Webdunia - Bharat's app for daily news and videos

Install App

ಮೃತ ಯಜಮಾನನ ಮೇಲೆ ಬೆಕ್ಕಿನ ಪ್ರೀತಿ ಅದಮ್ಯ ಪ್ರೀತಿ ನೋಡಿ

Webdunia
ಶುಕ್ರವಾರ, 4 ನವೆಂಬರ್ 2016 (12:24 IST)
ಸಾಕು ಪ್ರಾಣಿಗಳು ಮನೆಯ ಸದಸ್ಯರಷ್ಟೇ ಆಪ್ತರಾಗಿರುತ್ತವೆ. ಅವು ತೋರಿಸುವ ಪ್ರೀತಿಯಂತೂ ಮನುಷ್ಯರನ್ನೇ ನಾಚಿಸುತ್ತದೆ. ತಮ್ಮನ್ನು ಪ್ರೀತಿಸುವವರ ಅಗಲಿಕೆಯಲ್ಲಂತೂ ಅವರು ಅಕ್ಷರಶಃ ಖಿನ್ನತೆಗೆ ಜಾರಿ ಬಿಡುತ್ತವೆ. ಕೆಲವಂತೂ ಆಹಾರವನ್ನು ತ್ಯಜಿಸಿ ಪ್ರಾಣವನ್ನು ಕಳೆದುಕೊಂಡು ಬಿಡುತ್ತವೆ. ಇಂತಹ ಪ್ರಾಣಿ ಪ್ರೀತಿಗೊಂದು ಅತ್ಯುನ್ನತ ಉದಾಹರಣೆ ಈ ಬೆಕ್ಕು. ಅಗಲಿದ ತನ್ನ ಮಾಲೀಕನನ್ನು ಮರೆಯಲಾಗದೆ ಪರದಾಡುತ್ತಿರುವ ಇದು ಆತನಿಗಾಗಿ ಮಿಡಿಯುತ್ತಿರುವ ರೀತಿ ಅನನ್ಯವಾದುದು.

 
ಇದು ಇಂಡೋನೇಶ್ಯಾದ ಕೇಂದ್ರ ಜಾವಾದಲ್ಲಿ ಬೆಳಕಿಗೆ ಬಂದಿರುವ ಘಟನೆ. ಕೆಲಿ ಕೆನ್ನಿಂಗೌ ಪ್ರಾಯಿತ್ನೋ(28) ಎಂಬುವವರು ಒಂದು ದಿನ ಸಮಾಧಿಯೊಂದರ ಮೇಲೆ ಬೆಕ್ಕೊಂದು ಕುಳಿತಿರುವುದನ್ನು ನೋಡಿದ್ದರು. ಮರುದಿನವೂ ಅದು ಅಲ್ಲೇ ಕುಳಿತಿದ್ದುದನ್ನು ನೋಡಿದ ಅವರಿಗೆ ಕುತೂಹಲವಾಯಿತು. ಪ್ರತಿದಿನ ಅದರ ಮೇಲೆ ಗಮನವಿಟ್ಟ ಅವರಿಗೆ ಆಶ್ಚರ್ಯ ಇಮ್ಮಡಿಯಾಗುತ್ತ ಹೋಯಿತು. ಆ ಬೆಕ್ಕು ಸದಾ ಅಲ್ಲಿಯೇ ಕುಳಿತಿರುತ್ತಿತ್ತು. ಮೂಕ ಪ್ರಾಣಿ ಈ ವರ್ತನೆಗೆ ಮೂಕ ಮಿಸ್ಮಿತರಾದ ಅವರು ಅದಕ್ಕೆ ಆಹಾರವನ್ನು ನೀಡಿದರು. ಆದರೆ ಅದು ಸ್ವೀಕರಿಸಲಿಲ್ಲ. ಹೀಗಾಗಿ ಅದನ್ನು ಮನೆಗೆ ಎತ್ತಿಕೊಂಡು ಹೋದರು. ಆದರೆ ಬೆಕ್ಕು ಕೆಲವೇ ಕ್ಷಣಗಳಲ್ಲಿ ಮರಳಿ ಆ ಸಮಾಧಿಯ ಮೇಲೆ ಬಂದು ಒರಗಿಗೊಂಡಿತು. 
 
ಆ ಬೆಕ್ಕಿನ ಯಜಮಾನ ಒಂದು ವರ್ಷದ ಹಿಂದೆ ಸಾವನ್ನಪ್ಪಿದ್ದು ಅಂದಿನಿಂದ ಪ್ರತಿದಿನ ಬೆಕ್ಕು ಅವನ ಸಮಾಧಿಯ ಮೇಲೆ ವಾಸಿಸುತ್ತಿದೆಯಂತೆ. ಹಸಿವಾದಾಗ ತನ್ನ ಯಜಮಾನನ ಮನೆಗೆ ಹೋಗಿ ಆಹಾರ ಸೇವಿಸಿಕೊಂಡು ಬಂದು ಅದು ಅಲ್ಲಿಯೇ ವಿರಮಿಸುತ್ತದೆ. ಬೆಕ್ಕಿನ ಈ ಶೋಕ ಹೃದಯಕ್ಕೆ ವೇದನೆಯನ್ನು ನೀಡುತ್ತದೆ ಎನ್ನುತ್ತಾರೆ ಕೆಲಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೊವಿಡ್ ಲಸಿಕೆಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ: ಐಸಿಎಂಆರ್ ಮಹತ್ವದ ಸಂದೇಶ

Arecanut price: ಹೊಸ ಅಡಿಕೆಗೆ ಮತ್ತೆ ಬೆಲೆ ಇಳಿಕೆ, ಬೆಳೆಗಾರರಿಗೆ ನಿರಾಸೆ

Gold Price: ಮತ್ತೆ ಲಕ್ಷದ ಗಡಿ ದಾಟಿದ ಚಿನ್ನದ ಬೆಲೆ

ಆಟೋ ದರ ಏರಿಕೆಗೆ ಸರ್ಕಾರದ ಸಿದ್ಧತೆ: ಹಿಂಗಾದ್ರೆ ಬದುಕೋದು ಹೇಗೆ ಸರ್ ಎಂದ ಜನ

ರೈಲು ದರ ಹೆಚ್ಚಿಸಿದ್ದು ಸರಿಯಲ್ಲ ಸಿದ್ದರಾಮಯ್ಯ: ಬಿಎಂಟಿಸಿಯಲ್ಲಿ ಕೋಟ್ಯಾಧಿಪತಿಗಳು ಹೋಗ್ತಾರಾ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments