ಡೊನಾಲ್ಡ್ ಟ್ರಂಪ್ ದುಬಾರಿ ಸುಂಕ ಇಂದಿನಿಂದ ಜಾರಿಗೆ: ಭಾರತದ ಯಾವ ಉದ್ಯಮಗಳಿಗೆ ಹೊಡೆತ

Krishnaveni K
ಶುಕ್ರವಾರ, 1 ಆಗಸ್ಟ್ 2025 (09:50 IST)
ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ವಿಧಿಸಿರುವ ದುಬಾರಿ ಸುಂಕ ನೀತಿ ಇಂದಿನಿಂದ ಜಾರಿಗೆ ಬರಲಿದೆ. ಈ ಸುಂಕ ನೀತಿಯಿಂದ ಭಾರತದ ಯಾವೆಲ್ಲಾ ಉದ್ಯಮಗಳಿಗೆ ಹೊಡೆತ ಬೀಳಲಿದೆ ಇಲ್ಲಿದೆ ವಿವರ.

ಭಾರತದ ಉತ್ಪನ್ನಗಳಿಗೆ ಅಮೆರಿಕಾ 25% ಸುಂಕ ವಿಧಿಸಿದೆ. ರಷ್ಯಾ ಜೊತೆಗಿನ ಭಾರತದ ಸ್ನೇಹ ಸಂಬಂಧ, ವಾಣಿಜ್ಯ ವಹಿವಾಟುಗಳು ಡೊನಾಲ್ಡ್ ಟ್ರಂಪ್ ನಿದ್ದೆಗೆಡಿಸಿದೆ. ಇನ್ನೊಂದೆಡೆ ಅಮೆರಿಕಾದ ಮಾಂಸಾಹಾರ ಹಾಲು ಭಾರತದ ಮಾರುಕಟ್ಟೆ ಪ್ರವೇಶಿಸಲು ಭಾರತ ಒಪ್ಪದೇ ಇರುವುದು ಟ್ರಂಪ್ ಕೋಪಕ್ಕೆ ಕಾರಣವಾಗಿದೆ. ಈ ಎಲ್ಲಾ ಕಾರಣಗಳಿಗೆ ಭಾರತಕ್ಕೆ ಹಿಡಿಶಾಪ ಹಾಕಿ ಭಾರೀ ಸುಂಕ ನಿಗದಿಗೊಳಿಸಿದ್ದಾರೆ. ಇದು ಇಂದಿನಿಂದಲೇ ಜಾರಿಗೆ ಬರಲಿದೆ.

ಔಷಧೀಯ ವಸ್ತುಗಳು
ಅಮೆರಿಕಾಗೆ ಭಾರತ ಔಷಧೀಯ ವಸ್ತುಗಳನ್ನು ಭಾರೀ ಪ್ರಮಾಣದಲ್ಲಿ ರಫ್ತು ಮಾಡುತ್ತದೆ. ಇದರಿಂದ ಭಾರತಕ್ಕೆ ವಾರ್ಷಿಕವಾಗಿ 8 ಬಿಲಿಯನ್ ಡಾಲರ್ ವ್ಯವಹಾರವಾಗುತ್ತಿದೆ. ಭಾರತದ ಪ್ರಮುಖ ಔಷಧಿ ತಯಾರಿಕಾ ಸಂಸ್ಥೆಗಳಿಗೆ ಅಮೆರಿಕಾಗೆ ರಫ್ತು ಮಾಡುವ ವಸ್ತುಗಳಿಂದಲೇ ಆದಾಯ ಸಿಗುತ್ತಿದೆ. ಈ ಉದ್ಯಮಗಳಿಗೆ ಹೊಡೆತವಾಗಲಿದೆ.

ಜವಳಿ ಉದ್ಯಮ
ಭಾರತದಲ್ಲಿ ತಯಾರಾಗುವ ಫ್ಯಾಬ್ರಿಕ್ಸ್, ಶೂಗಗಳಿಗೆ ಅಮೆರಿಕಾದ ದೈತ್ಯ ಮಳಿಗೆಗಳು ಮಾರುಕಟ್ಟೆಗಳಾಗಿವೆ. ಆದರೆ ಈಗ ದುಬಾರಿ ಸುಂಕದಿಂದ ಈ ಉದ್ಯಮಗಳಿಗೆ ಹೊಡೆತ ಬೀಳಲಿದೆ.

ರತ್ನಗಳು, ಆಭರಣಗಳು
ಅಮೆರಿಕಾಗೆ ಭಾರತ 10 ಬಿಲಿಯನ್ ಡಾಲರ್ ನಷ್ಟು ಮುತ್ತು, ಆಭರಣಗಳನ್ನು ರಫ್ತು ಮಾಡುತ್ತಿದೆ. ಆದರೆ ಈಗ ದುಬಾರಿ ಸುಂಕದಿಂದ ರಫ್ತು ಮಾಡಲು ಹೆಚ್ಚು ಸಮಯ ಮತ್ತು ವೆಚ್ಚ ಹೆಚ್ಚಾಗಲಿದೆ.

ಎಲೆಕ್ಟ್ರಾನಿಕ್ಸ್
ಭಾರತದ ಸ್ಮಾರ್ಟ್ ಫೋನ್ ಗಳ ರಫ್ತು ಪ್ರಮಾಣ ಕಳೆದ ಮೂರು ವರ್ಷಗಳಲ್ಲಿ ಗಣನೀಯವಾಗಿ ಏರಿಕೆಯಾಗಿತ್ತು. ಇತ್ತೀಚೆಗಷ್ಟೇ ಚೀನಾವನ್ನೂ ಭಾರತ ಹಿಂದಿಕ್ಕಿತ್ತು. ಆದರೆ ಈಗ ಇವುಗಳ ಸಾಗಣೆಗೂ ಹೊಡೆತ ಬೀಳಲಿದೆ.

ತೈಲೋದ್ಯಮ
ರಷ್ಯಾದ ತೈಲ ಸಂಸ್ಕರಣೆಗಳ ಮೇಲೆ ದುಬಾರಿ ಸುಂಕ ವಿಧಿಸಿರುವುದರಿಂದ ಅಲ್ಲಿಂದ ಭಾರತ ಭಾರೀ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುವುದರಿಂದ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ತೈಲ ಖರೀದಿ ಮತ್ತಷ್ಟು ದುಬಾರಿಯಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ನಾಚಿಕೆಯಿಲ್ಲದೇ ಸುಳ್ಳು ಹೇಳುವ ಪ್ರಲ್ಹಾದ್ ಜೋಶಿಗೆ ಮಾನ ಮರ್ಯಾದೆ ಇದ್ಯಾ: ಸಿದ್ದರಾಮಯ್ಯ ಗರಂ

ಇಂದಿರಾ ಕಿಟ್ ಫಲಾನುಭವಿಗಳು ತಪ್ಪದೇ ಗಮನಿಸಿ: ಇನ್ಮುಂದೆ ಈ ಬದಲಾವಣೆ ಖಚಿತ

ರೈತರ ಪ್ರತಿಭಟನೆಗೆ ಕೇಂದ್ರವನ್ನು ದೂರಿದ ಸಿದ್ದರಾಮಯ್ಯ: ಕಳ್ಳನಿಗೊಂದು ಪಿಳ್ಳೆ ನೆವ ಎಂದ ಪಬ್ಲಿಕ್

ಸರ್ಕಾರಕ್ಕೆ ಕೊನೆಯ ಎಚ್ಚರಿಕೆ ಕೊಟ್ಟ ಕಬ್ಬು ಬೆಳೆಗಾರರು: ಇದೇ ಕೊನೇ ಡೆಡ್ ಲೈನ್

ಮುಂದಿನ ಸುದ್ದಿ
Show comments