Webdunia - Bharat's app for daily news and videos

Install App

ಅಮ್ಮನ ಹಾಲು ಸಿಗದೇ ಅಳುತ್ತಿದ್ದ ಮಗುವಿಗೆ ಈ ಗಗನಸಖಿ ಮಾಡಿದ್ದೇನು ಗೊತ್ತಾ?!

Webdunia
ಮಂಗಳವಾರ, 13 ನವೆಂಬರ್ 2018 (10:35 IST)
ನವದೆಹಲಿ: ಗಗನ ಸಖಿಯರು ವಿಮಾನದಲ್ಲಿ ಪ್ರಯಾಣಿಕರ ಬೇಕು ಬೇಡಗಳನ್ನು ಗಮನಿಸುತ್ತಾರೆ. ಆದರೆ ಅದಕ್ಕೊಂದು ಮಿತಿಯಿರುತ್ತದೆ. ಆದರೆ ಈ ಗಗನ ಸಖಿ ಮಾಡಿದ ಕೆಲಸ ನೋಡಿ ಇದೀಗ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಫಿಲಿಪ್ಪೈನ್ಸ್  ಏರ್ ಲೈನ್ಸ್ ವಿಮಾನದ ಗಗನ ಸಖಿ ಪಟ್ರಿಶಾ ಒರ್ಗಾನೋ ಎಂಬಾಕೆ ಅಮ್ಮನ ಹಾಲು ಸಿಗದೇ ಅಳುತ್ತಿದ್ದ ಮಗುವನ್ನು ತನ್ನ ಮಡಿಲಲ್ಲಿ ಹಾಕಿಕೊಂಡು ತನ್ನ ಎದೆ ಹಾಲುಣಿಸಿ ಸಮಾಧಾನಿಸಿದ್ದಾಳೆ. ಇದನ್ನು ಆಕೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.

ಫಿಲಿಪ್ಪೈನ್ಸ್ ವಿಮಾನ ಟೇಕ್ ಆಫ್ ಆದ ಗಳಿಗೆಯಲ್ಲಿ ಒಂದು ಮಗು ವಿಪರೀತ ಅಳುತ್ತಿದ್ದು, ಪಕ್ಕದ ಪ್ರಯಾಣಿಕರಿಗೂ ತೀವ್ರ ಕಿರಿ ಕಿರಿಯಾಗುತ್ತಿದ್ದನ್ನು ಗಮನಿಸಿದೆ. ಆಗ ನಾನು ಆ ಅಮ್ಮನ ಬಳಿ ಹೋಗಿ ಮಗುವಿಗೆ ಹಾಲುಣಿಸಿ ಮಲಗಿಸಿ ಎಂದೆ. ಆದರೆ ಆ ತಾಯಿ ಕಣ್ಣೀರು ಹಾಕಿ ನನ್ನಲ್ಲಿ ಹಾಲಿಲ್ಲ ಎಂದರು.

ಹೀಗಾಗಿ ಬೇರೆ ದಾರಿ ಕಾಣದೆ ಮಗುವನ್ನು ನಾನು ಎತ್ತಿಕೊಂಡು ಅದು ನಿದ್ರಿಸುವವರೆಗೂ ನನ್ನ ಎದೆ ಹಾಲುಣಿಸಿದೆ. ಇದರಿಂದ ಮಗುವೂ ನಿದ್ರಿಸಿತು, ಆ ಮಗುವಿನ ತಾಯಿಯೂ ಹೃದಯ ಪೂರ್ವಕವಾಗಿ ಧನ್ಯವಾದ ಹೇಳಿದರು. ಎದೆ ಹಾಲು ನೀಡಿದ ಆ ದೇವರಿಗೆ ದೊಡ್ಡ ಧನ್ಯವಾದ ಎಂದು ಒರ್ಗಾನೋ ಬರೆದುಕೊಂಡಿದ್ದಾರೆ. ಈಕೆಯ ಪೋಸ್ಟ್ ಇದೀಗ ವೈರಲ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Suhas Shetty Murder: ತನಿಖೆಯಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲೇನಿದೆ

ರೇಣುಕಾಸ್ವಾಮಿ ತಂದೆ ಕಣ್ಣೀರು: ಮಾನವೀಯತೆಯಿಂದಾದ್ರೂ ಸೊಸೆಗೆ ಸರ್ಕಾರಿ ನೌಕರಿ ಕೊಡಿಸಿ

ಯಡಿಯೂರಪ್ಪ ಮನೆ ಮದುವೆಯಲ್ಲಿ ಸಿದ್ದರಾಮಯ್ಯ: ಒಳಗೊಳಗೆ ಎಲ್ಲಾ ಚೆನ್ನಾಗೇ ಇರ್ತೀರಾ ನೆಟ್ಟಿಗರ ಟಾಂಗ್

Suhas Shetty: ಸುಹಾಸ್ ಶೆಟ್ಟಿ ಕೇಸ್ ಎನ್ಐಎಗೆ ವಹಿಸಿದ ಕೇಂದ್ರ: ಕರಾವಳಿಯ ಹತ್ಯಾಕಾಂಡಗಳೆಲ್ಲಾ ಬಯಲಾಗುತ್ತಾ

Bengaluru Stampede: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಮುಂದಿನ ಸುದ್ದಿ
Show comments