Webdunia - Bharat's app for daily news and videos

Install App

ಗುದದ್ವಾರಕ್ಕೆ 2 ಅಡಿ ಉದ್ದದ ನೀರ ಹಾವು ಬಿಟ್ಟುಕೊಂಡ ಭೂಪ: ಆಮೇಲೇನಾಯ್ತು ಇಲ್ಲಿ ನೋಡಿ

Krishnaveni K
ಶುಕ್ರವಾರ, 2 ಆಗಸ್ಟ್ 2024 (15:19 IST)
Photo Credit: X
ವಿಯೆಟ್ನಾಂ: ಭಾರತ ಮೂಲದ ನಿವಾಸಿಯೊಬ್ಬ ತನ್ನ ಲೈಂಗಿಕ ತೃಷೆ ತೀರಿಸಿಕೊಳ್ಳಲು ಗುದದ್ವಾರಕ್ಕೆ ಎರಡು ಅಡಿ ಉದ್ದದ ಮೀನಿನ ವರ್ಗದ ನೀರು ಹಾವು ಬಿಟ್ಟುಕೊಂಡು ಫಜೀತಿ ಅನುಭವಿಸಿದ ಘಟನೆ ವಿಯೆಟ್ನಾಂ ದಲ್ಲಿ ನಡೆದಿದೆ.

31 ವರ್ಷದ ವ್ಯಕ್ತಿ ಜುಲೈ 27 ರಂದು ತೀವ್ರ ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ. ಸಾಕಷ್ಟು ಪರೀಕ್ಷೆಗಳನ್ನು ನಡೆಸಿದ ವೈದ್ಯರಿಗೆ ಆತನ ಹೊಟ್ಟೆಯೊಳಗೆ ನೀರ ಹಾವು ಇದ್ದಿದ್ದು ಪತ್ತೆಯಾಗಿತ್ತು. ಇದನ್ನು ನೋಡಿದ ವೈದ್ಯರು ಸ್ವತಃ ದಂಗಾಗಿದ್ದರು. ಆಧುನಿಕ ಉಪಕರಣಗಳನ್ನು ಬಳಸಿ ಹೊರಗಿನಿಂದಲೇ ನೀರ ಹಾವನ್ನು ಹೊರಗೆ ಹಾಕಲು ವೈದ್ಯರು ಪ್ರಯತ್ನಿಸಿದರು.

ಆದರೆ ಆ ಭೂಪ ಇದರ ಜೊತೆಗೆ ಒಂದು ನಿಂಬೆ ಹಣ್ಣನ್ನೂ ತೂರಿದ್ದ. ಹೀಗಾಗಿ ವೈದ್ಯಕೀಯ ಸಲಕರಣೆಯಿಂದ ಅದನ್ನು ಹೊರಗೆ ತೆಗೆಯಲು ಸಾಧ್ಯವಾಗಲಿಲ್ಲ. ಬಳಿಕ ವೈದ್ಯರು ಶಸ್ತ್ರಚಿಕಿತ್ಸೆಯನ್ನೇ ನಡೆಸಬೇಕಾಯಿತು. ಹೊಟ್ಟೆಯೊಳಗೆ ಸೇರಿಸಿದ್ದ ನೀರ ಹಾವು ಆಗಲೇ ಆತನ ಕರುಳು, ಗುದ ನಾಳವನ್ನು ಕಚ್ಚಿ ಹಾನಿ ಮಾಡಲು ಆರಂಭಿಸಿತ್ತು.

ಲೈಂಗಿಕ ಕಾಮನೆಗಳನ್ನು ತೀರಿಸಿಕೊಳ್ಳಲು ಇಂತಹ ಜೀವಂತ ಪ್ರಾಣಿಗಳನ್ನು ಬಿಟ್ಟುಕೊಳ್ಳುವಂತಹ ಹುಚ್ಚು ಸಾಹಸಕ್ಕೆ ಕೈ ಹಾಕಬೇಡಿ ಎಂದು ವೈದ್ಯರು ಎಚ್ಚರಿಸಿದ್ದಾರೆ. ಇದು ಕರುಳು ಕಚ್ಚಿ ತಿಂದು ಹಾಕುವುದರಿಂದ ಆತನ ಜೀವಕ್ಕೇ ಅಪಾಯ ತಂದೊಡ್ಡುತ್ತಿತ್ತು. ಆದರೆ ಸಮಯಕ್ಕೆ ಸರಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ಹಾವು ಹೊರಹಾಕಿದ್ದರಿಂದ ಜೀವ ಉಳಿದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ