Select Your Language

Notifications

webdunia
webdunia
webdunia
webdunia

ನಾಯಕನಾಗಿ ಕಣಕ್ಕಿಳಿಯುವ ಮೊದಲು ಅಜಿಂಕ್ಯಾ ರೆಹಾನೆಗೆ ಕರೆ ಮಾಡಿದ್ದ ಸಚಿನ್ ತೆಂಡುಲ್ಕರ್!

ನಾಯಕನಾಗಿ ಕಣಕ್ಕಿಳಿಯುವ ಮೊದಲು ಅಜಿಂಕ್ಯಾ ರೆಹಾನೆಗೆ ಕರೆ ಮಾಡಿದ್ದ ಸಚಿನ್ ತೆಂಡುಲ್ಕರ್!
Mumbai , ಮಂಗಳವಾರ, 4 ಏಪ್ರಿಲ್ 2017 (10:02 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಅಂತಿಮ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ನಾಯಕರಾಗಿದ್ದ ಅಜಿಂಕ್ಯಾ ರೆಹಾನೆ ಆತಂಕದಲ್ಲಿದ್ದರಂತೆ. ಆಗ ಅವರ ನೆರವಿಗೆ ಬಂದವರು ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್!

 
ಹಾಗಂತ ಸ್ವತಃ ರೆಹಾನೆ ಹೇಳಿಕೊಂಡಿದ್ದಾರೆ. ಕೊಹ್ಲಿ ಗಾಯಗೊಂಡಿದ್ದರಿಂದ ತಂಡದಲ್ಲಿ ಎಲ್ಲರ ಮೂಡ್ ಕೆಟ್ಟದಾಗಿತ್ತು. ಅವರಿಲ್ಲದೇ ನಾಯಕನಾಗಿ ಕಣಕ್ಕಿಳಿಯುವ ಆತಂಕವಿತ್ತು. ಆದರೆ ಆ ಸಂದರ್ಭದಲ್ಲಿ ಸಚಿನ್ ಪಾಜಿ ಕರೆ ಮಾಡಿದ್ದರು.

 
ಹೆದರಬೇಡ. ನಿನ್ನದೇ ಶೈಲಿಯಲ್ಲಿ ನಾಯಕತ್ವ ನಿಭಾಯಿಸು ಎಂದು ಧೈರ್ಯ ತುಂಬಿದರು. ಹೀಗಾಗಿ ತಂಡದಲ್ಲಿ ಎಷ್ಟೇ ಸೀನಿಯರ್ ಗಳಿದ್ದರೂ, ನನ್ನದೇ ಶೈಲಿಯಲ್ಲಿ ಆಟಗಾರರನ್ನು ನಿಭಾಯಿಸಿದೆ ಎಂದು ರೆಹಾನೆ ಹೇಳಿಕೊಂಡಿದ್ದಾರೆ. ಈ ಪಂದ್ಯದಲ್ಲಿ ರೆಹಾನೆ ಭಾರತ ತಂಡಕ್ಕೆ ಗೆಲುವು ಕೊಡಿಸಿದ್ದರಲ್ಲದೆ, ಅವರ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಸಿಐಗೆ 5 ಕೋಟಿ ರೂ. ವೇತನ ನೀಡುವಂತೆ ವಿರಾಟ್ ಕೊಹ್ಲಿ ಬೇಡಿಕೆ!