನಿಗೆ ಧಾರ್ಮಿಕ ಭಾವನೆಗೆ ಧಕ್ಕೆ ಮಾಡುವ ತಾವುದೇ ದುರುದ್ದೇಶ ಇಲ. ತಪ್ಪು ಮಾಡದ ಧೋನಿ ವಿರುದ್ಧ ಕ್ರಮ ಜರುಗಿಸುವುದು ನ್ಯಾಯದ ಅಪಹಾಸ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್ ಕೇಸ್ ವಜಾಗೊಳಿಸಿದೆ. ಇದೇವೇಳೆ, ಮ್ಯಾಗಜಿನ್ ಎಡಿಟರ್ ವಿರುದ್ಧದ ಪ್ರಕರಣವನ್ನೂ ರದ್ದು ಮಾಡಲಾಗಿದೆ.