ಬೆಂಗಳೂರು: ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಪರ್ದೆ ಕೊನೆಗೊಂಡಿದೆ. ಅಂತಿಮ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್ ಗಳಿಂದ ಸೋಲೊಪ್ಪಿತು.
ಇದರೊಂದಿಗೆ ಈ ಬಾರಿಯ ಐಪಿಎಲ್ ಹಾದಿಯನ್ನು ತೀರಾ ಕಳಪೆಯಾಗಿ ಮುಗಿಸಿ ಅಭಿಮಾನಿಗಳು ಮತ್ತು ಫ್ರಾಂಚೈಸಿಗೆ ನಿರಾಸೆ ಮೂಡಿಸಿತು. ಒಟ್ಟು 11 ಪಂದ್ಯಗಳನ್ನು ಆಡಿದ ಆರ್ ಸಿಬಿಗೆ ದಕ್ಕಿದ್ದು ಕೇವಲ ಎರಡೇ ಗೆಲುವು.
ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ ಎಬಿಡಿ ವಿಲಿಯರ್ಸ್ ಅವರ ಬಿರುಸಿನ 43 ರನ್ ಗಳ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 162 ರನ್ ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಿತು. ನಾಯಕ ಕೊಹ್ಲಿ 20 ರನ್ ಗೆ ವಿಕೆಟ್ ಒಪ್ಪಿಸಿದರು.
ಗೆಲುವಿನ ಗುರಿ ಬೆನ್ನತ್ತಿದ ಮುಂಬೈಗೆ ರೋಹಿತ್ ಶರ್ಮಾ ಅರ್ಧಶತಕ ಆಸರೆಯಾಯಿತು. ಅವರು 37 ಬಾಲ್ ಗಳಲ್ಲಿ 56 ರನ್ ಗಳಿಸಿದರು. ಇದರೊಂದಿಗೆ ಮುಂಬೈ ಪ್ಲೇ ಆಫ್ ಹಂತಕ್ಕೆ ಅರ್ಹತೆ ಪಡೆಯಿತು. ಬೆಂಗಳೂರು ನಿರಾಸೆಯಿಂದ ನಿರ್ಗಮಿಸಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ