Webdunia - Bharat's app for daily news and videos

Install App

ಪ್ರವಾಹ ಪರಿಸ್ಥಿತಿ ತಡೆಗೆ ಪಾಕ್‌ ರಕ್ಷಣಾ ಸಚಿವ ನೀಡಿದ ಸಲಹೆಗೆ ವಿಶ್ವವೇ ಶಾಕ್‌

Sampriya
ಮಂಗಳವಾರ, 2 ಸೆಪ್ಟಂಬರ್ 2025 (18:30 IST)
Photo Credit X
ಇಸ್ಲಾಮಾಬಾದ್: ಪ್ರವಾಹದ ನೀರು ಆಶೀರ್ವಾದ ಇದ್ದ ಹಾಗೇ. ಅದನ್ನು ತಮ್ಮ ತಮ್ಮ ಮನೆಯಲ್ಲಿ ಶೇಖರಿಸಿಡಿ. ಮಳೆಯನ್ನು ಆಶೀರ್ವಾದ ಎಂದು ಪರಿಗಣಿಸಿ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖಾವಾಜ್ ಆಸಿಫ್‌ ಸಲಹೆಯನ್ನು ನೀಡಿದ್ದಾರೆ.  

ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಪಾಕಿಸ್ತಾನದ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ವಿಚಿತ್ರ ಪರಿಹಾರವನ್ನು ನೀಡಿರುವುದು ಇದೀಗ ಸುದ್ದಿಗೆ ಕಾರಣವಾಗಿದೆ. 

ತಗ್ಗು ಪ್ರದೇಶಗಳಲ್ಲಿ ವಾಸಿಸುವ ಪಾಕಿಸ್ತಾನಿಗಳು ಪ್ರವಾಹದ ನೀರನ್ನು ಚರಂಡಿಗಳಿಗೆ ಹೋಗಲು ಬಿಡುವ ಬದಲು ಕಂಟೈನರ್‌ಗಳಲ್ಲಿ ಶೇಖರಿಸಿಡಿ. ಆ ನೀರನ್ನು ದೇವರ ಆಶೀರ್ವಾದ ಎಂದು ಭಾವಿಸಿ ಎಂದಿದ್ದಾರೆ. 

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಾದ್ಯಂತ ಸುರಿದ ಭಾರೀ ಮಳೆಗೆ ಭಾರೀ ಪ್ರವಾಹ ಉಂಟಾಗಿ, ಸಾವಿರಕ್ಕೂ ಅಧಿಕ ಹಳ್ಳಿಗಳಿಗೆ ಹಾನಿಯಾಗಿದೆ. 

ಪಾಕಿಸ್ತಾನದ ದುನ್ಯಾ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆಸಿಫ್, "ಪ್ರವಾಹದಂತಹ ಪರಿಸ್ಥಿತಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜನರು ಪ್ರವಾಹದ ನೀರನ್ನು ಮನೆಗೆ ತೆಗೆದುಕೊಂಡು ಹೋಗಬೇಕು" ಎಂದು ಹೇಳಿದರು.

"ಜನರು ಈ ನೀರನ್ನು ತಮ್ಮ ಮನೆಗಳಲ್ಲಿ, ಟಬ್‌ಗಳಲ್ಲಿ ಮತ್ತು ಪಾತ್ರೆಗಳಲ್ಲಿ ಸಂಗ್ರಹಿಸಬೇಕು. ನಾವು ಈ ನೀರನ್ನು ಆಶೀರ್ವಾದದ ರೂಪದಲ್ಲಿ ನೋಡಬೇಕು ಮತ್ತು ಆದ್ದರಿಂದ ಅದನ್ನು ಸಂಗ್ರಹಿಸಬೇಕು" ಎಂದು ಅವರು ಹೇಳಿದರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮದ್ದೂರಿನಲ್ಲಿ‌ ಗುಡುಗಿದ ಹಿಂದೂ ನಾಯಕ ಬಸನಗೌಡ ಪಾಟೀಲ್ ವಿರುದ್ಧ ಕೇಸ್

ಮದ್ದೂರು ಗಲಭೆ ಬೆನ್ನಲ್ಲೇ ಮಂಡ್ಯ ಹೆಚ್ಚುವರಿ ಎಸ್‌ಪಿ ವರ್ಗಾವಣೆ

ಅಮೆರಿಕಾದ ಬಲಪಂಥಿಯ ನಾಯಕ ಚಾರ್ಲಿ ಹಂತಕನ ಬಂಧನ

ಸ್ಪೈಸ್‌ಜೆಟ್ ಟೇಕ್ ಆಫ್ ಆದ ಕ್ಷಣದಲ್ಲೇ ಕಳಚಿದ ಚಕ್ರ, ಮುಂದೇನಾಯ್ತು ಗೊತ್ತಾ

ಧರ್ಮಸ್ಥಳ: ಬುರುಡೆ ತಂದ ಚಿನ್ನಯ್ಯಗೆ ಸದ್ಯ ಜೈಲೇ ಗತಿ

ಮುಂದಿನ ಸುದ್ದಿ
Show comments